Author: admin

ಮೈಸೂರು ದಸರಾ ಮಹೋತ್ಸವ-2023ರ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಮತ್ತು ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಸಹಯೋಗದೊಂದಿಗೆ ಮೈಸೂರು ಕಲಾ ಮಂದಿರದ ಆವರಣದಲ್ಲಿ ಅ.14 ರಿಂದ ನಡೆಯುವ ಸಾಂಪ್ರದಾಯಿಕ ಕಾವ್ಯ ಶಿಲ್ಪಕಲಾ ಶಿಬಿರಕ್ಕೆ ಭಾಗವಹಿಸಲು ಶಿಲ್ಪಿಗಳಾಗಿ ಆಯ್ಕೆಯಾಗಿರುವ ಸಮಿತ್ರ ಸ್ಪಂದನ ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಶ್ರೀ ಶಶಿಧರ ಆಚಾರ್ಯ ಇವರಿಗೆ ಸ್ಪಂದನ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ದಸರಾ ಮಹೋತ್ಸವ-2023ರ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಮತ್ತು ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ 2023 ಸಹಯೋಗದೊಂದಿಗೆ ಸಾಂಪ್ರದಾಯಿಕ ಕಾವ್ಯ ಶಿಲ್ಪಕಲಾ ಶಿಬಿರವನ್ನು ದಿನಾಂಕ:14-10-20023 ರಿಂದ 15-10-2023ರವರೆಗೆ ಕಲಾಮಂದಿರ ಆವರಣ, ಮೈಸೂರು ಇಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರಕ್ಕೆ ಅಕಾಡೆಮಿಯು ಶ್ರೀ ಶಶಿಧರ ಆಚಾರ್ಯ ರನ್ನು ಶಿಲ್ಪಿಗಳಾಗಿ ಆಯ್ಕೆ ಮಾಡಿದ್ದು, ಶಿಬಿರದಲ್ಲಿ ಭಾಗವಹಿಸಿ ಸೃಜನಶೀಲ ಶಿಲ್ಪಗಳನ್ನು ರಚಿಸಿಕೊಡಲು ಕೋರಿದೆ. ಈ ಸಂದರ್ಭದಲ್ಲಿ ಸ್ಥಳೀಯ ವಸತಿ ಮತ್ತು ಇನ್ನಿತರ ವ್ಯವಸ್ಥೆಯ ಅನುಕೂಲತೆಯನ್ನು ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ…

Read More

ಕರ್ನಾಟಕ ಪ್ರಗತಿಪರ ಸಹಕಾರಿಗಳ ವೇದಿಕೆಯ ವತಿಯಿಂದ ಸಹಕಾರಿ ಸಂಘಗಳಿಗೆ ಅನ್ವಯಿಸುವಂತೆ ಆದಾಯ ತೆರಿಗೆ ಮತ್ತು ಸಹಕಾರ ಚುನಾವಣೆಯ ಕುರಿತು ದಿನಾಂಕ 07-10-2023, ಶನಿವಾರದಂದು ಕಾರ್ಯಗಾರ ನೆಡೆಸಲು ಉದ್ದೇಶಿಸಿದೆ. ಈ ಒಂದು ದಿನದ ಕಾರ್ಯಾಗಾರಕ್ಕೆ ಪೋಷಕ ಸಹಕಾರ ಸಂಘಗಳು, ಸಹಕಾರ ಸಂಘದ ಪ್ರತಿನಿಧಿಗಳು ಹಾಗೂ ಆಸಕ್ತಿಯುಳ್ಳ ಎಲ್ಲಾ ಸಹಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲು ಕೋರಿದೆ. ಕಾರ್ಯಗಾರ ನೆಡೆಯುವ ಸ್ಥಳ ಪ್ರಕಾಶ್ ಕೆಫೆ, ಚಾಮರಾಜನಗರ, ಬೆಂಗಳೂರು.

Read More

ಬೆಳ್ತಂಗಡಿ : ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ. 24ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಜರಗಿತು. ವಾರ್ಷಿಕ ಲೆಕ್ಕಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ನಿರ್ದೇಶಕರಾದ ಸೋಮೇ ಗೌಡ, ನಾರಾಯಣಗೌಡ ದೇವಸ್ಯ, ಜಯಾನಂದ ಗೌಡ,ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ, ಗೋಪಾಲಕೃಷ್ಣ ಜಿ. ಕೆ, ಸುರೇಶ್ ಕೌಡಂಗೆ, ಯಶವಂತ್ ಬನಂದೂರು, ಶ್ರೀಮತಿ ಉಷಾದೇವಿ ಕಿನ್ಯಾಜೆ,ಶ್ರೀಮತಿ ಭವಾನಿ ಗೌಡ, ಸುನಿಲ್ ಅನಾವು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ,ಸೋಮಂತಡ್ಕ ಶಾಖೆಯ ಉಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಜಯಾನಂದ ಗೌಡ ಧನ್ಯವಾದವಿತ್ತರು. ತದನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸಂಘದ ಸದಸ್ಯರಿಂದ ಕೆಲವೊಂದು ಭಾಗದಲ್ಲಿ ಶಾಖೆ ತೆರೆಯಲು ಹಾಗೆಯೇ ಸಂಘದ ವತಿಯಿಂದ ಶಾಖೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದರು. ಸಂಘದ ಅಧ್ಯಕ್ಷರ ಮಾತು ಸಂಘವು ಸದಸ್ಯರ ಮತ್ತು ಸಿಬ್ಬಂಧಿಗಳ ಬೆಂಬಲದಿಂದ 55.63ಕೋಟಿ ವ್ಯವಹಾರ ನಡೆಸಿ 27.92ಲಕ್ಷ ಲಾಭಗಳಿಸಿದ್ದು ಶೇಕಡಾ 8%ಡಿವಿಡೆಂಟ್ ನೀಡುವುದಾಗಿ…

Read More

ಉಜಿರೆ: ಉಜಿರೆ ಅನುಗ್ರಹ ವಿವಿದೋದ್ದೇಶ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯುಸೆ.23ರಂದು ಉಜಿರೆ ಎಸ್. ಕೆ. ಮೆಮೋರಿಯಲ್ ನಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ವಲೇರಿಯನ್ ರೋಡ್ರಿಗಸ್ ಅವರು ಅಧ್ಯಕ್ಷತೆ ವಹಿಸಿದರು.ಉಪಾಧ್ಯಕ್ಷ ಅನಿಲ್ ಡಿಸೋಜಾ ನಿರ್ದೇಶಕರಾದ ಸಿಲ್ವಸ್ಟರ್ ಮೋನಿಸ್, ಸುನಿಲ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಡಿಸೋಜಾ, ಫೆಲಿಕ್ಸ್ಡಿಸೋಜಾ, ಬೆನೆಡಿಕ್ಟಾ ಸಲ್ದಾನ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘವು ಒಟ್ಟು ರೂ. 34.59 ಲಕ್ಷ ಪಾಲು ಬಂಡವಾಳ ಮತ್ತು 3322 ಸದಸ್ಯರನ್ನು ಹೊಂದಿದೆ. 4,159.83 ಲಕ್ಷ ಠೇವಣಿ ಸಂಗ್ರಹಿಸಿ 169 ಕೋಟಿ ವ್ಯವಹಾರ ನಡೆಸಿ ರೂ 50.67 ಲಕ್ಷ ನಿವ್ವಳ ಲಾಭ ಗಳಿಸಿ ಶೇಕಡ 18% ಡಿವಿಡೆಂಡ್ ಘೋಷಿಸಲಾ ಯಿತು.ಸಾಮಾಜಿಕ ಚಟುವಟಿಕೆಗಳಿಗೆ ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ರೂ. 2,45,547/- ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ರೂ. 1,06,969/- ವ್ಯಯಿಸಲಾಗಿದೆ ಎ0ದು ಅಧ್ಯಕ್ಷರು ತಿಳಿಸಿದರು. ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುಬೇದಾರ್ ಮೆಲ್ವಿನ್ ಫರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ನೂತನ…

Read More

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ( ನಿ.) ಬೆಂಗಳೂರು ಇದರ ೧೯ ನೇ ವಾರ್ಷಿಕ ಸಾಮಾನ್ಯ ಸಭೆಯು ಕೆ.ಇ.ಬಿ ಇಂಜಿನಿಯರ್ಸ್,ಸರ್.ಎo ವಿಶ್ವೇಶ್ವರಯ್ಯ ಸಭಾಂಗಣ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿoಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಸಮಾರಂಭವು ಜರುಗಿತು.ಈ ಸಂದರ್ಭದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅತೀ ಹೆಚ್ಚು ಮೊತ್ತದ ಇ ಸ್ಟಾಂಪಿoಗ್ ಮುದ್ರಿಸಿರುವ ಸಂಘ ಎಂಬ “ಪ್ರಶಂಸಾ ಫಲಕವ” ನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಹಾಗೂ ಮಹಾಮಂಡಳದ ನಿರ್ದೇಶಕರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ರವರಿಗೆ ಮಹಾಮಂಡಳದ ಅಧಕ್ಷ್ಯರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸನ್ಮಾನ…

Read More

ಮಂಗಳೂರು:- ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿ. ಯೆಯ್ಯಾಡಿ ಪದವು ಮಂಗಳೂರು ಇದರ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ ೨೩-೦೯-೨೦೨೩ ರ ಶನಿವಾರದಂದು ಪ್ರಧಾನ ಶಾಖೆ ಯೆಯ್ಯಾಡಿ ಪದವು ವಿಮಾನ ನಿಲ್ದಾಣ ರಸ್ತೆ ಇಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಉರ್ಬಾನ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಸಹಕಾರಿಯು ೨೦೨೨-೨೩ ನೇ ಸಾಲಿನಲ್ಲಿ ರೂ ೩೮.೩೪ ಕೋಟಿ ವ್ಯವಹಾರ ದಾಖಲಿಸಿ ವರ್ಷಾಂತ್ಯಕ್ಕೆ ರೂ. ೫.೪೭ ಲಕ್ಷಗಳ ನಿವ್ವಳ ಲಾಭ ಗಳಿಸಿ ತನ್ನ ಸದಸ್ಯರಿಗೆ ಶೇ ೭% ಲಾಭಾಂಶವನ್ನು ಘೋಷಿಸಲಾಯಿತು.ಉಪಾಧ್ಯಕ್ಷರಾದ ಶ್ರೀ ಸದಾಶಿವ ಬಂಗೇರ ಇವರು ಸ್ವಾಗತ ಕೋರಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಪ್ರಿಯಾ ಇವರು ವರದಿ ಮಂಡಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜೇಶ್ ಎಂ ಬಿ ಮುಂದಿನ ಸಾಲಿನ ಆಯವ್ಯಯ ಮತ್ತು ವರದಿ ಸಾಲಿನ ಲಾಭ ವಿಂಗಡಣೆ ಮಂಡಿಸಿದರು. ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮಾಯಾ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ನಿರ್ದೇಶಕರಾದ ಶ್ರೀ ಎಡ್ವರ್ಡ್ ಸಿಕ್ವೇರಾ…

Read More

ಮಡಂತ್ಯಾರು : ಸ್ಪಂದನ ಕೋ ಆಪರೇಟಿವ್‌ ಸೊಸೈಟಿ ಲಿ . ಇದರ ಮಡಂತ್ಯಾರು ಶಾಖೆಯು ದಿನಾಂಕ 24 ಅಗಸ್ಟ್‌ 2023 ರಂದು ಉದ್ಘಾಟನೆಗೊಂಡಿತು. ಮಹಿಷಮರ್ದಿನಿ ದೇವಸ್ಥಾನ ಪಾರೆಂಕಿ ಇದರ ಆಡಳಿತ ಮುಖ್ಯಸ್ಥರಾದ ಶ್ರೀ ಎಂ. ವಿಠಲ ಶೆಟ್ಟಿ ಇವರು ಶಾಖೆಯನ್ನು ಉದ್ಘಾಟಿಸಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ ಪಿ.ಶೇಟ್ ರವರು ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದರು . ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್‌ ಪೂಂಜಾ, ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಅಲೆಕ್ಸ್‌ ಐವನ್‌ ಸಿಕ್ವೆರಾ, ಮಡಂತ್ಯಾರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಶ್ರೀ ಗೋಪಾಲಕ್ರಷ್ಣ ಕುಕ್ಕಳ ಹಾಗೂ ಮತ್ತಿತರ ಗಣ್ಯರು, ಸಂಘದ ನಿರ್ದೇಶಕರು, ಹಾಗೂ ಸ್ವ ಸಹಾಯ ಗುಂಪುಗಳ ಪ್ರಬಂಧಕರು ಉಪಸ್ಥಿತರಿದ್ದರು. ಸೊಸೈಟಿಯ ನಿರ್ದೇಶಕರಾದ ಶ್ರೀ ಜಯಕುಮಾರ್ ಅವರು ಧನ್ಯವಾದಗಳನ್ನು ಸಲ್ಲಿಸಿದರು.

Read More

ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್‌ ಘೋಷಣೆ ಬೆಳ್ತಂಗಡಿ, ಸೆ. 24: ಬಂಗಾಡಿ ಸಹಕಾರ ವ್ಯವಸಾಯಿಕ  ಸಂಘ ಸಹಕಾರ  ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಹಕಾರ ಸಂಸ್ದೆಯಾಗಿ ಮೂಡಿ ಬಂದಿದೆ. ಪ್ರಸಕ್ತ ವರ್ಷದಲ್ಲಿ4.09 ಕೋಟಿ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15 ಡಿವಿಡೆಂಡ್‌ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಹರೀಶ್‌ ಸಾಲಿಯಾನ್‌ ಮಾಹಿತಿ ನೀಡಿದರು. ಇಂದಬೆಟ್ಟಿನ ಸೈಂಟ್‌ ಫ್ರಾನ್ಸಿಸ್‌  ಕ್ಸೇವಿಯರ್‌ ಚರ್ಚ್‌ ವಠಾರದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ5,418 ಸದಸ್ಯರಿದ್ದು ಪ್ರಸಕ್ತ ವರ್ಷದಲ್ಲಿ 946 ಕೋಟಿ ರೂ. ಗಿಂತ ಅಧಿಕ ವ್ಯವಹಾರ ನಡೆಸಲಾಗಿದೆ. 6.59 ಕೋಟಿ ರೂ. ಪಾಲು ಬಂಡವಾಳ, 16.43 ಕೋಟಿ ರೂ. ನಿಧಿಗಳು 112. 66 ಕೋಟಿ ರೂ. ಠೇವಣಿ ಹೊ೦ದಿದೆ. ಕಡಿರುದ್ಯಾವರದಲ್ಲಿ, ಕೇ೦ದ್ರ ಸರಕಾರದ ಯೋಜನೆಯಡಿಯಲ್ಲಿ 1.43 ಕೋಟಿ ರೂ. ಬ೦ಡವಾಳದ ಶಾಖಾ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ಯೋಜನೆಯಡಿ ಕನ್ಯಾಡಿ ಗ್ರಾಮದ ಪಡ್ಪು ಪ್ರದೇಶದಲ್ಲಿ ಶಾಖಾ ಕಟ್ಟಡವು ನಿರ್ಮಾಣ ಹ೦ತದಲ್ಲಿದೆ ಎ೦ದು ತಿಳಿಸಿದರು.…

Read More

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಪುಣೆಯಲ್ಲಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯ ಡಿಜಿಟಲ್ ಪೋರ್ಟಲ್ ಅನ್ನು  ಉದ್ಘಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನದಲ್ಲಿ ದೃಢವಾದ ನಂಬಿಕೆಯನ್ನಿಟ್ಟು ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಕೇಂದ್ರ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ. ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಗಣಕೀಕರಣದ ಮುಖ್ಯ ಉದ್ದೇಶಗಳು ಹೀಗಿವೆ: i. ಸಂಪೂರ್ಣವಾಗಿ ಕಾಗದರಹಿತ ಅರ್ಜಿ ಮತ್ತು ಪ್ರಕ್ರಿಯೆ ii. ಸಾಫ್ಟ್ ವೇರ್ ಮೂಲಕ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಸ್ವಯಂಚಾಲಿತ ಪಾಲನೆ iii. ಸುಗಮ ವಾಣಿಜ್ಯ ನಿರ್ವಹಣೆಯ ಹೆಚ್ಚಳ iv. ಡಿಜಿಟಲ್ ಸಂವಹನ v. ಪಾರದರ್ಶಕ ಪ್ರಕ್ರಿಯೆ vi. ಸುಧಾರಿತ ವಿಶ್ಲೇಷಣೆ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (ಎಂಐಎಸ್) ಈ ಕೆಳಗಿನ ಮಾಡ್ಯೂಲ್ ಗಳನ್ನು…

Read More

ಮಂಗಳೂರು: 69ನೇ ಅಖಿಲ ಭಾರತ ಸಹಕಾರ ಸಪ್ತಾಹ – 2022 ರ ಆಚರಣೆಯ ಅಂಗವಾಗಿ ಬುಧವಾರ  ಕರ್ನಾಟಕ  ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ರಾಷ್ಟ್ರೀ ಯ ಸೇವಾಯೋಜನೆ ಹಾಗೂ ಯೋಜನಾ ವೇದಿಕೆ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಹಭಾಗಿತ್ವದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣ ಅಯೋಜಿಸಲಾಯಿತು. ಕಾರ್ಯಕ್ರಮದಲ್ಲಿ  “ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆ ಬಗ್ಗೆ ನಾವು ಅರಿವು ಮೂಡಿಸಿಕೊಳ್ಳಬೇಕು.  ಸಹಕಾರಿ ಕ್ಷೇತ್ರದ ಹುಟ್ಟಿನಿಂದ ಇಲ್ಲಿಯವರೆಗೂ ಇದರ ಪಯಣ, ಸಾಧನೆ ಅಪ್ರತಿಮವಾದುದು” ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್,  ಸಹಕಾರ ಅಧ್ಯಾಯನ ಮತ್ತು ಅಭಿವೃದ್ದಿ ಸಂಸ್ಥೆ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್.ಆರ್‌ ಹರೀಷ್ ಆಚಾರ್ಯ  ಇವರು ಮಾತನಾಡಿ, ಜಾತಿ, ಧರ್ಮ, ರಾಜಕೀಯ ನಿಲುವುಗಳು, ಲಿಂಗ ಭಿನ್ನತೆಯನ್ನು ಮೀರಿ ಸಹಕಾರಿ ತತ್ವ…

Read More