Top News

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಸಂಸ್ಮರಣೆ
    News

    ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಸಂಸ್ಮರಣೆ

    adminBy adminNovember 27, 2024

    103ನೇ ಜನ್ಮದಿನಾಚರಣೆ ಹಲವೆಡೆ ಆಚರಣೆ

    ನವದೆಹಲಿ: ಭಾರತದ ಶ್ವೇತಕ್ರಾಂತಿಯ ಹರಿಕಾರ, ಹಾಲಿನ ಮನುಷ್ಯ ಎಂಬ ಖ್ಯಾತಿಯ ವರ್ಗೀಸ್‌ ಕುರಿಯನ್‌ ಅವರ ೧೦೩ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಹಲವೆಡೆ ಮಂಗಳವಾರ ಕಾರ್ಯಕ್ರಮಗಳು ನಡೆದಿದ್ದು ಅವರಿಗೆ ಗೌರವ ಸಲ್ಲಿಸಲಾಯಿತು. ಮೀನುಗಾರಿಕಾ, ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವಾಲಯದ ವತಿಯಿಂದ ವರ್ಗೀಸ್‌ ಕುರಿಯನ್‌ ಸ್ಮರಣಾರ್ಥ ಕಾರ್ಯಕ್ರಮ ನಡೆದಿದ್ದು ರಾಜಕಾರಣಿಗಳು, ರೈತರು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕುರಿಯನ್‌ಗೆ ನುಡಿನಮನ ಸಲ್ಲಿಸಿದರು.

    vinay kumar soorinje sahakara mahamandala scdcc bank training programme D.K Ditrict sahakara union https://chat.whatsapp.com/Ge11n7QCiMj5QyPvCc0H19
    ವರ್ಗೀಸ್‌ ಕುರಿಯನ್‌ ಜನ್ಮದಿನ ಅಂಗವಾಗಿ ದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ಅಮುಲ್‌ ಕ್ಲೀನ್‌ ಫ್ಯುಯೆಲ್‌ ರ್ಯಾಲಿ ನಡೆಯಿತು. ದೇಶಾದ್ಯಂತದ ಅಮುಲ್‌ ಕಂಪನಿಯ ಸದಸ್ಯರು, ನೌಕರರು ಪಾಲ್ಗೊಂಡು ದೇಶದ ಹಾಲಿನ ಡೇರಿ ಇತಿಹಾಸದ ಸಾಧನೆಗಳನ್ನು ಮೆಲುಕು ಹಾಕಿದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಉನ್ನತಿಗಾಗಿ ರೈತರು ಮತ್ತು ಪಶುಸಂಗೋಪನಾ ಇಲಾಖೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮೆಲುಕು ಹಾಕಲಾಯಿತು.

    ಮಹಿಳೆಯರ ನೇತೃತ್ವದಲ್ಲಿ ಜಾನುವಾರು ಮತ್ತು ಡೇರಿ ವಲಯ ಹಾಗೂ ಸ್ಥಳೀಯ ಪಶುವೈದ್ಯಕೀಯ ನೆರವಿನಿಂದ ರೈತರ ಸಬಲೀಕರಣ ಎಂಬ ವಿಷಯದಲ್ಲಿ ಚರ್ಚೆಗಳು ನಡೆಯಿತು. ಕೇಂದ್ರ ಸಚಿವರಾದ ರಾಜೀವ್‌ ರಂಜನ್ ಸಿಂಗ್‌, ರಾಜ್ಯ ಖಾತೆಯ ಸಚಿವ ಎಸ್‌.ಪಿ.ಸಿಂಗ್‌ ಬಾಘೇಲ್‌ ಮತ್ತು ಜಾರ್ಜ್‌ ಕುರಿಯನ್‌ ಭಾಗವಹಿಸಿದ್ದರು.
    ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಗೋಪಾಲ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು. ಅತ್ಯುತ್ತಮ ಹೈನುಗಾರ ರೈತ, ಅತ್ಯುತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ ಮತ್ತು ಅತ್ಯುತ್ತಮ ಹಾಲು ಉತ್ಪಾದಕ ಸಹಕಾರಿ ಸಂಘ ಈ ವಿಭಾಗದಲ್ಲಿ ಪುರಸ್ಕಾರ ನೀಡಲಾಯಿತು. ಈಶಾನ್ಯ ಭಾಗದ ರೈತರು ಹೈನುಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಪುರಸ್ಕಾರಗಳನ್ನು ನೀಡಲಾಯಿತು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Amul Banking Co Operative ministry Cooperative Cooperative Department Cooperative Registrar milk day milk man Sahakara Spandana Souharda Sahakari vargies kurien
    Previous Articleಈ ದೇಶದ ಜಿಡಿಪಿಗೆ ಅತಿದೊಡ್ಡ ಕೊಡುಗೆ ಸಹಕಾರಿಗಳದ್ದು!
    Next Article ದೇಶದ ಮೊದಲ ಕ್ರೌಡ್‌ಫಂಡಿಂಗ್‌ ಫಿಲ್ಮ್‌ಗೆ ಪ್ರೊಡ್ಯೂಸರ್ಸ್‌ ಸಹಕಾರಿ ಬಂಧುಗಳು!

    Related Posts

    News

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025
    News

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025
    News

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.