Author: admin
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜರುಗಿತು. https://chat.whatsapp.com/EbVKVnWB6rlHT1mWtsgbch ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯಿಸ್, ಕೆ.ಶಿವಪ್ರಸಾದ್ ಆಚಾರ್ಯ ಹಾಗೂ ಅಬ್ಬಾಸ್ ಉಚ್ಚಿಲ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಐಲಿನ್ ಮಥಾಯೀಸ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಿದಲ್ಲಿ ಸ್ಥಳಾವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಕೆ.ಶಿವಪ್ರಸಾದ್ ಆಚಾರ್ಯ ಮಾತನಾಡಿ “ಕೆ.ಸಿ.ರೋಡ್ ಶಾಖೆಯಲ್ಲಿ ಸಿಬ್ಬಂದಿಯ ಗ್ರಾಹಕ ಸ್ನೇಹಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಬ್ಬಾಸ್ ಉಚ್ಚಿಲ ಮಾತನಾಡಿ “ಕೆ.ಸಿ. ರೋಡ್ ಶಾಖೆಯು ಎರಡು ವರುಷದಲ್ಲಿ ಈ ಭಾಗದ ಜನರಿಗೆ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವ ವಿಷಯದಲ್ಲಿ ಚರ್ಚೆಗಳಾಗುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಸೌಹಾರ್ದ ಸಹಕಾರಿ ಸಂಘವು ಮಂಗಳೂರು ಜಿಲ್ಲೆ ನಾಮಕರಣಕ್ಕೆ ಬೆಂಬಲ ಸೂಚಿಸಿದೆ. https://chat.whatsapp.com/EbVKVnWB6rlHT1mWtsgbch ಕರ್ನಾಟಕದಲ್ಲಿ ಬೆಂಗಳೂರು ನಂತರ ಹೆಚ್ಚು ಪ್ರಸಿದ್ಧವಾಗಿರುವುದು ಮಂಗಳೂರು. ಇದು ಎಲ್ಲರಿಗೂ ತಿಳಿದ ವಿಷಯ. ಮಂಗಳೂರಿನ ಮಂಗಳಾದೇವಿ ದೇವಸ್ಥಾನ-ಮಂಗಳೂರಿನ ಕದ್ರಿ ದೇವಸ್ಥಾನ -ಮಂಗಳೂರು ‘ಏರ್ಪೋರ್ಟ್-ಮಂಗಳೂರು ರೈಲ್ವೆ ನಿಲ್ದಾಣ-ಮಂಗಳೂರು ಪುರಭವನ-ಮಂಗಳೂರು ನೆಹರೂ ಮೈದಾನ-ಮಂಗಳೂರು ಹಂಚಿನ ಕಾರ್ಖಾನೆ-ಮಂಗಳೂರು ಗೇರುಬೀಜ ಕಾರ್ಖಾನೆ-ಮಂಗಳೂರು ಸರಕಾರಿ ಕಾಲೇಜು-ಮಂಗಳೂರು ಆಗ್ನೆಸ್ ಕಾಲೇಜು-ಮಂಗಳೂರು ಅಲೋಶಿಯಸ್ ಕಾಲೇಜ್-ಮಂಗಳೂರು ಕೆನರಾ ಕಾಲೇಜ್-ಮಂಗಳೂರು ಕೆನರಾ ಬ್ಯಾಂಕ್-ಮಂಗಳೂರು ಕಾರ್ಪೋರೇಶನ್ ಬ್ಯಾಂಕ್-ಮಂಗಳೂರು ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡ)-ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಕರ್ಣಾಟಕ ಬ್ಯಾಂಕ್ -ಎಂಸಿಸಿ ಬ್ಯಾಂಕ್ ಮಂಗಳೂರು – ಎಸ್ಸಿಡಿಸಿಸಿ ಬ್ಯಾಂಕ್-ಮಂಗಳೂರು ಸೊಸೈಟಿ – ಮಂಗಳೂರು ಆಟೋರಿಕ್ಷಾ ಕಾರು ಚಾಲಕರ ಸೌಹಾರ್ದ ಸಹಕಾರಿ ಸಂಘ ಜಪ್ಪು ಮಂಗಳೂರು ಸ್ಟೋರ್ ಜಪ್ಪು-ಮಂಗಳೂರು ದಸರಾ-ಮಂಗಳೂರು ಪ್ರಕಾಶ್ ಬೀಡಿ-ಮಂಗಳೂರು ಪಿವಿಎಸ್ ಬೀಡಿ-ಮಂಗಳೂರು ಗಣೇಶ್ ಬೀಡಿ-ಮಂಗಳೂರು ಸಾಧು ಬೀಡಿ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ, ಕೃಷ್ಣಾಪುರ ಶಾಖೆಯ ಗ್ರಾಹಕರ ಸಭೆಯು ಇತ್ತೀಚೆಗೆ ಆಯಾ ಶಾಖೆಗಳಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕರಂಗಲ್ಪಾಡಿ ಶಾಖೆಯ ದಶಮಾನೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಸದಸ್ಯರಾದ ಪುಟ್ಟಸ್ವಾಮಿ ಹೆಚ್, ರಮೇಶ್ ಯು, ಶ್ರೀಧರ್ ಹಾಗೂ ಅಶೋಕ್ ಎಂ.ಕೆ ಉದ್ಘಾಟಿಸಿದರು. ಸಂಘದ ಸದಸ್ಯರಾದ ಸುಮ ಪ್ರಸಾದ್ ಮಾತನಾಡಿ ಶಾಖೆಯು ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದು, ಶಾಖೆಯ ಸಿಬ್ಬಂದಿಗಳ ನಗುಮೊಗದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ರಾಜಾರಾಮನ್ ತಾಳಿಪಾಡಿ ಮಾತನಾಡಿ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೇವೆ ಶೀಘ್ರವಾಗಿ ನೀಡುತ್ತಿರುವ ಹಾಗೂ ಆಯ್ದ ರಜಾ ದಿನಗಳಲ್ಲಿ ಬ್ಯಾಂಕಿಂಗ್ ಹಾಗೂ ಇ-ಸ್ಟಾಂಪಿಂಗ್ ಸೇವೆ ನೀಡುತ್ತಿರುವದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದರು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಮುದ್ದು ಮೂಡುಬೆಳ್ಳೆ, ಗೋಪಾಲ್ ಎಮ್, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ…
ಬೆಂಗಳೂರು, ಬೀದರ್, ಬೆಳಗಾವಿಯಂತೆ ಸಹಕಾರ ಕ್ಷೇತ್ರದಲ್ಲಿ ಕಲಬುರಗಿಯೂ ಪ್ರಗತಿ ಸಾಧಿಸಲಿ: ನಂಜನ ಗೌಡ ಅಭಿಪ್ರಾಯ ಸೌಹಾರ್ದ ಸಹಕಾರಿ ಕಾಯಿದೆಯ ರಜತ ಮಹೋತ್ಸವ ನಿಮಿತ್ತ ಸಂವಾದ ಕಾರ್ಯಕ್ರಮ ಕಲಬುರಗಿ: ನೂರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರ ಇಂದು ಬಹಳ ವಿಶಾಲವಾಗಿ ಬೆಳೆದಿದೆ. ನಮ್ಮ ದೇಶಕ್ಕೆ ಸಹಕಾರ ಕ್ಷೇತ್ರದ ಪರಿಕಲ್ಪನೆಯನ್ನು ನೀಡಿದ್ದು ಕರ್ನಾಟಕ ರಾಜ್ಯ. ಬೆಳಗಾವಿ, ಬೆಂಗಳೂರು ಹಾಗೂ ಬೀದರ್ ಜಿಲ್ಲೆಗಳಿಗೆ ಹೋಲಿಸಿದರೆ, ಸಹಕಾರ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆ ಹಿಂದುಳಿದಿದೆ. ಸಹಕಾರ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆಯೂ ಪ್ರಗತಿ ಸಾಧಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಸೌಹಾರ್ದ ಸಹಕಾರಿ ಕಾಯಿದೆಯ ರಜತ ಮಹೋತ್ಸವದ ಪ್ರಯುಕ್ತ ಶುಕ್ರವಾರ ಕಲಬುರಗಿಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಸಹಯೋಗದೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.…
ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸೌಹಾರ್ದ ಸಿರಿ ನೂತನ ಕಟ್ಟಡ ನಾಳೆ ಸಾಹೇಬರಕಟ್ಟೆಯಲ್ಲಿ ಉದ್ಘಾಟನೆ
ಕೋಟ: ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸಾಹೇಬರಕಟ್ಟೆ-ಶಿರಿಯಾರ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ’ʼ ಇದರ ಉದ್ಘಾಟನೆ ಜು13ರಂದುಬೆಳಗ್ಗೆ9.30ಕ್ಕೆ ಜರಗಲಿದೆ. https://chat.whatsapp.com/EbVKVnWB6rlHT1mWtsgbch ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿ ಸೇವೆ ನೀಡುತ್ತಿದ್ದು ಜನಮಾನಸದಲ್ಲಿ ತನ್ನದೇ ಛಾಪು ಮೂಡಿಸಿದೆ. ಸಂಸ್ಥೆಯು ಸಾಹೇಬರಕಟ್ಟೆಯ ಹೃದಯಭಾಗದಲ್ಲಿ ಸ್ವಂತ ಜಾಗ ಖರೀದಿಸಿ ಇದೀಗ ಕೋಟ್ಯಂತರ ರೂ. ವೆಚ್ಚದಲ್ಲಿ ಆಧುನೀಕೃತ ಹವಾನಿಯಂತ್ರಿತ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿದೆ. ಸಂಸ್ಥೆಯ ಅಧ್ಯಕ್ಷ ಅಶೋಕ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿರಾಲಿಯ ಮಹಾಗಣಪತಿ ಮಹಾಮಾಯ ದೇಗುಲದ ಆಡಳಿತ ಮೊಕ್ತಸರ ಗೋಪಿನಾಥ ಕಾಮತ್ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನ ಕಚೇರಿ ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದು, ಆಡಳಿತ ಕಚೇರಿಯ ಸಭಾಂಗಣ ಉದ್ಘಾಟನೆಯನ್ನು ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ನೆರವೇರಿಸಲಿದ್ದಾರೆ. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭದ್ರತಾ ಕೋಶ…
ಮಂಗಳೂರು: ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ -ಸೇವಾ ಸಂಭ್ರಮ ಗ್ರಾಮೋತ್ಸವ 2025 ಸಮಿತಿ ಆಶ್ರಯದಲ್ಲಿ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಒನ್ಸೈಟ್ ಎಸ್ಸಿಲಾರ್ಲಕೋಟಿಕ್ ಫೌಂಡೇಶನ್ ಬೆಂಗಳೂರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ ಇವುಗಳ ಜಂಟಿ ಸಹಯೋಗದಲ್ಲಿ ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ಜುಲೈ 13ರ ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಬೃಹತ್ ವೈದ್ಯಕೀಯ ಸೇವಾ ಶಿಬಿರ ಆಯೋಜಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಶಿಬಿರದಲ್ಲಿ ಬೃಹತ್ ಹೃದಯ ತಪಾಸಣೆ, ಶಸ್ತ್ರಚಿಕಿತ್ಸಾ ತಪಾಸಣೆ, ಎಲುಬು ತಪಾಸಣೆ, ದಂತಚಿಕಿತ್ಸೆ, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಬೃಹತ್…
ಜುಲೈ 24ರಂದು ಸಹಕಾರ ಸಚಿವ ಅಮಿತ್ ಷಾ ಅವರಿಂದ ಔಪಚಾರಿಕವಾಗಿ ಬಿಡುಗಡೆ ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರ ನೀತಿ -2025 ಇದರ ಔಪಚಾರಿಕ ಘೋಷಣೆಗೆ ದಿನ ನಿಗದಿಯಾಗಿದೆ. ಇದೇ ಬರುವ ಜುಲೈ 24ರ ಗುರುವಾರ ದಿನ ಅಮಾವಾಸ್ಯೆಯಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರು, ಸಹಕಾರ ಸಚಿವಾಲಯದ ಪ್ರಧಾನ ಕಚೇರಿ ನವದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದ ಸಭಾಂಗಣದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಿದ್ದಾರೆ. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರ ನೀತಿಯ ಅನಾವರಣವು ಭಾರತದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಸಮೃದ್ಧಿ (ಸಹಕಾರದ ಮೂಲಕ ಸಮೃದ್ಧಿ) ದೃಷ್ಟಿಕೋನದಡಿ ಸಹಕಾರಿ ವಲಯವನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಗುರಿಯನ್ನು ಹೊಂದಿರುವ ಪರಿವರ್ತನಾಶೀಲ ಸುಧಾರಣೆಗಳಿಗೆ ಈ ರಾಷ್ಟ್ರೀಯ ಸಹಕಾರ ನೀತಿ ಅಡಿಪಾಯ ಹಾಕುವ ನಿರೀಕ್ಷೆಯಿದೆ. ರಾಷ್ಟ್ರೀಯ ಸಹಕಾರಿ ನೀತಿಯನ್ನು ಸಿದ್ಧಪಡಿಸಲು, ಭಾರತ ಸರ್ಕಾರವು 2022ರ ಸೆಪ್ಟೆಂಬರ್ 2ರಂದು ಮಾಜಿ ಸಚಿವ ಸುರೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಹಕಾರಿ ವಲಯದ ತಜ್ಞರು,…
ಬ್ಯಾಂಕ್ ಪ್ರಗತಿಗೆ ಕಾರ್ಯವಿಧಾನ, ಮೂಲಸೌಕರ್ಯ, ತಂತ್ರಜ್ಞಾನವೂ ಮುಖ್ಯ: ಫಾ!ಡೆನಿಸ್ ಡೇಸಾ ಅಭಿಪ್ರಾಯ ಉಡುಪಿ: ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಲ್ಪೆ ಶಾಖೆ ನವೀಕರಣಗೊಂಡಿದ್ದು ಅದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಮಲ್ಪೆಯ ಸಿಟಿಜನ್ ಸರ್ಕಲ್ನ ಮೊದಲ ಮಹಡಿಯಲ್ಲಿ ನಡೆಯಿತು. ಕೊಡವೂರು ಕೃಷಿ ಸೇವೆಗಳ ಸಹಕಾರ ಸಂಘ ಲಿಮಿಟೆಡ್ನ ಅಧ್ಯಕ್ಷ ನಾರಾಯಣ ಬಲ್ಲಾಳ್ ನವೀಕರಿಸಿದ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ನಾವು ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಈ ಬ್ಯಾಂಕಿನಲ್ಲಿ ಸ್ನೇಹಪರ ಮತ್ತು ವೃತ್ತಿಪರ ವ್ಯಕ್ತಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ 28 ವರ್ಷಗಳಿಂದ ಈ ಬ್ಯಾಂಕ್ ಜನರಿಗೆ ಸೇವೆ ನೀಡುತ್ತಿದೆ. ‘ಕ್ಯಾಥೋಲಿಕ್’ ಎಂಬ ಹೆಸರು ಸ್ವತಃ ಸಹಾಯಶೀಲ ಮತ್ತು ಸೇವೆಯ ಸಂಕೇತವಾಗಿದೆ. ಇಂದಿನ ಕೆಲವು ಬ್ಯಾಂಕುಗಳಿಗಿಂತ ಭಿನ್ನವಾಗಿ ಕೋ ಆಪರೇಟಿವ್ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ರಾಷ್ಟ್ರೀಕೃತ ಬ್ಯಾಂಕಿನ ಕೆಲವು ಸಿಬ್ಬಂದಿಗೆ ಸ್ಥಳೀಯ ಭಾಷೆ ಮಾತನಾಡಲು ಸಾಧ್ಯವಾಗುವುದಿಲ್ಲ, ಆದರೆ ಈ ಸಂಸ್ಥೆಯ ಸಿಬ್ಬಂದಿ ಸ್ಪಷ್ಟ ಸಂವಹನ ಮತ್ತು ತಿಳುವಳಿಕೆ ಹೊಂದಿದ್ದು ಸಮರ್ಥ ಸಿಬ್ಬಂದಿಯ ಕಾರ್ಯದಿಂದ ಬ್ಯಾಂಕಿನ ನಿರಂತರ…
ಸಹಕಾರ್ ಸಂವಾದದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಭರವಸೆ ನವದೆಹಲಿ: ಗುಜರಾತ್ ಮತ್ತು ರಾಜಸ್ಥಾನದಲ್ಲಿ ಒಂಟೆ ಸಾಕಣೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿರುವ ಕೇಂದ್ರ ಸಹಕಾರ ಸಚಿವ ಒಂಟೆ ಹಾಲಿನ ಔಷಧೀಯ ಮೌಲ್ಯವನ್ನು ಬಳಸಿಕೊಂಡು ಒಂಟೆ ಹಾಲಿಗೆ ಉತ್ತಮ ದರ ನಿಗದಿಪಡಿಸುವಂತೆ ಮಾಡಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ. https://chat.whatsapp.com/EbVKVnWB6rlHT1mWtsgbch ‘ಸಹಕಾರ್ ಸಂವಾದ’ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿರುವ ಅಮಿತ್ ಷಾ, ಒಂಟೆ ಹಾಲಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ಬಗ್ಗೆ ಈ ಮೇಲಿನ ಎರಡೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅದರ ಮಾರುಕಟ್ಟೆಯನ್ನು ಉತ್ತೇಜಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಸಹಕಾರ ಸಚಿವಾಲಯದ ಈ ಕ್ರಮವು ಒಂಟೆ ಸಾಕುತ್ತಿರುವ ಸಮುದಾಯಗಳ ಆದಾಯ ಹೆಚ್ಚಿಸುವುದು ಮಾತ್ರವಲ್ಲದೆ ಕಡಿಮೆ ಆದಾಯದಿಂದಾಗಿ ಕ್ಷೀಣಿಸುತ್ತಿರುವ ಸ್ಥಳೀಯ ಒಂಟೆ ತಳಿಗಳ ಸಂರಕ್ಷಣೆಯನ್ನು ಬೆಂಬಲಿಸುವ ಗುರಿಯನ್ನೂ ಹೊಂದಿದೆ. ಒಂಟೆ ಹಾಲಿನ ಸಹಕಾರಿ ಸಂಸ್ಥೆಗಳನ್ನು ವೈಜ್ಞಾನಿಕ ಸಂಶೋಧನೆ ಮತ್ತು ಮಾರುಕಟ್ಟೆ…
ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮನದಾಳದ ಮಾತು ನವದೆಹಲಿ: ಗೃಹ ಸಚಿವಾಲಯವನ್ನು ಮುನ್ನಡೆಸುವುದಕ್ಕಿಂತ ಸಹಕಾರ ಸಚಿವಾಲಯದ ಸಚಿವನಾಗಿ ಕೆಲಸ ಮಾಡುತ್ತಿರುವುದು ಹೆಚ್ಚು ತೃಪ್ತಿ ತಂದುಕೊಟ್ಟಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಮನದಾಳ ವ್ಯಕ್ತಪಡಿಸಿದ್ದಾರೆ. ಸಹಕಾರ ಸಚಿವಾಲಯವನ್ನು ಮುನ್ನಡೆಸುವುದರಲ್ಲಿ ವೈಯಕ್ತಿಕವಾಗಿ ಬಹಳ ಆಳವಾದ ತೃಪ್ತಿ ತಂದುಕೊಟ್ಟಿದೆ, ಇದು ಗೃಹ ಸಚಿವಾಲಯದಲ್ಲಿನ ತಮ್ಮ ಅಧಿಕಾರಾವಧಿಗಿಂತ ಹೆಚ್ಚು ತೃಪ್ತಿಕರವಾಗಿದೆ ಎಂದು ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಅಹಮದಾಬಾದ್ನಲ್ಲಿ ನಡೆದ ‘ಸಹಕಾರ ಸಂವಾದ’ದಲ್ಲಿ ಮಾತನಾಡಿದ ಅಮಿತ್ ಷಾ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಪರಿಗಣಿಸಿ ಗೃಹ ಸಚಿವಾಲಯದ ನೇತೃತ್ವವು ಪ್ರತಿಷ್ಠಿತವಾಗಿದ್ದರೂ, ಸಹಕಾರ ಸಚಿವಾಲಯವು ಬಡವರು, ರೈತರು ಮತ್ತು ಜಾನುವಾರುಗಳಿಗೆ ಹೆಚ್ಚು ನೇರ ಮತ್ತು ಅರ್ಥಪೂರ್ಣ ರೀತಿಯಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಈ ಸಚಿವಾಲಯವು ಆರ್ಥಿಕ ಸೇರ್ಪಡೆ ಮತ್ತು ಸಮುದಾಯ-ಚಾಲಿತ ಅಭಿವೃದ್ಧಿಯ ಮೂಲಕ ತಳಮಟ್ಟದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಸಹಕಾರ ಸಚಿವಾಲಯದ ಧ್ಯೇಯವು ಸಹಕಾರಿ ಸಂಸ್ಥೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವ…
