Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕೆಎಸ್‌ಎಸ್‌ಎಫ್‌ಸಿಎಲ್‌ ಮಹಿಳಾ ದಿನ ಆಚರಣೆ, ಐವರು ಸಾಧಕಿಯರಿಗೆ ಸನ್ಮಾನ
    News

    ಕೆಎಸ್‌ಎಸ್‌ಎಫ್‌ಸಿಎಲ್‌ ಮಹಿಳಾ ದಿನ ಆಚರಣೆ, ಐವರು ಸಾಧಕಿಯರಿಗೆ ಸನ್ಮಾನ

    adminBy adminMarch 17, 2025

    ಶೂನ್ಯ ಕಸದ ಅಡುಗೆ ಮನೆ ನಿರ್ವಹಣೆಯ ಬಗ್ಗೆ ಅನುಭವ ಹಂಚಿಕೊಂಡ ಡಾ.ತೇಜಸ್ವಿನಿ ಅನಂತ್‌ ಕುಮಾರ್‌

    ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (ಕೆಎಸ್‌ಎಸ್‌ಎಫ್‌ಸಿಎಲ್‌) ವತಿಯಿಂದ ಅಂತಾರಾಷ್ಟ್ರೀಯ ಇತ್ತೀಚೆಗೆ ಮಹಿಳಾ ದಿನ ಆಚರಿಸಲಾಯಿತು. ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ 135 ಮಹಿಳೆಯರು ಭಾಗವಹಿಸಿದ್ದರು.

    https://chat.whatsapp.com/EbVKVnWB6rlHT1mWtsgbch
    ಅದಮ್ಯ ಚೇತನ ಫೌಂಡೇಶನ್‌ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಒಂದು ದಶಕಕ್ಕೂ ಹೆಚ್ಚು ಕಾಲ ತ್ಯಾಜ್ಯವನ್ನು ಪರ್ಯಾಯ ಇಂಧನದ ಮೂಲವಾಗಿ ಬ್ರಿಕೆಟ್‌ ಆಗಿ ಪರಿವರ್ತಿಸುವ ಮೂಲಕ ಶೂನ್ಯ-ಕಸ ಅಡುಗೆ ಮನೆಯನ್ನು ನಿರ್ವಹಿಸುವ ರೀತಿಯ ಅನುಭವ ಹಂಚಿಕೊಂಡರು. ಬದಲಾವಣೆಯು ಮನೆಯಿಂದಲೇ ಪ್ರಾರಂಭವಾಗಬೇಕು ಎಂಬ ಅಂಶವನ್ನು ವಿವರಿಸಿ ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.


    ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಜಿ.ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಕೃಷಿ ನಿರ್ದೇಶಕಿ ಮತ್ತು ಪಶುಸಂಗೋಪನಾ ಆಯುಕ್ತೆ ಶ್ರೀರೂಪಾ ಮುಖ್ಯ ಅತಿಥಿಯಾಗಿದ್ದರು.
    ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಐವರು ಮಹಿಳೆಯರನ್ನು ಸನ್ಮಾನಿಸಲಾಯಿತು. ಸಹಕಾರಿ ಕ್ಷೇತ್ರದ ಸಾಧನೆಗಾಗಿ ನಾಗಮಣಿ, ಸಾಮಾಜಿಕ ಕಾರ್ಯಗಳಲ್ಲಿ ಸುಶೀಲಮ್ಮ, ಕಲಾ ಕ್ಷೇತ್ರದಲ್ಲಿ ದಿವ್ಯಶ್ರೀ, ಆರೋಗ್ಯ ಸೇವೆಗಾಗಿ ಅಲಿಬಿನಾ ಶಂಕರ್ ಮತ್ತು ಸೇವಾ ಕ್ಷೇತ್ರದಲ್ಲಿನ ಸಮರ್ಪಣೆಗಾಗಿ ಮೇಘನಾ ಜೋಯಿಶ್ ಅವರನ್ನು ಸನ್ಮಾನಿಸಲಾಯಿತು. ಅಧಿವೇಶನದಲ್ಲಿ ಸರ್ಕಾರಿ ಯೋಜನೆಗಳು ಮತ್ತು ಮಹಿಳೆಯರಿಗೆ ಸಾಮಾಜಿಕ-ಆರ್ಥಿಕ ಸಬಲೀಕರಣ ಅವಕಾಶಗಳ ಕುರಿತು ಸಂವಾದ, ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ನಿರ್ದೇಶಕಿ ಭಾರತಿ ಜಿ. ಭಟ್ ಅಧ್ಯಕ್ಷತೆ ವಹಿಸಿದ್ದರು, ಡಾ.ಮೀನಾಕ್ಷಿ ಖಾಂಡಿ ಮಠ, ಸೌಮ್ಯ ಮತ್ತು ಮಾನಸ ಕೃಷ್ಣಪ್ಪ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಾರೋಪದಲ್ಲಿ ಸಹಕಾರಿ ಸಂಘಗಳ ಉಪ ನಿಬಂಧಕಿ ಗಗನಾ ಕೆ, ಕೆಎಸ್‌ಎಸ್‌ಎಫ್‌ಸಿಎಲ್ ನಿರ್ದೇಶಕಿ ಶೈಲಜಾ ಥಪಲಿ ಮುಖ್ಯ ಅತಿಥಿಗಳಾಗಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Cooperative Cooperative Department Dr. Meenakshi Khandi Math Dr. Tejaswini Ananth Kumar G. Nanjana Gowda Karnataka State Souharda Federal Cooperative Ltd KSSFCL Sahakara Spandana Smt. Manasa Krishnappa Smt. Sowmya Souharda cooperatives Souharda Sahakari Women day
    Previous Articleಸಹಕಾರಿ ಬ್ಯಾಂಕ್‌ ಅಕ್ರಮಕ್ಕೆ ಸಂಬಂಧಿಸಿ ಸಂಸದರಿಗೆ ಸಮನ್ಸ್‌ ನೀಡಿದ ಜಾರಿ ನಿರ್ದೇಶನಾಲಯ
    Next Article ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.