ಮಂಗಳೂರು: ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೯ನೇ ವಾರ್ಷಿಕ ಸಾಮಾನ್ಯ ಮಹಾಸಭೆ ಭಾನುವಾರ ಮಹಾದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸಭೆಯ ನೋಟೀಸನ್ನು ಚೈತ್ರ ಇವರು ಸಭೆಗೆ ಓದಿ ಹೇಳಿದರು. ಗತ ಸಾಲಿನ ನಡಾವಳಿಯನ್ನು ಸಂಸ್ಥೆಯ ನೌಕರರಾದ ಸವಿತಾ ಶೆಟ್ಟಿ ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. 2025-26ನೇ ಸಾಲಿನ ಖರ್ಚು ವೆಚ್ಚಗಳ ವರದಿಯನ್ನು ಸಂಸ್ಥೆಯ ನೌಕರರಾದ ಅಕ್ಷತಾ ಎನ್ ಇವರು ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. ವಾರ್ಷಿಕ ವರದಿಯನ್ನು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಹೇಮಚಂದ್ರ ಸಭೆಗೆ ಮಂಡಿಸಿ ಸಭೆಯಿಂದ ಒಮ್ಮತದ ಅನುಮೋದನೆಯನ್ನು ಪಡೆದುಕೊಡರು.
ಸಂಸ್ಥೆಯ 2025-26ನೇ ಸಾಲಿನಲ್ಲಿ ಬಜೆಟಿಗಿಂತ ಹೆಚ್ಚಾದ ಮೊತ್ತಗಳಿಗೆ ಮತ್ತು 2026-27ನೇ ಶಾಲಿನ ಮುಂಗಡ ಪತ್ರವನ್ನು ಸಂಸ್ಥೆಯ ಉಪಾಧ್ಯಕ್ಷರಾದ ನಿತಿನ್ ಎ ಇವರು ಮಂಡಿಸಿದರು. ನಿವ್ವಳ ಲಾಭದ ವಿಂಗಡನೆಯನ್ನು ಸಭೆಗೆ ಮಂಡಿಸುತ್ತಾ ಪ್ರಸ್ತುತ ಶೇ. 7 ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಿರುವುದನ್ನು ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಮಂಡಿಸಿದರು. ಕಾರ್ಯಕ್ರಮದಲ್ಲಿ ನಮ್ಮಸಂಸ್ಥೆಯ ವತಿಯಿಂದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ 80% ಗಿಂತ ಅಧಿಕ ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ರಾಜೇಶ್ ಎಚ್ ಜಲ್ಲುಗುಡ್ಡೆ, ಕೆ ಪಿ ಬಾಲಚಂದ್ರ ಪೆರ್ಲ, ತಾರಾನಾಥ್ ಜಿ ಪಡೀಲ್, ರಾಜೇಶ್ ಶೆಟ್ಟಿ , ವಿಜಯ್ ಕುಮಾರ್ ಶೆಟ್ಟಿ, ತಾರಾನಾಥ್ ಕರ್ಮಾರ್, ದಯಾನಂದ ಹೆಗ್ಡೆ ಪಾಲ್ಗೊಂಡಿದ್ದರು , ವಂದನಾರ್ಪಣೆಯನ್ನು ನಿರ್ದೇಶಕರಾದ ಕೆ ಪಿ ಬಾಲಚಂದ್ರ ಪೆರ್ಲ ನೀಡಿದರು.


