Author: admin

ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಈ ಬಾರಿಯ ಧ್ಯೇಯ ಮಂಗಳೂರು: ದೇಶಾದ್ಯಂತ ಸಹಕಾರಿಗಳು 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯಲ್ಲಿ ತೊಡಗಿದ್ದು ನವಂಬರ್‌ 14ರಿಂದ 20ರ ತನಕ ಕಾಶ್ಮೀರದಿಂದ ಕನ್ಯಾಕುಮಾರಿ ತನಕದ ಸಹಕಾರಿಗಳು ಈ ಆಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಹಕಾರಿ ಚಳವಳಿಯ ಬಲವರ್ಧೆನೆಗೆ ಸಹಕಾರ ಸಪ್ತಾಹದ ಆಚರಣೆ ಬಹು ಪ್ರಾಮುಖ್ಯವಾದುದು. https://chat.whatsapp.com/Ge11n7QCiMj5QyPvCc0H19 ದೇಶದ ಸಹಕಾರಿಗಳ ಪ್ರಮುಖ ಸಂಸ್ಥೆ ಎನ್‌ಸಿಯುಐ(ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟ) ಇಂದಿನಿಂದ (ನವಂಬರ್‌ 14ರಿಂದ) 20ರ ತನಕ ಈ ಆಚರಣೆಯಲ್ಲಿ ತೊಡಗಿದ್ದು ವಿವಿಧ ದಿನಗಳಲ್ಲಿ ವಿವಿಧ ಧ್ಯೇಯಗಳನ್ನಿಟ್ಟುಕೊಂಡು ಆಚರಿಸಲಿದೆ. ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಇದು ಈ ಬಾರಿಯ ಪ್ರಮುಖ ಧ್ಯೇಯವಾಗಿದ್ದು ಏಳು ದಿನ ಏಳು ಧ್ಯೇಯಗಳ ಮೂಲಕ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. ಎನ್‌ಸಿಯುಐ ಅಧ್ಯಕ್ಷ ದಿಲೀಪ್‌ ಸಂಘಾನಿ ನವದೆಹಲಿಯ ಎನ್‌ಸಿಯುಐ ಪ್ರಧಾನ ಕಚೇರಿಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಿದ್ದು ವಿವಿಧ ಕ್ಷೇತ್ರಗಳ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ. ಸಹಕಾರ ಸಪ್ತಾಹದ ಏಳು…

Read More

ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಕೋಡಿಕಲ್‌ ಶಾಖೆ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ, ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರ ಕೋಡಿಕಲ್‌ ಮತ್ತು ಗಿರಿಜಾ ಸರ್ಜಿಕಲ್ಸ್‌ ಜಂಟಿ ಆಶ್ರಯದಲ್ಲಿ ನವಂಬರ್‌ 16ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. https://chat.whatsapp.com/Ge11n7QCiMj5QyPvCc0H19 ಕೋಡಿಕಲ್‌ ಎಸ್‌.ಎನ್‌.ಡಿ.ಪಿ ಮಂದಿರದ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶ, ನಾಡಿಬಡಿತ, ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕ ತಪಾಸಣೆ ಮಾಡಲಾಗುವುದು. ಕೋಡಿಕಲ್‌ ಪರಿಸರದ ನಾಗರಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮೂಲ್ಕಿ: ಮೂಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿಸೆಂಬರ್‌ 22ರಂದು ನಡೆಯುವ ಅರಸು ಕಂಬಳದ ದಿನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಅರಮನೆಯ ಧರ್ಮಚಾವಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಮೂಲ್ಕಿ ಅರಮನೆ ವೆಲ್‌ಫೇರ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿ ಹಳೆಯಂಗಡಿ ಸಹಭಾಗಿತ್ವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಪ್ರಶಸ್ತಿಗೆ 78 ಅರ್ಜಿಗಳು ಬಂದಿದ್ದವು. https://chat.whatsapp.com/Ge11n7QCiMj5QyPvCc0H19 ಪ್ರಶಸ್ತಿ ವಿಜೇತರ ವಿವರ: ಸಾಧನಾ ಪುರಸ್ಕಾರ: ಶ್ರೀ ನಿಪ್ಪಾಣಿ ಪೀಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಮರಣೋತ್ತರ ಪ್ರಶಸ್ತಿ: 1. ಎಚ್ ನಾರಾಯಣ ಸನಿಲ್(ಸಹಕಾರಿ ಕ್ಷೇತ್ರ), 2. ಬಾಬು ಶೆಟ್ಟಿ ಮುಂಬೈ (ಕಂಬಳ ಕ್ಷೇತ್ರ) ಸಂಘ ಸಂಸ್ಥೆಗಳ ವಿಭಾಗ: 1. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, 2. ಶಿವ ಸಂಜೀವಿನಿ ಸುರಗಿರಿ ಸಾಹಿತ್ಯ ಕ್ಷೇತ್ರ: 1. ಎಚ್.ಶಕುಂತಲಾ ಭಟ್ ಹಳೆಯಂಗಡಿ, 2. ಪರಮಾನಂದ ಸಾಲಿಯಾನ್ ಸಸಿಹಿತ್ಲು ಯಕ್ಷಗಾನ ಕ್ಷೇತ್ರ: 1. ಶ್ರೀ…

Read More

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ 5,000 ಪುಸ್ತಕಗಳ ವಿತರಣೆ ಮಂಗಳೂರು: ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸುವುದು ಶಿಕ್ಷಕರ ಕರ್ತವ್ಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು. ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಶ್ರೀನಿವಾಸ ಹೊಟೇಲ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ 50 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಗಳಿಗೆ 5,000 ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. https://chat.whatsapp.com/Ge11n7QCiMj5QyPvCc0H19 ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಮೂಡಿಸುವುದು ಇಂದಿನ ಅವಶ್ಯಕತೆ. ಅವರಲ್ಲಿ ಓದುವ ಹವ್ಯಾಸ ಮೂಡಿಸಲು ಪ್ರಚೋದಿಸಬೇಕು. ಪಾಠದ ಜತೆಗೆ ಇತರ ಉತ್ತಮ ಪುಸ್ತಕಗಳಲ್ಲಿರುವ ವಿಚಾರಗಳ ತುಣುಕುಗಳನ್ನು ಹೇಳಿ ಆಸಕ್ತಿ ಮೂಡಿಸಬೇಕು. ಈ ಮೂಲಕವೂ ಶಿಕ್ಷಕರು ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಲು ಸಾಧ್ಯವಾಗುತ್ತದೆ. ಶಾಲೆಗಳಿಗೆ ಪುಸ್ತಕ ನೀಡುವಂತಹ ಸಮಾಜಸೇವಾ ಕಾರ್ಯ ಮಾದರಿ ಎಂದು ಸ್ವಾಮಿ ಜಿತಕಾಮಾನಂದಜಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಶಾ ಸೌಹಾರ್ದ…

Read More

ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 15ನೇ ವಾರ್ಷಿಕೋತ್ಸವ, ದೀಪಾವಳಿ ಪ್ರಯುಕ್ತ ಅಭಿನಂದನೆ ಕಾರ್ಯಕ್ರಮ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆಯಲ್ಲಿ ಜರುಗಿತು. https://chat.whatsapp.com/Ge11n7QCiMj5QyPvCc0H19 ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಎನ್‌ಆರ್‌ಐ ರವೀಂದ್ರ ಬೇಕಲ್, ಸುಂದರ ಸಾಲ್ಯಾನ್, ಲತಾ ಎನ್. ಆಳ್ವ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಸದಸ್ಯರಾದ ವಸಂತ ಶೆಟ್ಟಿ ಪ್ರಾರ್ಥನೆ ಮಾಡಿದರು. ಸಂಘದ ಸದಸ್ಯ ಜಗದೀಶ್ ಬಾಬುಗುಡ್ಡ, ಕಿಡ್ನಿ ಡಯಾಲಿಸ್‌ಗಾಗಿ ವೈದ್ಯಕೀಯ ನೆರವು ವಿತರಿಸಲಾಯಿತು. 80+ ಹಿರಿಯ ವಿಭಾಗದ ರಾಷ್ಟ್ರೀಯ ಕ್ರೀಡಾಪಟು ಆನಂದ ಸೋನ್ಸ್‌, ಸಾಮಾಜಿಕ –ಧಾರ್ಮಿಕ ಸೇವೆ ಮಾಡುತ್ತಿರುವ ಪ್ರಭಾಕರ್ ಶ್ರೀಯಾನ್, ಚರ್ಚ್ –ದೇವಸ್ಥಾನಗಳಿಗೆ ಉಚಿತ ತೆನೆ ವಿತರಣೆ ಮಾಡುತ್ತಿರುವ ಹೂಬರ್ಟ್ ಡಿಸೋಜ, ಗ್ಯಾರೆಂಟಿ ಯೋಜನೆಯ ಸದಸ್ಯರಾಗಿ ಆಯ್ಕೆಗೊಂಡ ವಿದ್ಯಾ ಬಾಬುಗುಡ್ಡ, ಉಪಮೇಯರ್ ಭಾನುಮತಿ ಸುಧಾಮಣಿ ಇವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಆನಂದ ಸೋನ್ಸ್ , ಪ್ರೇಮಾನಂದ ಶೆಟ್ಟಿ, ರವೀಂದ್ರ ಬೇಕಲ್, ಪ್ರಭಾಕರ್ ಶ್ರೀಯಾನ್, ಹೂಬರ್ಟ್ ಡಿಸೋಜ, ಭಾನುಮತಿ ಮಾತನಾಡಿದರು. ಡಾ|ಕೃಷ್ಣಪ್ರಸಾದ್ ಮಾತನಾಡಿ, ಮಂಗಳೂರು ಸೌಹಾರ್ದ…

Read More

ಗ್ರಾಹಕರ ಅನುಕೂಲಕ್ಕಾಗಿ ಯುಪಿಐ, ಗೂಗಲ್ ಪೇ ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿ: ಅಧ್ಯಕ್ಷ ಅನಿಲ್‌ ಲೋಬೊ ಹೇಳಿಕೆ ಉಡುಪಿ: ಎಂ.ಸಿ.ಸಿ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಉಡುಪಿ ಶಾಖೆಯನ್ನು ಅಜ್ಜರಕಾಡು ಪಾರ್ಕ್ ರಸ್ತೆಯ ಶ್ರೀ ಶಿವಧಾಮ ಕಮರ್ಷಿಯಲ್‌ನ ಸ್ವಂತ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಿಸಲಾಯಿತು. ಉಡುಪಿ ಶಾಖೆಯ ಸ್ಥಳಾಂತರಿತ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಉಡುಪಿಯ ಮದರ್ ಅಫ್ ಸೊರೊವ್ಸ್ ಚರ್ಚ್‌ನ ಧರ್ಮಗುರು ಅತಿವಂದನೀಯ ಫಾದರ್‌ ಚಾಲರ್ಸ್‌ ಮಿನೇಜಸ್ ಆಶೀರ್ವಚನ ಮಾಡಿದರು. ಉಡುಪಿಯ ಸೈಂಟ್ ಸಿಸಿಲಿ ಕಾನ್ವೆಂಟ್‌ನ ಸುಪೀರಿಯರ್ ಸಿ| ಜ್ಯೋತಿ ಡಿಸೋಜ ಸೇಫ್‌ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು. ಉಡುಪಿ ನಗರ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಖ್ಯಾತ ನ್ಯಾಯವಾದಿ ಮೊಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ರೋಶನ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು. https://chat.whatsapp.com/Ge11n7QCiMj5QyPvCc0H19 ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ, ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ಸೌಲಭ್ಯದೊಂದಿಗೆ ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 22…

Read More

ಮಂಗಳೂರಿನಲ್ಲಿ ನವಂಬರ್‌ 16ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ  ಸಹಕಾರ ಜಾಥಾದಲ್ಲಿ 32 ಟ್ಯಾಬ್ಲೋಗಳು ಭಾಗಿ, ಕರಾವಳಿ ಉತ್ಸವ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಮಾಹಿತಿ ಮಂಗಳೂರು:  ಈ ಬಾರಿಯ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕರಾವಳಿ ಭಾಗದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಕಲಾಗಿದ್ದು ಉಭಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲಾಗುತ್ತಿದೆ. ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ..ಎನ್‌ ರಾಜೇಂದ್ರ ಕುಮಾರ್‌ ಈ ಮಾಹಿತಿ ನೀಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ 2024ನೇ ಸಾಲಿನಿಂದ ಅಖಿಲ ಭಾರತ ಸಹಕಾರ ಸಪ್ತಾಹದ ಸಂಭ್ರಮ ಆಚರಣೆಯ ಸಂದರ್ಭ “ಸಹಕಾರ ಮಾಣಿಕ್ಯ” ಪ್ರಶಸ್ತಿ ನೀಡಲುನಿರ್ಧರಿಸಲಾಗಿದೆ. ಉಭಯ ಜಿಲ್ಲೆಗಳಿಂದ ತಲಾ ಒಂದರಂತೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಾಗೂ ಕ್ರೆಡಿಟ್ ಕೋ-ಆಪರೇಟಿವ್…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ ಆರೋಗ್ಯ ಶಿಬಿರದಲ್ಲಿ ಡಾ.ರೇಖಾ ಪಿ.ಶೆಣೈ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದೊಂದಿಗೆ ನಿರಂತರ ಆರೋಗ್ಯ ಶಿಬಿರ ನಡೆಸುತ್ತಿದ್ದು ಇಂಥ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುತ್ತಿರುವುದು ಸಂತೋಷದ ವಿಷಯ. ಯಾವುದೇ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಉತ್ತಮ. ಜನ ಕೆಲಸದ ಒತ್ತಡದ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಎಡವುತ್ತಾರೆ. ಅಂಥ ಸಂದರ್ಭಗಳಲ್ಲಿ ಇಂತಹ ಶಿಬಿರಗಳನ್ನು ರಜಾ ದಿನಗಳಲ್ಲಿ ಆಯೋಜಿಸುತ್ತಿರುವುದರಿಂದ ಜನರಿಗೆ ತುಂಬ ಉಪಯೋಗವಾಗುತ್ತಿದೆ ಎಂದು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ಮುಖ್ಯಸ್ಥೆ ಡಾ| ರೇಖಾ ಪಿ.ಶೆಣೈ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಲಯನ್ಸ್‌ ಕ್ಲಬ್‌ ಮೂಲ್ಕಿ, ಎಂಜೆ.ಎಫ್‌ ಲಿಯೋ ಕ್ಲಬ್‌ ಮೂಲ್ಕಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್‌ ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ…

Read More

ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭ್ಯಾಸವರ್ಗ ನವಂಬರ್‌ 16ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಪಾಂಡೇಶ್ವರದ ವಾರಣಾಸಿ ಟವರ್ಸ್‌ನಲ್ಲಿರುವ ಕ್ಯಾಂಪ್ಕೊ ಸಭಾಂಗಣದಲ್ಲಿ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗೀಯ ಕಾರ್ಯವಾಹ ಡಾ.ವಾದಿರಾಜ್‌, ಸಹಕಾರ ಭಾರತಿಯ ದಕ್ಷಿಣ ಮಧ್ಯ ಕ್ರೇತ್ರೀಯ ಸಂಪರ್ಕ ಪ್ರಮುಖ್‌, ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಸ್‌.ಆರ್‌ ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಉಪ ಪೊಲೀಸ್‌ ಆಯುಕ್ತ ದಿನೇಶ್‌ ಕುಮಾರ್‌ ಬಿ.ಪಿ ಬ್ಯಾಂಕಿಂಗ್‌ ವ್ಯವಸ್ಥೆ ಮತ್ತು ಇತರ ಕ್ಷೇತ್ರಗಳಲ್ಲಿ ಸೈಬರ್‌ ಅಪರಾಧ ಬಗ್ಗೆ ಮಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸೆಲ್ಕೋದ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಗುರುಪ್ರಕಾಶ್‌ ಶೆಟ್ಟಿ ಪ್ರಧಾನಮಂತ್ರಿ ಸೌರ ವಿದ್ಯುತ್‌ ಯೋಜನೆ -ಮನೆಗಳಲ್ಲಿ ಸಮಗ್ರ ಸೌರ ವಿದ್ಯುತ್‌ ಉಪಯೋಗ- ಸಹಕಾರಿಗಳ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಸಹಕಾರ ಭಾರತಿಯ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷ ಜಿ.ಆರ್‌ ಪ್ರಸಾದ್‌, ಪ್ರಧಾಣ…

Read More

ಶಿಕಾರಿಪುರ: ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಜಿಲ್ಲಾ ಮಹಿಳಾ ಜವಳಿ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘ ಶಿಕಾರಿಪುರ, ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಹಯೋಗದಲ್ಲಿ ಶಿಕಾರಿಪುರ ತಾಲೂಕಿನ ಚುನಾವಣೆ ನಡೆಯುವ ಚುನಾವಣಾಧಿಕಾರಿಗಳಿಗೆ ಮತ್ತು ಕಾರ್ಯದರ್ಶಿಯವರಿಗೆ ಚುನಾವಣೆಗೆ ಸಂಬಂಧಿಸಿದ ಒಂದು ದಿನದ ತರಬೇತಿ ಕಾರ್ಯಕ್ರಮ ಶಿಕಾರಿಪುರದ ಬನಸಿರಿ ಸಭಾಂಗಣದಲ್ಲಿ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ತೋಟಗಾರಿಕಾ ಮಹಾಮಂಡಳ ಅಧ್ಯಕ್ಷ ಡಾ.ಬಿ.ಡಿ ಭೂಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮ್ಮ ಬಸವರಾಜ್, ಮಂಗಳ ವಿಶ್ವೇಶ್ವರಯ್ಯ, ಬಸವೇಶ್ವರ ಸಹಕಾರಿ ಒಕ್ಕೂಟ ಅಧ್ಯಕ್ಷ ಮೌನೇಶ್ವರಪ್ಪ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಮಮತಾ ಚಂದ್ರಕುಮಾರ್, ನಾಗರಾಜಪ್ಪ, ಶಾಂತಮ್ಮ ಶಾಂತಕುಮಾರ್…

Read More