Author: admin

ಶಿವಮೊಗ್ಗ: ನ್ಯಾಶನಲ್‌ ಸೆಂಟರ್‌ ಫಾರ್‌ ಕೋ ಆಪರೇಟಿವ್‌ ಎಜುಕೇಶನ್‌(ಎನ್‌ಸಿಸಿಇ), ತೋಟಗಾರಿಕಾ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಎರಡು ದಿನಗಳ ನಾಯಕತ್ವ ಅಭಿವೃದ್ದಿ ತರಬೇತಿ ಹಾಗೂ ಒಂದು ದಿನದ ಅಧ್ಯಯನ ಪ್ರವಾಸ ಕಾರ್ಯಕ್ರಮ ಮಾರ್ಚ್‌ 22 ಮತ್ತು 23ರಂದು ಶಿಕಾರಿಪುರದ ದಿ.ಅರ್ಬನ್‌ ಬ್ಯಾಂಕ್‌ನ ರಜತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. https://chat.whatsapp.com/EbVKVnWB6rlHT1mWtsgbch ಮಾರ್ಚ್‌ 22ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ ಡಾ.ಬಿ.ಡಿ.ಭೂಕಾಂತ್‌ ಉದ್ಘಾಟಿಸಲಿದ್ದಾರೆ. ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ಸಂಗಪ್ಪ ಎಚ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್‌ ಕಲ್ಮನೆ, ಶಿವಮೊಗ್ಗ ಜಿಲ್ಲಾ ಕೇಂದ್ರ…

Read More

ಪಾರ್ಲಿಮೆಂಟ್‌ ಸ್ಥಾಯಿ ಸಮಿತಿ ಶಿಫಾರಸು ನವದೆಹಲಿ: ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಸಹಕಾರ ಚುನಾವಣಾ ಪ್ರಾಧಿಕಾರ ಸ್ಥಾಪಿಸಲು ಪ್ರೋತ್ಸಾಹಿಸಬೇಕು ಎಂದು ಸಹಕಾರ ಸಚಿವಾಲಯಕ್ಕೆ ಅನುದಾನ ಬೇಡಿಕೆಯ ತಮ್ಮ ಒಂಬತ್ತನೇ ವರದಿಯಲ್ಲಿ ಪಾರ್ಲಿಮೆಂಟ್‌ನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. https://chat.whatsapp.com/EbVKVnWB6rlHT1mWtsgbch ಸಹಕಾರ ಚುನಾವಣಾ ಪ್ರಾಧಿಕಾರ ಸ್ಥಾಪನೆಯಾದರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಇತರ ಸಹಕಾರ ಸಂಘಗಳ ಚುನಾವಣೆಗಳನ್ನು ಅದು ಮೇಲ್ವಿಚಾರಣೆ ಮಾಡಲಿದೆ. ಸಹಕಾರಿ ಸಂಘಗಳಲ್ಲಿ ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆಗಳ ಅಗತ್ಯವನ್ನು ಗಮನಿಸಿ ಸ್ಥಾಯಿ ಸಮಿತಿಯು, ಸಹಕಾರ ಚುನಾವಣಾ ಪ್ರಾಧಿಕಾರದ ಅಗತ್ಯವನ್ನು ಒತ್ತಿ ಹೇಳಿದೆ. ಈ ಮಧ್ಯೆ ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸಲು, ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002ರ ಅಡಿಯಲ್ಲಿ ಸ್ವತಂತ್ರ ಸಹಕಾರಿ ಚುನಾವಣಾ ಪ್ರಾಧಿಕಾರ ಸ್ಥಾಪಿಸಿರುವ ಬಗ್ಗೆ ಸಮಿತಿ ತೃಪ್ತಿ ವ್ಯಕ್ತಪಡಿಸಿದೆ. ಮತದಾರರ ಪಟ್ಟಿಗಳ ತಯಾರಿಕೆಗೆ ಸಂಬಂಧಿಸಿದ ವಿಷಯಗಳನ್ನು ಮೇಲ್ವಿಚಾರಣೆ ಮಾಡುವುದು, ನಿರ್ದೇಶಿಸುವುದು ಮತ್ತು ನಿಯಂತ್ರಿಸುವ ಜವಾಬ್ದಾರಿಯನ್ನು ಈ ಪ್ರಾಧಿಕಾರ ಹೊಂದಿದೆ. ಬಹು-ರಾಜ್ಯ…

Read More

ಮಹಾರಾಷ್ಟ್ರದ ಮರಾಠವಾಢ ಡೈರಿ ಮುಂದಿನ ಐದು ವರ್ಷಗಳಲ್ಲಿ ಹಾಲು ಖರೀದಿ ಪ್ರಮಾಣ 11 ಲಕ್ಷ ಕಿಲೋಗ್ರಾಂಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆ ಮುಂಬೈ : ಮಹಿಳೆಯರದೇ ನೇತೃತ್ವದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಮರಾಠವಾಢ ಹಾಲು ಉತ್ಪಾದಕ ಸಂಸ್ಥೆ (ಎಂಪಿಒ) ಮುಂದಿನ ಐದು ವರ್ಷಗಳಲ್ಲಿ ತನ್ನ ದೈನಂದಿನ ಹಾಲು ಖರೀದಿ ಪ್ರಮಾಣವನ್ನು 11 ಲಕ್ಷ ಕಿಲೋಗ್ರಾಂಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ವಾರ್ಷಿಕ ರೂ. 1,800 ಕೋಟಿ ವಹಿವಾಟು ಸಾಧಿಸುವ ಗುರಿ ಇಟ್ಟುಕೊಂಡಿದೆ. https://chat.whatsapp.com/EbVKVnWB6rlHT1mWtsgbch ಈ ಉಪಕ್ರಮ ವಿದರ್ಭ ಮತ್ತು ಮರಾಠವಾಡ ಡೈರಿ ಅಭಿವೃದ್ಧಿ ಯೋಜನೆಯ (ವಿಎಂಡಿಡಿಪಿ) ಅಧೀನದಲ್ಲಿ ನಡೆಯುತ್ತಿದೆ. 2013ರಲ್ಲಿ ಎನ್‌ಡಿಡಿಬಿ ಮತ್ತು ಮಹಾರಾಷ್ಟ್ರ ಸರ್ಕಾರ ಬರಪೀಡಿತ ಪ್ರದೇಶಗಳಾದ ವಿದರ್ಭ ಮತ್ತು ಮರಾಠವಾಡಾದಲ್ಲಿ ಡೈರಿ ಅಭಿವೃದ್ಧಿ ಪ್ರಾರಂಭಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ರೈತರಿಗೆ ಪರ್ಯಾಯ, ದೀರ್ಘಕಾಲೀನ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು ಇದರ ಗುರಿಯಾಗಿತ್ತು. ಈ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ ಹೈನುಗಾರಿಕೆ ಹೆಚ್ಚು ಸ್ಥಿರ ಆದಾಯದ ಮೂಲವನ್ನು ಒದಗಿಸುತ್ತದೆಯಾದ್ದರಿಂದ ಈ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿತ್ತು.…

Read More

ಬಂಟ್ವಾಳ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್‌ ಎಚ್‌ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮನೋರಂಜನ್‌ ಕೆ.ಆರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಿಟರ್ನಿಂಗ್‌ ಅಧಿಕಾರಿ ಶಿವಲಿಂಗಯ್ಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್‌ ಕೆ ಸಹಕರಿಸಿದರು. https://chat.whatsapp.com/EbVKVnWB6rlHT1mWtsgbch ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು: ಕೇಶವ ಎ., ಗೋವರ್ಧನ್ ಕುಮಾರ್ ಐ, ಭಾಸ್ಕರ ಶೆಟ್ಟಿ, ರಾಮದಾಸ್ ಶೆಣೈ ವಿ., ಮೋಹನ್ ಕೆ.ಎಸ್. ವಿಶ್ವನಾಥ ಎಂ., ತಿರುಮಲೇಶ್ವರ ಭಟ್ ಪಿ., ಜಯಂತಿ ಹೆಚ್.ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್., ದಿವಾಕರ ವಿ., ಸತೀಶ್ ಪಿ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ 10 ಗ್ರಾಮ್‌ಗೆ 32 ರೂ. ಇದ್ದ ಚಿನ್ನಕ್ಕೆ ಈಗ 91,000 ರೂ.!   ನವದೆಹಲಿ: ದಿನೇದಿನೆ ಏರುಗತಿಯಲ್ಲಿ ಸಾಗುತ್ತಿರುವ ಬಂಗಾರದ ದರ ಸಾರ್ವಕಾಲಿಕ ದಾಖಲೆಯ ದರಕ್ಕೆ ಏರಿಕೆಯಾಗಿದೆ. ಅಖಿಲ ಭಾರತ ಸರಾಫ ಆಸೋಸಿಯೇಶನ್‌ ಪ್ರಕಾರ ದೆಹಲಿಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,300 ರೂ. ಏರಿಕೆಯಾಗಿ, 90,750 ರೂ.ಗೆ ತಲುಪಿದೆ. ಇದು ಚಿನ್ನದ ಬೆಲೆಯಲ್ಲಿ ಇದುವರೆಗಿನ ಸಾರ್ವಕಾಲಿಕ ದಾಖಲೆ. https://chat.whatsapp.com/EbVKVnWB6rlHT1mWtsgbch ಸತತ ಏರುಗತಿಯಲ್ಲಿ ಸಾಗುತ್ತಿರುವ ಬಂಗಾರದ ಬೆಲೆ ಮತ್ತೆ ಮತ್ತೆ ಏರಿಕೆಯಾಗಲು ಅಮೆರಿಕ ಅನುಸರಿಸುತ್ತಿರುವ ಸುಂಕ ನೀತಿ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರಸಕ್ತ ವರ್ಷವೇ ಅಂದರೆ ಎರಡೂವರೆ ತಿಂಗಳಲ್ಲೇ 11,360 ರೂ. ಹೆಚ್ಚಳವಾಗಿದೆ. ಜನವರಿ 1ರಂದು 79,390 ರೂ. ಇದ್ದ ಚಿನ್ನದ ಬೆಲೆ ಮಾ.17ಕ್ಕೆ 90,750 ರೂ.ಗೆ ಏರಿಕೆ ಕಂಡಿದೆ! ಅಮೆರಿಕ ಅನುಸರಿಸುತ್ತಿರುವ ಸುಂಕ ನೀತಿ, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ, ಜಾಗತಿಕ ಆರ್ಥಿಕ ಬೆಳವಣಿಗೆ ದರ ಕುಸಿತ ಕಾಣುತ್ತಿರುವುದು ಇತ್ಯಾದಿ…

Read More

ನವದೆಹಲಿ: ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಡಿಜಿಟಲ್ ಉಪಕ್ರಮಗಳಿಗಾಗಿ ಕೊಡಮಾಡುವ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ 2025 ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆದ್ದಿಕೊಂಡಿದೆ. https://chat.whatsapp.com/EbVKVnWB6rlHT1mWtsgbch ಜನವರಿ 2023ರಲ್ಲಿ ಆರ್‌ಬಿಐ ಪ್ರಾರಂಭಿಸಿದ ಸಾರಥಿ ಮತ್ತು ಪ್ರವಾಹ್‌ ಎಂಬ ಡಿಜಿಟಲ್‌ ವ್ಯವಸ್ಥೆಯು ಆರ್‌ಬಿಐನ ಆಂತರಿಕ ಕಾರ್ಯಪ್ರವಾಹಗಳನ್ನು ಡಿಜಿಟಲೀಕರಣಗೊಳಿಸಿತು. ದಾಖಲೆ ಸಂಗ್ರಹ, ದಾಖಲೆ ನಿರ್ವಹಣೆ ಮತ್ತು ಡೇಟಾ ವಿಶ್ಲೇಷಣೆಯನ್ನು ಈ ವ್ಯವಸ್ಥೆಗಳ ಮೂಲಕ ಹೆಚ್ಚಿಸಿತು. 2024ರ ಮೇ ತಿಂಗಳಲ್ಲಿ ಇದು ಬಾಹ್ಯ ಬಳಕೆದಾರರಿಗಾಗಿ ನಿಯಂತ್ರಕ ಅಪ್ಲಿಕೇಶನ್‌ಗಳನ್ನು ವ್ಯವಸ್ಥಿತಗೊಳಿಸಿತು. ಸಲ್ಲಿಕೆಗಳನ್ನು ಸಾರಥಿ ವ್ಯವಸ್ಥೆಯಲ್ಲಿ ಸಂಯೋಜಿಸಿತು. ಈ ಪ್ರಶಸ್ತಿಯು ಸಾರಥಿ ವ್ಯವಸ್ಥೆಯ ಮೂಲಕ ವ್ಯಾಪಕ ತರಬೇತಿ ಮತ್ತು ಹಿರಿಯ ನೋಡಲ್ ಅಧಿಕಾರಿಗಳು ಮತ್ತು ಸಾರಥಿ ಮಿತ್ರರಿಂದ ಬೆಂಬಲ ಒಳಗೊಂಡಂತೆ ಆರ್‌ಬಿಐನ ಸಹಯೋಗದ ಪ್ರಯತ್ನಗಳನ್ನು ಗುರುತಿಸಿ ಡಿಜಿಟಲ್ ಕಾರ್ಯಾಚರಣೆಗಳಿಗೆ ಸುಗಮ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಶೂನ್ಯ ಕಸದ ಅಡುಗೆ ಮನೆ ನಿರ್ವಹಣೆಯ ಬಗ್ಗೆ ಅನುಭವ ಹಂಚಿಕೊಂಡ ಡಾ.ತೇಜಸ್ವಿನಿ ಅನಂತ್‌ ಕುಮಾರ್‌ ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (ಕೆಎಸ್‌ಎಸ್‌ಎಫ್‌ಸಿಎಲ್‌) ವತಿಯಿಂದ ಅಂತಾರಾಷ್ಟ್ರೀಯ ಇತ್ತೀಚೆಗೆ ಮಹಿಳಾ ದಿನ ಆಚರಿಸಲಾಯಿತು. ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ 135 ಮಹಿಳೆಯರು ಭಾಗವಹಿಸಿದ್ದರು. https://chat.whatsapp.com/EbVKVnWB6rlHT1mWtsgbch ಅದಮ್ಯ ಚೇತನ ಫೌಂಡೇಶನ್‌ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಒಂದು ದಶಕಕ್ಕೂ ಹೆಚ್ಚು ಕಾಲ ತ್ಯಾಜ್ಯವನ್ನು ಪರ್ಯಾಯ ಇಂಧನದ ಮೂಲವಾಗಿ ಬ್ರಿಕೆಟ್‌ ಆಗಿ ಪರಿವರ್ತಿಸುವ ಮೂಲಕ ಶೂನ್ಯ-ಕಸ ಅಡುಗೆ ಮನೆಯನ್ನು ನಿರ್ವಹಿಸುವ ರೀತಿಯ ಅನುಭವ ಹಂಚಿಕೊಂಡರು. ಬದಲಾವಣೆಯು ಮನೆಯಿಂದಲೇ ಪ್ರಾರಂಭವಾಗಬೇಕು ಎಂಬ ಅಂಶವನ್ನು ವಿವರಿಸಿ ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಜಿ.ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಕೃಷಿ ನಿರ್ದೇಶಕಿ ಮತ್ತು ಪಶುಸಂಗೋಪನಾ ಆಯುಕ್ತೆ ಶ್ರೀರೂಪಾ ಮುಖ್ಯ ಅತಿಥಿಯಾಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಐವರು…

Read More

ಕೊಚ್ಚಿ: ಕೇರಳದ ಕರುವನ್ನೂರ್ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 15ರಂದು ವಿಚಾರಣೆಗೆ ಬರುವಂತೆ ಸಿಪಿಐ(ಎಂ) ಸಂಸದ ಕೆ.ರಾಧಾಕೃಷ್ಣನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದೆ. https://chat.whatsapp.com/EbVKVnWB6rlHT1mWtsgbch ಅಲತ್ತೂರು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕೆ.ರಾಧಾಕೃಷ್ಣನ್‌ ಅವರು, ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಲು ಸಮನ್ಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ಕರುವನ್ನೂರ್ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ 150 ಕೋಟಿ ರೂ. ಮೌಲ್ಯದ ಅಕ್ರಮಗಳು ನಡೆದಿದೆ ಎಂಬ ಆರೋಪದ ಮೇಲೆ 2021ರ ಜುಲೈನಲ್ಲಿ ತ್ರಿಶೂರ್‌ನಲ್ಲಿ ಕೇರಳ ಪೊಲೀಸ್ ಅಪರಾಧ ವಿಭಾಗವು 16 ಎಫ್‌ಐಆರ್‌ ದಾಖಲಿಸಿತ್ತು. ಈ ಬಗ್ಗೆ ಇಡಿ ತನಿಖೆ ಕೈಗೊಂಡಿದ್ದು, ಈ ಸಹಕಾರಿ ಸಂಘದ ಸದಸ್ಯರ ಅರಿವಿಲ್ಲದೆ ಒಂದೇ ಆಸ್ತಿಯ ಬಗ್ಗೆ ಹಲವು ಬಾರಿ ಈ ಸಹಕಾರಿ ಬ್ಯಾಂಕ್‌ನಿಂದ ನಕಲಿ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಕಂಡುಬಂದಿದೆ. ಸದಸ್ಯರಲ್ಲದವರಿಗೆ ಇತರ ಸದಸ್ಯರ ಹೆಸರಿನಲ್ಲಿ ಬೇನಾಮಿ ಸಾಲಗಳನ್ನು ಮಂಜೂರು…

Read More

ನವದೆಹಲಿ: ಸಹಕಾರ ಸಂಘಗಳನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ, 2005ರ ಅಡಿಯಲ್ಲಿ ತರುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಆರ್‌ಐಟಿ ಕಾನೂನು ಸಾರ್ವಜನಿಕ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ, ಆದ ಕಾರಣ ಕೋ ಆಪರೇಟಿವ್‌ ಸೊಸೈಟಿಗಳನ್ನು ಇದರಿಂದ ಹೊರಗಿಡಲಾಗಿದೆ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಆದಾಗ್ಯೂ, 2023ರಲ್ಲಿ ಪರಿಷ್ಕರಿಸಲಾದ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002ರ ತಿದ್ದುಪಡಿ ಮಾಡಿದ ಸೆಕ್ಷನ್ 106ರ ಅಡಿಯಲ್ಲಿ, ಎಲ್ಲಾ ಬಹು-ರಾಜ್ಯ ಸಹಕಾರ ಸಂಘಗಳು ಸಹಕಾರಿ ಮಾಹಿತಿ ಅಧಿಕಾರಿಯನ್ನು ನೇಮಿಸುವ ನಿಬಂಧನೆಯನ್ನು ಪರಿಚಯಿಸಲಾಗಿದೆ ಎಂದು ಅಮಿತ್‌ ಶಾ ಹೇಳಿದರು. ಈ ಅಧಿಕಾರಿಗಳು ಸಂಘದ ಸದಸ್ಯರಿಗೆ ಅದರ ವ್ಯವಹಾರಗಳು ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸಹಕಾರಿ ಸಂಘಗಳ ಸದಸ್ಯರು ತಮ್ಮ ಸಂಸ್ಥೆಗಳ ಬಗ್ಗೆ ನಿರ್ಣಾಯಕ ಮಾಹಿತಿ ಪಡೆಯುವ ಅವಕಾಶ ಹೊಂದಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವಾಗ ಬಹು-ರಾಜ್ಯ ಸಹಕಾರಿ…

Read More

ನವದೆಹಲಿ: ರಾಷ್ಟ್ರೀಯ ಸಹಕಾರಿ ದತ್ತಾಂಶಗಳ (NCD) ಪ್ರಕಾರ, ಜನವರಿ 1, 2025ರಿಂದ ಮಾರ್ಚ್ 1, 2025ರವರೆಗೆ ಅಂತಾರಾಷ್ಟ್ರೀಯ ಸಹಕಾರಿ ವರ್ಷದಡಿ ದೇಶಾದ್ಯಂತ 1,349 ಸಹಕಾರಿ ಸಂಘಗಳನ್ನು ನೋಂದಾಯಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಹೊಸದಾಗಿ ನೋಂದಾಯಿಸಲಾದ ಸಹಕಾರಿ ಸಂಘಗಳಲ್ಲಿ, ಬಿಹಾರ 523 ಸಂಘಗಳ ನೋಂದಣಿಯೊಂದಿಗೆ ಮುಂಚೂಣಿಯಲ್ಲಿದೆ, 179 ಸಂಘಗಳೊಂದಿಗೆ ಛತ್ತೀಸ್‌ಗಢ ಮತ್ತು 79 ಸಂಘಗಳೊಂದಿಗೆ ಅಸ್ಸಾಂ ನಂತರದ ಸ್ಥಾನಗಳಲ್ಲಿವೆ. NCD ಸಾರ್ವಜನಿಕವಾಗಿ https://cooperatives.gov.in ನಲ್ಲಿ ಲಭ್ಯವಿದೆ ಮತ್ತು ಸಹಕಾರಿ ಚಳವಳಿಯನ್ನು ಬಲಪಡಿಸಲು ನೀತಿ ನಿರೂಪಕರಿಗೆ ಅಮೂಲ್ಯ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಡೇಟಾಬೇಸ್ ಸ್ಥಳ, ಸದಸ್ಯತ್ವ, ಆರ್ಥಿಕ ಚಟುವಟಿಕೆಗಳು ಮತ್ತು ಸಂಪರ್ಕಗಳಂತಹ ಪ್ರಮುಖ ವಿವರಗಳನ್ನು ಸೆರೆಹಿಡಿಯುತ್ತದೆ, ಅಧಿಕಾರಿಗಳು ವ್ಯಾಪ್ತಿಗೆ ಒಳಪಡದ ಗ್ರಾಮ ಪಂಚಾಯತ್‌ಗಳು ಸೇರಿದಂತೆ ಸಹಕಾರಿ ವ್ಯಾಪ್ತಿಯಲ್ಲಿನ ಅಂತರವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More