Author: admin

ಬಂಟ್ವಾಳ: ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 10ನೇ ಶಾಖೆಯು ಗ್ರಾಮಚಾವಡಿಯಲ್ಲಿ ಆರಂಭವಾಗಲಿದ್ದು, ಅ.13ರಂದು ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಅ.13ರ ಭಾನುವಾರ ಬೆಳಗ್ಗೆ 9ಕ್ಕೆ ಫಜೀರು ಗ್ರಾಮಚಾವಡಿಯ ಆಶೀರ್ವಾದ್‌ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಜರುಗಲಿದೆ. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್‌.ಎನ್‌.ರಮೇಶ್‌ ಉದ್ಘಾಟಿಸುವರು. ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜೀವನ್‌ ಲಾಯ್ಡ್‌ ಪಿಂಟೊ ಅಧ್ಯಕ್ಷತೆ ವಹಿಸುವರು. ಫರಂಗಿಪೇಟೆಯ ಮಾಂಟೆ ಮರಿಯಾನೊ ಸೈಂಟ್‌ ಫಿಡೆಲಿಸ್‌ ಫ್ರಾಯರಿಯ ಮಾಜಿ ಸುಪೀರಿಯರ್‌ ಫಾ.ಜೆರಾಲ್ಡ್‌ ಲೋಬೊ ಆಶೀರ್ವಚನ ನೀಡಲಿದ್ದಾರೆ. ಮರ್ಸಿ ಕೇರ್‌ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮ್ಯಾಕ್ಸಿಮ್‌ ಎಂ.ಫೆರ್ನಾಂಡಿಸ್‌ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಫಜೀರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಹಮ್ಮದ್‌ ರಫೀಕ್‌ ಗಣಕಯಂತ್ರ ಉದ್ಘಾಟಿಸಲಿದ್ದಾರೆ. ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ, ಫಜೀರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಫ್ಲೋರಿನ್‌ ಡಿಸೋಜ, ಫಜೀರು ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ವಲೇರಿಯನ್‌ ಡಿಸೋಜ, ಕಟ್ಟಡದ ಮಾಲೀಕ…

Read More

ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಅಧ್ಯಕ್ಷ ಮಹೇಶ್ ಶೆಟ್ಟಿ ಅಭಿಪ್ರಾಯ ಆತ್ಮಶಕ್ತಿ ಗಂಜಿಮಠ ಶಾಖೆಯ ವತಿಯಿಂದ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ಗುರುಪುರ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ  ನಡೆಸುವ ಜನಪರ ಕಾರ್ಯಕ್ರಮಗಳು ಶ್ಲಾಘನೀಯವಾದುದು. ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯನ ಆರೋಗ್ಯದ ರಕ್ಷಣೆಗಾಗಿ ಆತ್ಮಶಕ್ತಿ ಸಹಕಾರಿ ಸಂಘವು ಸೇವೆಯನ್ನು ನೀಡುವಂತಾಗಲಿ ಎಂದು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ಅಧ್ಯಕ್ಷ ಮಹೇಶ್ ಶೆಟ್ಟಿ ಹೇಳಿದರು. https://chat.whatsapp.com/Ge11n7QCiMj5QyPvCc0H19 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಗಂಜಿಮಠ ಶಾಖೆಯ ಪ್ರಯುಕ್ತ ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ , ಅಳಿಕೆ ಫ್ರೆಂಡ್ಸ್ ಗಂಜಿಮಠ, ಫ್ರೆಂಡ್ಸ್ ಕ್ಲಬ್ ಮಟ್ಟಿ ಬಡಗುಳಿಪಾಡಿ, ಕಲಾವರ್ಧಕ ಯುವಕ ಮಂಡಲ ನಾರ್ಲಮೊಗರು ಹಾಗೂ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು…

Read More

ಇಂದು ವಿಶ್ವ ಹತ್ತಿ ದಿನ 2019ರಿಂದ ಪ್ರತಿವರ್ಷ ಅಕ್ಟೋಬರ್ 7ರಂದು ಹತ್ತಿ ದಿನ ಆಚರಣೆ ಮಂಗಳೂರು: ಹತ್ತಿ ಬೆಳೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದ್ದು, ವೈದ್ಯಕೀಯ ಕ್ಷೇತ್ರ, ಪಶು ಆಹಾರ, ಖಾದ್ಯ ತೈಲ ಮತ್ತು ಜವಳಿ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆ ಧರಿಸಿದರೂ ಅದು ಹಿತಕರವಾದ ಭಾವ ಉಂಟುಮಾಡುತ್ತದೆ. ಹತ್ತಿಯನ್ನು ಭಾರತವೂ ಸೇರಿದಂತೆ ಉಷ್ಣ ವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಸಲಾಗತ್ತದೆ. ವಿಶ್ವದ ಸುಮಾರು 75ಕ್ಕೂ ಅಧಿಕ ದೇಶಗಳಲ್ಲಿ 28.67 ಮಿಲಿಯನ್ನಷ್ಟು ರೈತರು ಹತ್ತಿ ಬೆಳೆ ಬೆಳೆಯುತ್ತಾರೆ. ಹತ್ತಿ ಬೆಳೆಯ ಉತ್ಪಾದನೆಯಿಂದ ಲಕ್ಷಾಂತರ ಬಡ ಕುಟುಂಬದ ಜೀವನ ನಡೆಯುತ್ತಿದೆ. ಹತ್ತಿ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿವಷರ್ಷ ಅಕ್ಟೋಬರ್‌ 7ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ. https://chat.whatsapp.com/Ge11n7QCiMj5QyPvCc0H19 ಬಿಳಿ ಬಂಗಾರವೆಂದೇ ಖ್ಯಾತಿ ಪಡೆದಿರುವ ಹತ್ತಿ ಬೆಳೆಯ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಸ್ಥಾನದಲ್ಲಿದೆ.  ಬೇಡಿಕೆಯಲ್ಲಿ ಭಾರತವು ವಿಶ್ವದ ಶೇ.25ರಷ್ಟು ಪಾಲನ್ನು ಪೂರೈಸುತ್ತಿದೆ. ದತ್ತಾಂಶಗಳ ಪ್ರಕಾರ, 2023-24ರಲ್ಲಿ ಚೀನಾ 5.60 ಮಿಲಿಯನ್‌ ಮೆಟ್ರಿಕ್‌…

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ತಲಪಾಡಿಯ ಬಂಟರ ಸಂಘ ಹಾಗೂ ಶ್ರೀರಾಮ ಭಜನಾ ಮಂದಿರ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ, ಇವುಗಳ ಸಹಕಾರದೊಂದಿಗೆ ತಲಪಾಡಿಯ ಬಂಟರ ಚಾವಡಿ ಸಭಾಭವನದಲ್ಲಿ “ಬೃಹತ್ ಉಚಿತ ಆರೋಗ್ಯ – ಕಣ್ಣಿನ ತಪಾಸಣಾ ಶಿಬಿರ” ಆಯೋಜಿಸಲಾಯಿತು. https://chat.whatsapp.com/Ge11n7QCiMj5QyPvCc0H19 ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 250ಕ್ಕೂ ಅಧಿಕ ಜನ ಶಿಬಿರದ ಸದುಪಯೋಗ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದ 48 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು. ಖಾಯಿಲೆಗಳಿಗೆ ಔಷಧ ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳವರಿಗೆ ಬುಧವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಆಸ್ಪತ್ರೆಗೆ ಹೋಗಿ – ಬರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅನೇಕರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯಿದ್ದು ಅವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕತ್ಸೆ ಮಾಡಲಾಗುತ್ತದೆ. ಶ್ರೀಶಾ ಸೊಸೈಟಿಯು ಪ್ರತಿ ತಿಂಗಳೂ ಮಂಗಳೂರು ತಾಲೂಕಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ…

Read More

ಶ್ರೀಶಾ ಸೌಹಾರ್ದ ಸೊಸೈಟಿ ಸಮಾಜಮುಖಿ ಕಾರ್ಯಗಳಿಂದ ಮಾದರಿ: ಸ್ವಾಮಿ ಜಿತಕಾಮಾನಂದಜಿ ಮಂಗಳೂರು: ಮಂಗಳೂರಿನ ರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2ರ ಸಂಜೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ “ದಾಸವರೇಣ್ಯ ವಿಜಯದಾಸರು” ಎಂಬ ಚಲನಚಿತ್ರ ಉಚಿತ ಪ್ರದರ್ಶನ ಸಂಪೂರ್ಣ ಯಶಸ್ವಿಯಾಯಿತು. https://chat.whatsapp.com/Ge11n7QCiMj5QyPvCc0H19 ಅಪಾರ ಸಂಖ್ಯೆಯಲ್ಲಿ ಸೇರಿದ್ದ ಆಸ್ತಿಕ ಆಸಕ್ತ ಬಂಧುಗಳು ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡರು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ,”ನಮ್ಮ ಸಂಸ್ಕೃತಿ -ಸಂಸ್ಕಾರಕ್ಕೆ ದಾಸ ಸಾಹಿತ್ಯದ ಕೊಡುಗೆ ಬಹು ದೊಡ್ಡದು. ದಾಸರು ತಮ್ಮ ಪದ-ಪದ್ಯಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ, ಜನರಲ್ಲಿ ಭಕ್ತಿಯನ್ನು ಬಿತ್ತಿದ್ದಾರೆ ಮತ್ತು ಜೀವನ ಮೌಲ್ಯಗಳ ವರ್ಧನೆಗೆ ಅಪಾರ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ. ಶ್ರೀಶಾ ಸೌಹಾರ್ದ ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ಗಂಜಿಮಠ ಶಾಖೆ ಹಾಗೂ ಮರಾಠಿ ಸಮಾಜ ಸೇವಾ ಸಂಘ ಗಂಜಿಮಠ, ಅಳಕೆ ಫ್ರೆಂಡ್ಸ್ ಗಂಜಿಮಠ, ಫ್ರೆಂಡ್ಸ್ ಕ್ಲಬ್ ಮಟ್ಟಿ, ಬಡಗುಳಿಪಾಡಿ, ಕಲಾವರ್ಧಕ ಯುವಕ ಮಂಡಲ ನಾರ್ಲಮೊಗರು, ಮತ್ತು ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿ೦ದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರವನ್ನು ಅಕ್ಟೋಬರ್‌  6ರ ಭಾನುವಾರ ಪೂರ್ವಾಹ್ನ 9.30ರಿಂದ ಅಪರಾಹ್ನ 12.30ರವರೆಗೆ ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘದಲ್ಲಿ ಆಯೋಜಿಸಲಾಗಿದೆ. https://chat.whatsapp.com/Ge11n7QCiMj5QyPvCc0H19 ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಮಧುಮೇಹ ತಪಾಸಣೆ, ಬಿ.ಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು…

Read More

ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಸಾರ್ವಜನಿಕ ಉಪಕಾರ ನಿಧಿಯಿಂದ ನೀಡಲಾಗುವ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಶುಕ್ರವಾರ ಸಂಘದ ಪ್ರಧಾನ ಕಚೇರಿಯಲ್ಲಿ ಜರಗಿತು. https://chat.whatsapp.com/Ge11n7QCiMj5QyPvCc0H19 ಸಂಘದ ಅಧ್ಯಕ್ಷ ಜಿ.ವೆಂಕಟೇಶ ಶೆಣೈ, ಉಪಾಧ್ಯಕ್ಷ ಜಿ.ವಿಶ್ವನಾಥ್ ಆಚಾರ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ನಾಯಕ್ ಹಾಗೂ ನಿರ್ದೇಶಕರು ಹಾಜರಿದ್ದರು. ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹಕ್ಕೆ ರೂ 1.20 ಲಕ್ಷ, ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವಕ್ಕೆ ರೂ. 55,555, ಯಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ, ರೂ. 50,000, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಲ್ಯಾಪ್ ಟಾಪ್ ಮತ್ತು 1 ಪ್ರಿಂಟರ್, ರಾಷ್ಟೀಯ ಸೇವಾ ಯೋಜನೆಗೆ 10,000 ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು ರೂ 2.80 ಲಕ್ಷದ ಕೊಡುಗೆಗಳನ್ನು ವಿತರಿಸಲಾಯಿತು.

Read More

ಐಸಿಎ ಏಷ್ಯಾ-ಪೆಸಿಫಿಕ್‌ ಸಂಶೋಧನಾ ಸಮ್ಮೇಳನದ ಧ್ಯೇಯವಾಕ್ಯ ತಿರುವನಂತಪುರಂ: ಸಹಕಾರ ಕ್ಷೇತ್ರವೇ ಮುಂದಿನ ಕೈಗಾರಿಕಾ ಕ್ರಾಂತಿ…… ಈ ಧ್ಯೇಯವಾಕ್ಯವನ್ನಿಟ್ಟುಕೊಂಡು 18ನೇ ಐಸಿಎ ಏಷ್ಯಾ-ಫೆಸಿಪಿಕ್‌ ಸಂಶೋಧನಾ ಸಮ್ಮೇಳನವು ಕೇರಳದ ಅತಿ ಹಳೆಯ ಕೋ ಆಪರೇಟಿವ್‌ ಸೊಸೈಟಿಯಾದ ಉರಾಲುಂಗಲ್‌ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ(ಯುಎಲ್‌ಸಿಸಿಎಸ್‌) ಮತ್ತು ಕೋಯಿಕ್ಕೋಡ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಹಯೋಗದಲ್ಲಿ ಅಕ್ಟೋಬರ್‌ 15ರಿಂದ 18ರ ತನಕ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 “ಮುಂದಿನ ಕೈಗಾರಿಕಾ ಕ್ರಾಂತಿಯಲ್ಲಿ ಸಹಕಾರಿ ಸಂಸ್ಥೆಗಳು” ಎಂಬ ವಿಷಯದಲ್ಲಿ ಆಳವಾದ ಚರ್ಚೆಗಳು ಈ ಸಮಾವೇಶದಲ್ಲಿ ನಡೆಯಲಿದ್ದು, ತಾಂತ್ರಿಕ ಬೆಳವಣಿಗೆಗಳನ್ನು ಅಳವಡಿಸಿಕೊಂಡು ಭವಿಷ್ಯದಲ್ಲಿ ಹೇಗೆ ಔದ್ಯೋಗಿಕ ನೆಲೆಗಟ್ಟನ್ನು ಕಂಡುಕೊಳ್ಳಬಹುದು ಎಂಬ ವಿಷಯ ಇಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ದೇಶ -ವಿದೇಶಗಳ ವಿಷಯ ತಜ್ಞರು, ವಿದ್ವಾಂಸರು ಮತ್ತು ಸಹಕಾರಿ ವಲಯದ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾಜವು ಯಾಂತ್ರೀಕೃತಗೊಂಡು, ಡಿಜಿಟಲೀಕರಣ ಮತ್ತು ಜಾಗತೀಕರಣದ ಜಾಢಿನಲ್ಲಿ ಮುಂದುವರಿಯುತ್ತಿರುವಾಗ ಈ ಸಮಾವೇಶ ನಡೆಯುತ್ತಿರುವುದು ಮಹತ್ವ ಪಡೆದಿದೆ. ಯಾಂತ್ರೀಕೃತ ವ್ಯವಸ್ಥೆ, ಡಿಜಿಟಲೀಕರಣ, ಜಾಗತೀಕರಣದಂಥ ಶಕ್ತಿಗಳು ಕೈಗಾರಿಕೆಗಳು ಮತ್ತು ಕಾರ್ಮಿಕ…

Read More

ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಗೌರವ ಕಾರ್ಯದರ್ಶಿ ಎಸ್‌.ಎಸ್‌.ಪಾಟೀಲ ಅಭಿಮತ ಹಿರೇಕೆರೂರು: ಮಹಾತ್ಮ ಗಾಂಧಿ ಈ ದೇಶ ಕಂಡ ಮಹಾನ್ ದೇಶಭಕ್ತ. ಅತ್ಯಂತ ಆತ್ಮಾಭಿಮಾನದ ಶ್ರೇಷ್ಠ ವ್ಯಕ್ತಿತ್ವ ರೂಢಿಸಿಕೊಂಡು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರು ಎಂದು ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಗೌರವ ಕಾರ್ಯದರ್ಶಿ ಎಸ್‌.ಎಸ್‌.ಪಾಟೀಲ ಹೇಳಿದರು. ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲಾ ಶಾಲಾ-ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. https://chat.whatsapp.com/Ge11n7QCiMj5QyPvCc0H19 ಮಹಾತ್ಮ ಗಾಂಧಿಯವರು ಮುಖ್ಯವಾಗಿ ಈ ದೇಶದ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ ತುಳಿತಕ್ಕೊಳಗಾದ ದೀನ-ದಲಿತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಬೇಕೆಂಬ ಕನಸು ಕಂಡಿದ್ದರು. ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯ ಕಲ್ಪನೆ ಅದ್ಭುತವಾದದ್ದು ಮತ್ತು ವಿಶ್ವಕ್ಕೆ ಮಾದರಿಯಾದದು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತ ಕಂಡ ಅಪ್ರತಿಮ ಪ್ರಧಾನಿಯಾಗಿ ಈ ದೇಶವನ್ನು ಸದೃಡ,…

Read More

ಡಿಸೆಂಬರ್‌ 31ರ ತನಕ ಮುಂದುವರಿಕೆ ನವದೆಹಲಿ: ಅಕ್ಟೋಬರ್‌ 1ರಿಂದ ಆರಂಭವಾದ ಮೂರನೇ ತ್ರೈಮಾಸಿಕದಲ್ಲಿ ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರಿಂದ ಎರಡನೇ ತ್ರೈಮಾಸಿಕದಲ್ಲಿ ನಿಗದಿಪಡಿಸಿರುವ ಬಡ್ಡಿ ದರ ಅಕ್ಟೋಬರ್‌ 1ರಿಂದ ಡಿಸೆಂಬರ್‌ 31ರ ತನಕ ಮುಂದುವರಿಯಲಿದೆ. https://chat.whatsapp.com/Ge11n7QCiMj5QyPvCc0H19 ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿಗದಿಪಡಿಸಿರುವ ಬಡ್ಡಿ ದರ ಅಕ್ಟೋಬರ್‌ 1ರಿಂದ ಡಿಸೆಂಬರ್‌ 31ರ ತನಕ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಸ್ತುತ ಸುಕನ್ಯಾ ಸಮೃದ್ಧಿಗೆ ಶೇ.8.2, ಪಿಪಿಎಫ್‌ಗೆ ಶೇ.7.1, ಅಂಚೆ ಕಚೇರಿಯ ಉಳಿತಾಯ ಠೇವಣಿಗೆ ಶೇ.4, ಕಿಸಾನ್‌ ವಿಕಾಸ್‌ ಪತ್ರಕ್ಕೆ ಶೇ.7.5, ಎನ್‌ಎಸ್‌ಸಿಗೆ ಶೇ.7.7 ಹಾಗೂ ಮಾಸಿಕ ಉಳಿತಾಯ ಯೋಜನೆಗೆ ಶೇ.7.4 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಹೊಸ ತಲೆಮಾರಿಗೆ ಎಸ್‌ಬಿಐ ಹೊಸ ಯೋಜನೆ ಹೊಸ ತಲೆಮಾರಿನ ಜನರಲ್ಲೂ ಠೇವಣಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಭಾರತೀಯ ಸ್ಟೇಟ್‌ಬ್ಯಾಂಕ್‌ (ಎಸ್‌ಬಿಐ) ತೀರ್ಮಾನಿಸಿದೆ. ಠೇವಣಿ ಸಂಗ್ರಹ…

Read More