Close Menu
    Top News

    ಪರಿಶುದ್ಧ ನಡವಳಿಕೆ ಇದ್ದವರಷ್ಟೇ ದೇವಮಾನವ ಆಗಬಲ್ಲರು

    September 9, 2026

    ನಾಳೆ ಅಪೆಕ್ಸ್‌ ಬ್ಯಾಂಕ್ ಚುನಾವಣೆ ನಡೆಸದಿದ್ದರೆ ನಾವೇ ಆದೇಶಿಸುತ್ತೇವೆ: ಹೈಕೋರ್ಟ್

    September 9, 2026

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    September 8, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಳೆ ಅಪೆಕ್ಸ್‌ ಬ್ಯಾಂಕ್ ಚುನಾವಣೆ ನಡೆಸದಿದ್ದರೆ ನಾವೇ ಆದೇಶಿಸುತ್ತೇವೆ: ಹೈಕೋರ್ಟ್
    News

    ನಾಳೆ ಅಪೆಕ್ಸ್‌ ಬ್ಯಾಂಕ್ ಚುನಾವಣೆ ನಡೆಸದಿದ್ದರೆ ನಾವೇ ಆದೇಶಿಸುತ್ತೇವೆ: ಹೈಕೋರ್ಟ್

    adminBy adminSeptember 9, 2026

    ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್‌ 10ರಂದು ಸರಕಾರ ಚುನಾವಣೆ ನಡೆಸದಿದ್ದರೆ, ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯದಿಂದಲೇ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

    https://chat.whatsapp.com/FCEnlTkAKCC0MGPhXtX4i4
    ಅಪೆಕ್ಸ್ ಬ್ಯಾಂಕಿನ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಬ್ಯಾಂಕಿನ ನಿರ್ದೇಶಕರೂ ಆಗಿರುವ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದು ಎಂಟು ತಿಂಗಳು ಆಗಿದೆ. ಇಲ್ಲಿಯ ತನಕ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿಲ್ಲ. ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಹಕಾರ ಚುನಾವಣಾ ಪ್ರಾಧಿಕಾರ ಕಳೆದ ಬಾರಿಯೇ ಹೇಳಿತ್ತು. ಈಗ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆದರೆ, ಇದರ ಬಗ್ಗೆ ಸರಕಾರ ಈವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಪರಿಸ್ಥಿತಿ ನೋಡಿದರೆ, ಸೆ.10ಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಹಾಗಾಗಿ ನ್ಯಾಯಾಲಯದಿಂದಲೇ ಆದೇಶ ಮಾಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸೆ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕಾದು ನೋಡೋಣ. ಆ ದಿನ ಚುನಾವಣೆ ನಡೆಯದಿದ್ದರೆ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯದಿಂದಲೇ ಆದೇಶ ಮಾಡಲಾಗುವುದು ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆ ಸೆ.11ಕ್ಕೆ ಮುಂದೂಡಿತು.

     

    Apex Bank Election Banking Co Operative ministry Cooperative Cooperative Department Cooperative Registrar Karnataka Highcourt
    Previous Articleಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ
    Next Article ಪರಿಶುದ್ಧ ನಡವಳಿಕೆ ಇದ್ದವರಷ್ಟೇ ದೇವಮಾನವ ಆಗಬಲ್ಲರು

    Related Posts

    ಪರಿಶುದ್ಧ ನಡವಳಿಕೆ ಇದ್ದವರಷ್ಟೇ ದೇವಮಾನವ ಆಗಬಲ್ಲರು

    September 9, 2026

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    September 8, 2026

    ಬಿಜಾಪುರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ

    September 8, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪರಿಶುದ್ಧ ನಡವಳಿಕೆ ಇದ್ದವರಷ್ಟೇ ದೇವಮಾನವ ಆಗಬಲ್ಲರು

    September 9, 2026

    ನಾಳೆ ಅಪೆಕ್ಸ್‌ ಬ್ಯಾಂಕ್ ಚುನಾವಣೆ ನಡೆಸದಿದ್ದರೆ ನಾವೇ ಆದೇಶಿಸುತ್ತೇವೆ: ಹೈಕೋರ್ಟ್

    September 9, 2026

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    September 8, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.