Author: admin

ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ 15ನೇ ವಾರ್ಷಿಕೋತ್ಸವ ದಸರಾ ನಾಡಹಬ್ಬ ಆಚರಣೆಯ ಜೊತೆಗೆ ಭಾನುವಾರ ಮಂಗಳೂರು ಸ್ಟೋರ್‌ ಸಭಾಂಗಣದಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಸಹಕಾರಿಯ ಅಧ್ಯಕ್ಷ, ಮಂಗಳೂರಿನ ಮಾಜಿ ಮೇಯರ್‌ ಕೆ.ಭಾಸ್ಕರ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಧನ್ವಿ ರಾವ್‌ ದೇವರ ಸ್ತುತಿ ಮಾಡಿದರು. ಹಿರಿಯ ಸಾಧಕರಾದ ಆನಂದ ಸೋನ್ಸ್‌ ಅವರನ್ನು ಅಭಿನಂದಿಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು, ರಾಮಕ್ಷತ್ರಿಯ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶುಭಾ ಪ್ರಶಾಂತ್‌ ಮತ್ತು ಎನ್‌ಆರ್‌ಐ ರವೀಂದ್ರ ಬೇಕಲ್‌, ಸುಂದರ ಸಾಲ್ಯಾನ್‌ ಮುಖ್ಯ ಅತಿಥಿಗಳಾಗಿದ್ದರು. ಸಹಕಾರಿಯ ನಿರ್ದೇಶಕರಾದ ವಿಜೇತಾ ಎಸ್‌.ರಾವ್‌, ಲತಾ ಎನ್‌.ಆಳ್ವ, ಸುಪ್ರಿತಾ ಜೆ.ಕೆ, ಕೃಷ್ಣ ಭಟ್‌, ಪೂರ್ಣಿಮಾ ಬಿ.ರಾವ್‌, ಸದಸ್ಯರಾದ ಉಮೇಶ ಬಾಬುಗುಡ್ಡ, ಜಾನ್ಸನ್‌ ಮಾಬೆನ್‌, ರಾಜಶೇಖರ್‌, ರತನ್‌ಕುಮಾರ್‌ ಮೊದಲಾದವರು ಸಹಕರಿಸಿದರು. ಸಹಕಾರಿಯ ಕಾರ್ಯದರ್ಶಿ ಚಂದ್ರಿಕಾ ಡಿ.ರಾವ್‌ ಕಾರ್ಯಕ್ರಮ ಸಂಯೋಜಿಸಿದ್ದರು. ನಿರ್ದೇಶಕ ಸದಾಶಿವ ಅಮೀನ್‌ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ಬಾಲಕರ ಹಾಸ್ಟೆಲ್‌ಗೆ ಊಟದ ಸ್ಟೀಲ್ ತಟ್ಟೆಗಳನ್ನು ಇಡುವ ಸ್ಟೀಲ್ ರ್ಯಾಕ್‌ ಅನ್ನು ಭಾನುವಾರ ಸಂಜೆ ಆಶ್ರಮದ ಹಾಸ್ಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರಿಗೆ ಹಸ್ತಾಂತರಿಸಲಾಯಿತು. ರೂ.50000/- ಮೌಲ್ಯದ ರ್ಯಾಕ್‌ನಲ್ಲಿ 120 ಊಟದ ತಟ್ಟೆಗಳನ್ನು ಇಡಬಹುದು. ಇದನ್ನು ಸ್ವೀಕರಿಸಿ ಮಾತನಾಡಿದ ಮಠದ ಅಧ್ಯಕ್ಷ ಸ್ವಾಮಿ ಜಿತ ಕಾಮಾನಂದಜಿ,”ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನೀಡಿದ ಈ ಸ್ಟೀಲ್ ರ್ಯಾಕ್ ನ ಅಗತ್ಯ ನಮ್ಮ ಹಾಸ್ಟೆಲ್‌ಗೆ ಇತ್ತು. ವಿದ್ಯಾರ್ಥಿಗಳು ಊಟದ ನಂತರ ತೊಳೆದ ತಟ್ಟೆಗಳನ್ನು ಇಡಲು ಇದು ತುಂಬಾ ಸಹಕಾರಿ. ಕಳೆದ ವರ್ಷವೂ ಶ್ರೀಶಾ ಸೊಸೈಟಿ ಹಾಸ್ಟೆಲ್ ಮಕ್ಕಳ ಬಿಸಿನೀರು ಸ್ನಾನಕ್ಕೆ ಎರಡು ಗುಜರಾತಿ ಬಾಯ್ಲರ್‌ಗಳನ್ನು ನೀಡಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಶ್ರೀಶಾ ಸೊಸೈಟಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ” ಎಂದು ಹಾರೈಸಿದರು. https://chat.whatsapp.com/Ge11n7QCiMj5QyPvCc0H19 ಕರ್ನಾಟಕ ರಾಜ್ಯ…

Read More

ಉಳ್ಳಾಲ: ಬಿ.ಸಿ.ರೋಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಸಹಕಾರಿ ಸಂಘದ 10ನೇ ಶಾಖೆ ಭಾನುವಾರ ಫಜೀರು ಗ್ರಾಮದ “ಆಶೀರ್ವಾದ್ ಕಾಂಪ್ಲೆಕ್ಸ್”ನ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು. https://chat.whatsapp.com/Ge11n7QCiMj5QyPvCc0H19 ಮರ್ಸಿ ಶೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎ. ಮ್ಯಾಕ್ಸಿಮ್ ಎಂ..ಫೆರ್ನಾಂಡಿಸ್ ಉದ್ಘಾಟಿಸಿದರು. ಚರ್ಚ್ ಧರ್ಮಗುರು ಫಾ।ಆಲ್ಬನ್ ಡಿಸೋಜ ಆಶೀರ್ವಚನ ನೀಡಿದರು. ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ ಭದ್ರತಾ ಕೊಠಡಿ ಉದ್ಘಾಟಿಸಿದರು. ಫಜೀರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ ಗಣಕಯಂತ್ರ ಉದ್ಘಾಟಿಸಿದರು. ಫಜೀರು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಲೇರಿಯನ್ ಡಿಸೋಜ, ಕಟ್ಟಡ ಮಾಲೀಕ ಗ್ಲೆನ್ಸಿಲ್ ಅರುಣ್ ರೋಚ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ನೂತನ ಶಾಖೆಗೆ ರೂ. 1.10 ಕೋಟಿ ಠೇವಣಿ ಸಂಗ್ರಹಗೊಂಡಿದ್ದು, ಅತಿಥಿ ಗಣ್ಯರ ಸಮ್ಮುಖದಲ್ಲಿ ಠೇವಣಿ ಪತ್ರಗಳನ್ನು ಠೇವಣಿದಾರರಿಗೆ ವಿತರಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲಿನ್‌ ಗ್ರೇಸಿ ಡಿಸೋಜ ಸಂಸ್ಥೆ ನಡೆದು ಬಂದ ದಾರಿಯ ಸಂಕ್ಷಿಪ್ತ ವರದಿ…

Read More

ಮಂಗಳೂರು: ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯ ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾವೂರಿನಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಸಂಘವು ವರ್ಷಾಂತ್ಯಕ್ಕೆ ಎ ದರ್ಜೆಯ ಸದಸ್ಯತ್ವ ಪಾಲು ಬಂಡವಾಳ 46.30 ಲಕ್ಷ ರೂ. ಹೊಂದಿದ್ದು, ಠೇವಣಿ ಸಂಗ್ರಹ 4.54 ಕೋಟಿ ರೂ., 4.56 ಕೋಟಿ ರೂ. ವಿವಿಧ ರೀತಿಯ ಸಾಲ ವಿತರಿಸಲಾಗಿದೆ. 1.17 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿ ನೀಡುವುದರೊಂದಿಗೆ ಹಿರಿಯ ನಾಗರಿಕರಿಗೆ ವಿಶೇಷ ರೀತಿಯ ಬಡ್ಡಿ ನೀಡಲಾಗುತ್ತಿದೆ. ಚಿನ್ನಾಭರಣ ಈಡಿನ ಸಾಲ, ಗೃಹ ಸಾಲ, ಅಡವು ಸಾಲ, ಜಾಮೀನು ಸಾಲ, ಭದ್ರತಾ ಸಾಲ, ಎಲ್ಲ ತರಹದ ವಾಹನ ಸಾಲ ನೀಡಲಾಗುತ್ತಿದೆ. 2024-25ನೇ ಸಾಲಿಗೆ ಅಂದಾಜು 10 ಕೋಟಿ ರೂ. ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆ 8.50 ಕೋಟಿ ರೂ. ನಿವ್ವಳ ಲಾಭ 12.74 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಮಂಗಳೂರು ನಗರದ ಪಂಪ್‌ವೆಲ್‌…

Read More

ರಾಜ್ಯ ವಿಧಾನಸಭಾ ಚುನಾವಣೆಯ ಎಫೆಕ್ಟ್‌, ಡಿಸೆಂಬರ್‌ ಅಂತ್ಯಕ್ಕೆ ದಿನಾಂಕ ನಿಗದಿ ಮುಂಬೈ: ಮಹಾರಾಷ್ಟ್ರದಲ್ಲಿ ಸಹಕಾರ ಸಂಘಗಳ ಚುನಾವಣಾ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಈ ಹಿಂದೆ ಅಕ್ಟೋಬರ್‌ 1ರಿಂದ ಚುನಾವಣಾ ಪ್ರಕ್ರಿಯೆ ನಿಗದಿಯಾಗಿದ್ದರೂ ಅದನ್ನು ಮುಂದೂಡಿ ಮುಂದಿನ ದಿನಾಂಕವನ್ನು ಡಿಸೆಂಬರ್‌ 31ರಿಂದ ಆರಂಭಿಸುವಂತೆ ನಿಗದಿಪಡಿಸಲಾಗಿದೆ. ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 35,000ಕ್ಕೂ ಅಧಿಕ ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಚುನಾವಣೆ ಮುಂದೂಡಲಾಗಿದೆ ಎನ್ನಲಾಗಿದೆ. https://chat.whatsapp.com/Ge11n7QCiMj5QyPvCc0H19 ಸಾಕಷ್ಟು ವಿಳಂಬದ ನಂತರ ಮಹಾರಾಷ್ಟ್ರದ 29,443 ಕೋ ಆಪರೇಟಿವ್‌ ಸೊಸೈಟಿಗಳ ಚುನಾವಣೆಗೆ ಅ.1ರಿಂದ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ನಿಗದಿಪಡಿಸಲಾಗಿತ್ತು. ಆದರೆ ವಿಧಾನಸಭೆ ಚುನಾವಣೆಯ ಸಿದ್ಧತೆಗಳಿಗೆ ತೊಡಕುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮತ್ತೊಮ್ಮೆ ದಿನಾಂಕ ಮರುನಿಗದಿ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಅಲ್ಲಿನ ಕೋ ಆಪರೇಟಿವ್‌ ಸೊಸೈಟಿಗಳು ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲಿನ ಸಕ್ಕರೆ ಸಹಕಾರ ಸಂಘಗಳು, ನೂಲು ಗಿರಣಿಗಳು, ವಿವಿಧ ಗ್ರಾಮೀಣ ಮತ್ತು ನಗರ ಸಹಕಾರಿ ಸಂಘಗಳು ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ…

Read More

ಬಂಟ್ವಾಳ: ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 10ನೇ ಶಾಖೆಯು ಗ್ರಾಮಚಾವಡಿಯಲ್ಲಿ ಆರಂಭವಾಗಲಿದ್ದು, ಅ.13ರಂದು ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಅ.13ರ ಭಾನುವಾರ ಬೆಳಗ್ಗೆ 9ಕ್ಕೆ ಫಜೀರು ಗ್ರಾಮಚಾವಡಿಯ ಆಶೀರ್ವಾದ್‌ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಜರುಗಲಿದೆ. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್‌.ಎನ್‌.ರಮೇಶ್‌ ಉದ್ಘಾಟಿಸುವರು. ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜೀವನ್‌ ಲಾಯ್ಡ್‌ ಪಿಂಟೊ ಅಧ್ಯಕ್ಷತೆ ವಹಿಸುವರು. ಫರಂಗಿಪೇಟೆಯ ಮಾಂಟೆ ಮರಿಯಾನೊ ಸೈಂಟ್‌ ಫಿಡೆಲಿಸ್‌ ಫ್ರಾಯರಿಯ ಮಾಜಿ ಸುಪೀರಿಯರ್‌ ಫಾ.ಜೆರಾಲ್ಡ್‌ ಲೋಬೊ ಆಶೀರ್ವಚನ ನೀಡಲಿದ್ದಾರೆ. ಮರ್ಸಿ ಕೇರ್‌ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮ್ಯಾಕ್ಸಿಮ್‌ ಎಂ.ಫೆರ್ನಾಂಡಿಸ್‌ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಫಜೀರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಹಮ್ಮದ್‌ ರಫೀಕ್‌ ಗಣಕಯಂತ್ರ ಉದ್ಘಾಟಿಸಲಿದ್ದಾರೆ. ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ, ಫಜೀರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಫ್ಲೋರಿನ್‌ ಡಿಸೋಜ, ಫಜೀರು ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ವಲೇರಿಯನ್‌ ಡಿಸೋಜ, ಕಟ್ಟಡದ ಮಾಲೀಕ…

Read More

ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಅಧ್ಯಕ್ಷ ಮಹೇಶ್ ಶೆಟ್ಟಿ ಅಭಿಪ್ರಾಯ ಆತ್ಮಶಕ್ತಿ ಗಂಜಿಮಠ ಶಾಖೆಯ ವತಿಯಿಂದ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ಗುರುಪುರ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ  ನಡೆಸುವ ಜನಪರ ಕಾರ್ಯಕ್ರಮಗಳು ಶ್ಲಾಘನೀಯವಾದುದು. ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯನ ಆರೋಗ್ಯದ ರಕ್ಷಣೆಗಾಗಿ ಆತ್ಮಶಕ್ತಿ ಸಹಕಾರಿ ಸಂಘವು ಸೇವೆಯನ್ನು ನೀಡುವಂತಾಗಲಿ ಎಂದು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ಅಧ್ಯಕ್ಷ ಮಹೇಶ್ ಶೆಟ್ಟಿ ಹೇಳಿದರು. https://chat.whatsapp.com/Ge11n7QCiMj5QyPvCc0H19 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಗಂಜಿಮಠ ಶಾಖೆಯ ಪ್ರಯುಕ್ತ ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ , ಅಳಿಕೆ ಫ್ರೆಂಡ್ಸ್ ಗಂಜಿಮಠ, ಫ್ರೆಂಡ್ಸ್ ಕ್ಲಬ್ ಮಟ್ಟಿ ಬಡಗುಳಿಪಾಡಿ, ಕಲಾವರ್ಧಕ ಯುವಕ ಮಂಡಲ ನಾರ್ಲಮೊಗರು ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು…

Read More

ಇಂದು ವಿಶ್ವ ಹತ್ತಿ ದಿನ 2019ರಿಂದ ಪ್ರತಿವರ್ಷ ಅಕ್ಟೋಬರ್ 7ರಂದು ಹತ್ತಿ ದಿನ ಆಚರಣೆ ಮಂಗಳೂರು: ಹತ್ತಿ ಬೆಳೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದ್ದು, ವೈದ್ಯಕೀಯ ಕ್ಷೇತ್ರ, ಪಶು ಆಹಾರ, ಖಾದ್ಯ ತೈಲ ಮತ್ತು ಜವಳಿ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆ ಧರಿಸಿದರೂ ಅದು ಹಿತಕರವಾದ ಭಾವ ಉಂಟುಮಾಡುತ್ತದೆ. ಹತ್ತಿಯನ್ನು ಭಾರತವೂ ಸೇರಿದಂತೆ ಉಷ್ಣ ವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಸಲಾಗತ್ತದೆ. ವಿಶ್ವದ ಸುಮಾರು 75ಕ್ಕೂ ಅಧಿಕ ದೇಶಗಳಲ್ಲಿ 28.67 ಮಿಲಿಯನ್ನಷ್ಟು ರೈತರು ಹತ್ತಿ ಬೆಳೆ ಬೆಳೆಯುತ್ತಾರೆ. ಹತ್ತಿ ಬೆಳೆಯ ಉತ್ಪಾದನೆಯಿಂದ ಲಕ್ಷಾಂತರ ಬಡ ಕುಟುಂಬದ ಜೀವನ ನಡೆಯುತ್ತಿದೆ. ಹತ್ತಿ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿವಷರ್ಷ ಅಕ್ಟೋಬರ್‌ 7ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ. https://chat.whatsapp.com/Ge11n7QCiMj5QyPvCc0H19 ಬಿಳಿ ಬಂಗಾರವೆಂದೇ ಖ್ಯಾತಿ ಪಡೆದಿರುವ ಹತ್ತಿ ಬೆಳೆಯ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಸ್ಥಾನದಲ್ಲಿದೆ.  ಬೇಡಿಕೆಯಲ್ಲಿ ಭಾರತವು ವಿಶ್ವದ ಶೇ.25ರಷ್ಟು ಪಾಲನ್ನು ಪೂರೈಸುತ್ತಿದೆ. ದತ್ತಾಂಶಗಳ ಪ್ರಕಾರ, 2023-24ರಲ್ಲಿ ಚೀನಾ 5.60 ಮಿಲಿಯನ್‌ ಮೆಟ್ರಿಕ್‌…

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ತಲಪಾಡಿಯ ಬಂಟರ ಸಂಘ ಹಾಗೂ ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ, ಇವುಗಳ ಸಹಕಾರದೊಂದಿಗೆ ತಲಪಾಡಿಯ ಬಂಟರ ಚಾವಡಿ ಸಭಾಭವನದಲ್ಲಿ “ಬೃಹತ್ ಉಚಿತ ಆರೋಗ್ಯ – ಕಣ್ಣಿನ ತಪಾಸಣಾ ಶಿಬಿರ” ಆಯೋಜಿಸಲಾಯಿತು. https://chat.whatsapp.com/Ge11n7QCiMj5QyPvCc0H19 ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 250ಕ್ಕೂ ಅಧಿಕ ಜನ ಶಿಬಿರದ ಸದುಪಯೋಗ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದ 48 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು. ಖಾಯಿಲೆಗಳಿಗೆ ಔಷಧ ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳವರಿಗೆ ಬುಧವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಆಸ್ಪತ್ರೆಗೆ ಹೋಗಿ – ಬರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅನೇಕರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯಿದ್ದು ಅವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕತ್ಸೆ ಮಾಡಲಾಗುತ್ತದೆ. ಶ್ರೀಶಾ ಸೊಸೈಟಿಯು ಪ್ರತಿ ತಿಂಗಳೂ ಮಂಗಳೂರು ತಾಲೂಕಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ…

Read More

ಶ್ರೀಶಾ ಸೌಹಾರ್ದ ಸೊಸೈಟಿ ಸಮಾಜಮುಖಿ ಕಾರ್ಯಗಳಿಂದ ಮಾದರಿ: ಸ್ವಾಮಿ ಜಿತಕಾಮಾನಂದಜಿ ಮಂಗಳೂರು: ಮಂಗಳೂರಿನ ರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2ರ ಸಂಜೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ “ದಾಸವರೇಣ್ಯ ವಿಜಯದಾಸರು” ಎಂಬ ಚಲನಚಿತ್ರ ಉಚಿತ ಪ್ರದರ್ಶನ ಸಂಪೂರ್ಣ ಯಶಸ್ವಿಯಾಯಿತು. https://chat.whatsapp.com/Ge11n7QCiMj5QyPvCc0H19 ಅಪಾರ ಸಂಖ್ಯೆಯಲ್ಲಿ ಸೇರಿದ್ದ ಆಸ್ತಿಕ ಆಸಕ್ತ ಬಂಧುಗಳು ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡರು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ,”ನಮ್ಮ ಸಂಸ್ಕೃತಿ -ಸಂಸ್ಕಾರಕ್ಕೆ ದಾಸ ಸಾಹಿತ್ಯದ ಕೊಡುಗೆ ಬಹು ದೊಡ್ಡದು. ದಾಸರು ತಮ್ಮ ಪದ-ಪದ್ಯಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ, ಜನರಲ್ಲಿ ಭಕ್ತಿಯನ್ನು ಬಿತ್ತಿದ್ದಾರೆ ಮತ್ತು ಜೀವನ ಮೌಲ್ಯಗಳ ವರ್ಧನೆಗೆ ಅಪಾರ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ. ಶ್ರೀಶಾ ಸೌಹಾರ್ದ ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ…

Read More