ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ದಯಾನಂದ ಅಮೈ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
https://chat.whatsapp.com/EbVKVnWB6rlHT1mWtsgbch
ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆ ವೇಳೆ ನಿರ್ದೇಶಕರಾದ ವಿಶ್ವನಾಥ ಪೂಜಾರಿ, ಹೇಮಂತ ಕುಮಾರ್, ಸದಾನಂದ ಶೆಟ್ಟಿ, ಸರಸ್ವತಿ ಕೆ, ಗಾಯತ್ರಿ ಅರುಣ್, ಉಮ್ಮಣ್ಣ, ಕೃಷ್ಣ ನಾಯ್ಕ್, ಚಂದ್ರಹಾಸ, ಪ್ರವೀಣ್ ಕುಮಾರ್, ಜನಾರ್ದನ ಹಾಜರಿದ್ದರು. ಸಹಕಾರ ಸಂಘಗಳ ಮಂಗಳೂರು ಸಹಾಯಕ ನಿಬಂಧಕರ ಕಚೇರಿಯ ಉಪನಿಬಂಧಕರಾದ ಜ್ಯೋತಿ ಡಿ ಚುನಾವಣಾಧಿಕಾರಿಯಾಗಿದ್ದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಸೀಮಾ ಬಾನು ಮತ್ತು ಸಿಬ್ಬಂದಿಗಳು ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com