Close Menu
    Top News

    ಆರ್‌ಬಿಐ ನಿರ್ಬಂಧದಡಿ 87 ಪಟ್ಟಣ ಸಹಕಾರಿ ಬ್ಯಾಂಕ್‌ಗಳು; ಇನ್ನೂ 27 ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಮುಂದುವರಿಕೆ

    August 27, 2026

    ಪುತ್ತೂರು ಟೌನ್‌ ಬ್ಯಾಂಕಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶೇಷ ಸಾಧನಾ ಪ್ರಶಸ್ತಿ

    August 27, 2026

    ಆಗಸ್ಟ್ 29ರಂದು ಆತ್ಮಶಕ್ತಿ ಸಹಕಾರ ಸಂಘದಲ್ಲಿ ಸಹಕಾರ ಸಂಘಗಳ ಕಾನೂನು, ಭದ್ರತೆ, ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

    August 26, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆರ್‌ಬಿಐ ನಿರ್ಬಂಧದಡಿ 87 ಪಟ್ಟಣ ಸಹಕಾರಿ ಬ್ಯಾಂಕ್‌ಗಳು; ಇನ್ನೂ 27 ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಮುಂದುವರಿಕೆ
    News

    ಆರ್‌ಬಿಐ ನಿರ್ಬಂಧದಡಿ 87 ಪಟ್ಟಣ ಸಹಕಾರಿ ಬ್ಯಾಂಕ್‌ಗಳು; ಇನ್ನೂ 27 ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಮುಂದುವರಿಕೆ

    adminBy adminAugust 27, 2026

    ಮಹಾರಾಷ್ಟ್ರದಲ್ಲಿ ಗರಿಷ್ಠ 10 ಬ್ಯಾಂಕ್‌ಗಳು ನಿರ್ಬಂಧದಡಿ; ಕರ್ನಾಟಕದ ನಾಲ್ಕು ಯುಸಿಬಿಗಳಿಗೆ ಆರ್‌ಬಿಐ ನಿರ್ದೇಶನ

    ನವದೆಹಲಿ: ದೇಶದ ನಗರ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮತ್ತಷ್ಟು ಬಿಗಿಗೊಳಿಸಿರುವುದು ಸಂಸತ್ತಿನಲ್ಲಿ ಮಂಡಿಸಲಾದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. 2021ರಿಂದ ಒಟ್ಟು 87 ಪಟ್ಟಣ ಸಹಕಾರಿ ಬ್ಯಾಂಕ್‌ಗಳನ್ನು ಆರ್‌ಬಿಐ ವಿವಿಧ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಇರಿಸಿದ್ದು, 2026ರ ಜುಲೈ 27ರ ವೇಳೆಗೆ 27 ಬ್ಯಾಂಕ್‌ಗಳು ಇನ್ನೂ ನಿಯಂತ್ರಣದ ವ್ಯಾಪ್ತಿಯಲ್ಲಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

    https://chat.whatsapp.com/FCEnlTkAKCC0MGPhXtX4i4
    ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಸಮಾಜವಾದಿ ಪಕ್ಷದ ಸಂಸದ ಪುಷ್ಪೇಂದ್ರ ಸರೋಜ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
    ಆರ್‌ಬಿಐನ All-Inclusive Directions (AID) ಅಡಿಯಲ್ಲಿ ಮುಂದುವರಿದಿರುವ 27 ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಮಹಾರಾಷ್ಟ್ರದ ಪಾಲು ಅತ್ಯಧಿಕವಾಗಿದೆ. ರಾಜ್ಯವಾರು ಅಂಕಿ-ಅಂಶಗಳ ಪ್ರಕಾರ: ಮಹಾರಾಷ್ಟ್ರ – 10 ಬ್ಯಾಂಕ್‌ಗಳು ,ಕರ್ನಾಟಕ – 4 ಬ್ಯಾಂಕ್‌ಗಳು, ಅಸ್ಸಾಂ – 2 ಬ್ಯಾಂಕ್‌ಗಳು, ಗುಜರಾತ್ – 2 ಬ್ಯಾಂಕ್‌ಗಳು, ದೆಹಲಿ – 2 ಬ್ಯಾಂಕ್‌ಗಳು, ಉತ್ತರ ಪ್ರದೇಶ – 2 ಬ್ಯಾಂಕ್‌ಗಳು, ಉಳಿದ ಬ್ಯಾಂಕ್‌ಗಳು ಇತರೆ ರಾಜ್ಯಗಳಲ್ಲಿ ವಿವಿಧ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಇರುವುದಾಗಿ ಸರ್ಕಾರ ತಿಳಿಸಿದೆ.
    2026ರ ಮಾರ್ಚ್‌ 31ರ ವೇಳೆಗೆ ಮೂರೇ Tier-3 ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಬಂಡವಾಳ ಸಮರ್ಪಕತೆ (Capital Adequacy) ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇಂತಹ ಉಲ್ಲಂಘನೆಗಳನ್ನು ತಡೆಯಲು ಆರ್‌ಬಿಐ, ಬ್ಯಾಂಕಿಂಗ್‌ ರೆಗ್ಯುಲೇಶನ್‌ ಆಕ್ಟ್‌, 1949 ಅಡಿಯಲ್ಲಿ ನಿರ್ದೇಶಕರನ್ನು ಪದಚ್ಯುತಗೊಳಿಸುವುದು ಹಾಗೂ ಹಣಕಾಸು ದಂಡ ವಿಧಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕ್‌ಗಳು ಅನಿರೀಕ್ಷಿತ ನಷ್ಟಗಳನ್ನು ತಡೆದುಕೊಳ್ಳಲು ಮತ್ತು ಠೇವಣಿದಾರರ ಹಣವನ್ನು ರಕ್ಷಿಸಲು ಸಾಕಷ್ಟು ಬಂಡವಾಳವನ್ನು ಹೊಂದಿರಬೇಕು. ಆರ್‌ಬೀಯ ಪಟ್ಟಣ ಸಹಕಾರಿ ಬ್ಯಾಂಕ್‌ಗಳನ್ನು ಠೇವಣಿ ಗಾತ್ರದ ಆಧಾರದ ಮೇಲೆ ನಾಲ್ಕು ಹಂತಗಳಾಗಿ (Tier) ವಿಂಗಡಿಸಿದೆ.

    327 ಯುಸಿಬಿಗಳಿಗೆ ದಂಡ; ಕರ್ನಾಟಕದ 16 ಬ್ಯಾಂಕ್‌ಗಳು
    2021ರಿಂದ ಬಂಡವಾಳ ಸಮರ್ಪಕತೆ, ಸಾಲ ವಿತರಣೆ ಮತ್ತು ಆಡಳಿತಾತ್ಮಕ ನಿಯಮಗಳಿಗೆ ಸಂಬಂಧಿಸಿದ ಉಲ್ಲಂಘನೆಗಳ ಹಿನ್ನೆಲೆಯಲ್ಲಿ 327 ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮೇಲೆ ಹಣಕಾಸು ದಂಡ ವಿಧಿಸಲಾಗಿದೆ.
    ರಾಜ್ಯವಾರು ಅಂಕಿ-ಅಂಶಗಳಲ್ಲಿ:
    ಮಹಾರಾಷ್ಟ್ರ – 108
    ಗುಜರಾತ್ – 81
    ತಮಿಳುನಾಡು – 35
    ಉತ್ತರ ಪ್ರದೇಶ – 21
    ಕರ್ನಾಟಕ – 16
    ಇದು ನಗರ ಸಹಕಾರಿ ಬ್ಯಾಂಕ್‌ಗಳ ಆಡಳಿತ, ಸಾಲ ನಿರ್ವಹಣೆ, ಬಂಡವಾಳ ಸ್ಥಿತಿ ಹಾಗೂ ನಿಯಂತ್ರಣ ಪಾಲನೆಯ ಮೇಲೆ ಆರ್‌ಬಿಐ ಹೆಚ್ಚು ಗಮನಹರಿಸಿರುವುದನ್ನು ಸೂಚಿಸುತ್ತದೆ.

    Tier-1 UCBಗಳಿಗೆ 9% CAR; ಇತರರಿಗೆ 12%
    ಆರ್‌ಬಿಐ ನಿಯಮಗಳ ಪ್ರಕಾರ ₹100 ಕೋಟಿವರೆಗೆ ಠೇವಣಿ ಹೊಂದಿರುವ Tier-1 ಯುಸಿಬಿಗಳು ಕನಿಷ್ಠ ಶೇ.9ರ Capital Adequacy Ratio (CAR) ಕಾಯ್ದುಕೊಳ್ಳಬೇಕು. ಇತರೆ ಹಂತಗಳ ನಗರ ಸಹಕಾರಿ ಬ್ಯಾಂಕ್‌ಗಳಿಗೆ ಶೇ.12ರ ಬಂಡವಾಳ ಸಮರ್ಪಕತಾ ಮಾನದಂಡ ಅನ್ವಯಿಸುತ್ತದೆ. ಬ್ಯಾಂಕಿನ ಅಪಾಯಗಳನ್ನು ಎದುರಿಸಲು ಸಾಕಷ್ಟು ಬಂಡವಾಳ ಇರುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ.

    ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂದೇಶವೇನು?
    2021ರಿಂದ 87 ಯುಸಿಬಿಗಳ ವಿರುದ್ಧ ನಿಯಂತ್ರಣ ಕ್ರಮ ಕೈಗೊಂಡಿದ್ದರೂ, 27 ಬ್ಯಾಂಕ್‌ಗಳು ಮಾತ್ರ ಇನ್ನೂ ನಿರ್ಬಂಧದ ಅಡಿಯಲ್ಲಿ ಉಳಿದಿರುವುದು ಕೆಲವು ಬ್ಯಾಂಕ್‌ಗಳು ಆರ್‌ಬಿಐ ಸೂಚನೆಗಳ ಅನುಸರಣೆಯ ಮೂಲಕ ತಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸಿಕೊಂಡಿರುವುದನ್ನು ಸೂಚಿಸುತ್ತದೆ. ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲವು ನಗರ ಸಹಕಾರಿ ಬ್ಯಾಂಕ್‌ಗಳು ಇನ್ನೂ ನಿಯಂತ್ರಣದ ವ್ಯಾಪ್ತಿಯಲ್ಲಿರುವುದು ಬಂಡವಾಳ ಸಮರ್ಪಕತೆ, ಆಡಳಿತ, ಸಾಲದ ಗುಣಮಟ್ಟ ಮತ್ತು ನಿಯಂತ್ರಣ ಪಾಲನೆ ಕ್ಷೇತ್ರಗಳಲ್ಲಿ ನಿರಂತರ ಎಚ್ಚರಿಕೆ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ.

     

    Co Operative ministry Cooperative Registrar RBI cracked whip Reserve Bank Of India urban co-op banks
    Previous Articleಪುತ್ತೂರು ಟೌನ್‌ ಬ್ಯಾಂಕಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶೇಷ ಸಾಧನಾ ಪ್ರಶಸ್ತಿ

    Related Posts

    ಪುತ್ತೂರು ಟೌನ್‌ ಬ್ಯಾಂಕಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶೇಷ ಸಾಧನಾ ಪ್ರಶಸ್ತಿ

    August 27, 2026

    ಆಗಸ್ಟ್ 29ರಂದು ಆತ್ಮಶಕ್ತಿ ಸಹಕಾರ ಸಂಘದಲ್ಲಿ ಸಹಕಾರ ಸಂಘಗಳ ಕಾನೂನು, ಭದ್ರತೆ, ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

    August 26, 2026

    ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಆಯ್ಕೆ

    August 25, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಆರ್‌ಬಿಐ ನಿರ್ಬಂಧದಡಿ 87 ಪಟ್ಟಣ ಸಹಕಾರಿ ಬ್ಯಾಂಕ್‌ಗಳು; ಇನ್ನೂ 27 ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಮುಂದುವರಿಕೆ

    August 27, 2026

    ಪುತ್ತೂರು ಟೌನ್‌ ಬ್ಯಾಂಕಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶೇಷ ಸಾಧನಾ ಪ್ರಶಸ್ತಿ

    August 27, 2026

    ಆಗಸ್ಟ್ 29ರಂದು ಆತ್ಮಶಕ್ತಿ ಸಹಕಾರ ಸಂಘದಲ್ಲಿ ಸಹಕಾರ ಸಂಘಗಳ ಕಾನೂನು, ಭದ್ರತೆ, ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

    August 26, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.