Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಂಸತ್‌ನಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರ
    News

    ಸಂಸತ್‌ನಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರ

    adminBy adminMarch 27, 2025

    ಭಾರತದ ಮೊತ್ತಮೊದಲ ಸಹಕಾರಿ ವಿವಿ ಸ್ಥಾಪನೆಗೆ ಸಂಸತ್‌ ಅಸ್ತು

    ನವದೆಹಲಿ: ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ನಿಟ್ಟಿನಲ್ಲಿ ಬುಧವಾರ ಲೋಕಸಭೆಯಲ್ಲಿ ತ್ರಿಭುವನ್‌ ಸಹಕಾರಿ ವಿಶ್ವವಿದ್ಯಾಲಯ ಮಸೂದೆ 2025ನ್ನು ಅಂಗೀಕರಿಸಲಾಗಿದೆ.
    ಗುಜರಾತ್‌ನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (ಐಆರ್‌ಎಂಎ) ಅನ್ನು ವಿಶ್ವವಿದ್ಯಾಲಯವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿರುವ “ತ್ರಿಭುವನ್” ಸಹಕಾರಿ ವಿಶ್ವವಿದ್ಯಾಲಯ ಮಸೂದೆಯು ಅಂಗೀಕಾರವಾಗುವುದರೊಂದಿಗೆ ದೇಶದ ಮೊದಲ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಗಲ್ಲು ಹಾಕಿದಂತಾಗಿದೆ. ಬುಧವಾರ ಸಂಜೆ ಮಸೂದೆಯ ಅಂಗೀಕಾರವನ್ನು ಘೋಷಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಇದು ಭಾರತದ ಸಹಕಾರಿ ಕ್ಷೇತ್ರದಲ್ಲಿ ಪ್ರಮುಖ ಸಾಧನೆ ಎಂದು ಅಭಿಪ್ರಾಯಪಟ್ಟರು.

    https://chat.whatsapp.com/EbVKVnWB6rlHT1mWtsgbch
    ಇದು ಗ್ರಾಮೀಣ ಆರ್ಥಿಕತೆ, ಸ್ವ-ಉದ್ಯೋಗ ಮತ್ತು ಸಣ್ಣ ಉದ್ಯಮಗಳನ್ನು ಬಲಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಮಸೂದೆಯ ಚರ್ಚೆಯ ಸಂದರ್ಭದಲ್ಲಿ, ಮಸೂದೆ ಅಂಗೀಕಾರವಾದ ನಂತರ, “ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ, ಸ್ವ-ಉದ್ಯೋಗ ಮತ್ತು ಸಣ್ಣ ಉದ್ಯಮಗಳು ಅಭಿವೃದ್ಧಿಗೊಳ್ಳುತ್ತದೆ, ಸಾಮಾಜಿಕ ಸೇರ್ಪಡೆಯೂ ಹೆಚ್ಚಾಗುತ್ತದೆ ಮತ್ತು ಸಂಶೋಧನೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಲು ಅವಕಾಶ ಸಿಗಲಿದೆ ಎಂದು ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ತಿಳಿಸಿದರು. ಪ್ರತಿ ವರ್ಷ 8 ಲಕ್ಷ ಸಹಕಾರಿ ವೃತ್ತಿಪರರನ್ನು ತರಬೇತಿ ನೀಡುವ ಮಹತ್ವಾಕಾಂಕ್ಷೆ ಇರುವುದಾಗಿಯೂ ತಿಳಿಸಿದರು.


    ಈ ಮಸೂದೆಯು ಭಾರತದ ಸಹಕಾರಿ ಇತಿಹಾಸದಲ್ಲಿ ಹೊಸತಾದ ಮೈಲಿಗಲ್ಲು ಎಂದು ವಿವರಿಸಿದ ಅಮಿತ್‌ ಶಾ, ಈ ವಿಶ್ವವಿದ್ಯಾಲಯವು ಸಹಕಾರಿಗಳನ್ನು ಜಾಗತಿಕ ಮಟ್ಟದ ಶಿಕ್ಷಣ ಮತ್ತು ಕೌಶಲ್ ಅಭಿವೃದ್ಧಿಯ ಮೂಲಕ ಕಾರ್ಪೊರೇಟ್‌ಗಳ ಜೊತೆ ಸ್ಪರ್ಧಿಸಬಲ್ಲಂತೆ ಮಾಡಲಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು, ಸ್ವ ಉದ್ಯೋಗವನ್ನು ಉತ್ತೇಜಿಸಲು ಮತ್ತು ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
    ಈ ವಿಶ್ವವಿದ್ಯಾಲಯಕ್ಕೆ ಭಾರತದ ಸಹಕಾರಿ ಚಳವಳಿಯ ಪಿತಾಮಹರಾಗಿ ಗುರುತಿಸಲಾದ ತ್ರಿಭುವನ ಭಾಯ್ ಪಟೇಲ್ ಅವರ ಹೆಸರು ಇಡಲಾಗಿದೆ. ಅವರು ಅಮುಲ್‌ನ ಸ್ಥಾಪನೆಯ ಪ್ರಮುಖ ನಾಯಕನಾಗಿದ್ದರು. ಉನ್ನತ ಶಿಕ್ಷಣದ ಮಾನದಂಡಗಳನ್ನು ಕಾಯ್ದುಕೊಳ್ಳಲು ಮತ್ತು ಜವಾಬ್ದಾರಿ ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲಿದ್ದು ಕುಲಪತಿಯನ್ನು ನೇಮಿಸಿ, ಆಡಳಿತ ನಿಯಮಾವಳಿಗಳನ್ನು ನಿಯಂತ್ರಿಸಲಿದೆ.
    1979ರಲ್ಲಿ ಡಾ.ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ (NDDB), ಸ್ವಿಸ್ ಅಭಿವೃದ್ಧಿ ಸಹಯೋಗ (SDC), ಮತ್ತು ಭಾರತ ಹಾಗೂ ಗುಜರಾತ್ ಸರ್ಕಾರಗಳ ಬೆಂಬಲದೊಂದಿಗೆ ಸ್ಥಾಪಿತವಾದ ಐಆರ್‌ಎಂಎ ಈಗ ಪರಿವರ್ತನೆಗೊಂಡು ಜಾಗತಿಕ ಮಾನದಂಡಗಳ ಸಹಕಾರಿ ಶಿಕ್ಷಣ ಕೇಂದ್ರವಾಗಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿದೆ.
    ಬಂಡವಾಳವಿಲ್ಲದೆ ಉದ್ಯಮಶೀಲತೆ ಹೊಂದಿರುವ ವ್ಯಕ್ತಿಯನ್ನು ಸಂಪರ್ಕಿಸುವ ಏಕೈಕ ಮಾರ್ಗವೆಂದರೆ ಸಹಕಾರಿ ವಲಯ, ಇದರ ಮೂಲಕ ಕೋಟ್ಯಂತರ ಜನರು ತಲಾ 100 ರೂ. ಬಂಡವಾಳದೊಂದಿಗೆ ಒಟ್ಟುಗೂಡುತ್ತಿದ್ದಾರೆ ಮತ್ತು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ. ಉದ್ಯೋಗ ಪಡೆಯುತ್ತಿದ್ದಾರೆ ಮತ್ತು ಸ್ವ-ಉದ್ಯೋಗದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ” ಎಂದು ಅವರು ಹೇಳಿದರು. ಈ ಮಸೂದೆ ಅಂಗೀಕಾರದಿಂದ ಭಾರತದಲ್ಲಿ ಸಹಕಾರಿ ಕ್ಷೇತ್ರ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

     

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Cooperative Dr. Verghese Kurien India’s first cooperative university Institute of Rural Management Anand IRMA Lok Sabha Sahakara Spandana Tribhuvan Sahakari University Bill
    Previous Article12,957 ಹೊಸ ಸಹಕಾರ ಸಂಸ್ಥೆಗಳು ನೋಂದಣಿ
    Next Article ಸಹಕಾರಿಗಳಿಗೆ ಸರ್ಕಾರದಿಂದಲೇ ಕೋ ಆಪರೇಟಿವ್ ಇನ್ಶೂರೆನ್ಸ್‌ ಕಂಪನಿ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.