ಮಂಗಳೂರು: ಎಸ್.ಕೆ.ಗೋಲ್ಡ್ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ವರ್ಷಾಚರಣೆ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ಚಿತ್ರ ಸಿಂಚನ-2025 ಸ್ಪರ್ಧೆಯು ಸಂಸ್ಥೆಯ ಸಂಸ್ಥಾಪಕರಾದ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಇವರ ಭಾವಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಕಿರಿಯರ ವಿಭಾಗ (8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ವರೆಗೆ) ಮತ್ತು ಹಿರಿಯರ ವಿಭಾಗ (ಮುಕ್ತ ಪ್ರವೇಶ)ದಲ್ಲಿ ನಡೆಯಲಿದೆ.
https://chat.whatsapp.com/EbVKVnWB6rlHT1mWtsgbch
ಸ್ಪರ್ಧೆಗೆ ಸಂಬಂಧಿಸಿದ ಸೂಚನೆಗಳು: A3 ಸೈಜ್ ಡ್ರಾಯಿಂಗ್ ಶೀಟ್ನಲ್ಲಿ ಚಿತ್ರ ಬರೆಯಬೇಕು, ವಾಟರ್ ಕಲರ್ ಅಥವಾ ಆಕ್ರಿಲಿಕ್ ಕಲರ್ ಬಳಸಬಹುದು. ನೈಜವಾಗಿ ಬಿಡಿಸಿದ ಬಹುವರ್ಣದ ಚಿತ್ರಗಳಾಗಿರಬೇಕು. ಸೃಜನಶೀಲತೆ, ಬಣ್ಣ ಸಂಯೋಜನೆ, ಅಚ್ಚುಕಟ್ಟಾಗಿರುವಿಕೆಗೆ ಆದ್ಯತೆ ನೀಡಲಾಗುವುದು. 31-08-2025ರೊಳಗೆ ತಾವು ಬಿಡಿಸಿದ ಚಿತ್ರದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿಭಾಗ ನಮೂದಿಸಿ ಎಸ್.ಕೆ ಗೋಲ್ಡ್ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, ವಿಶ್ವ ಸೌಧ, ರಾಷ್ಟ್ರೀಯ ಹೆದ್ದಾರಿ -66, ಕೊಟ್ಟಾರ ಚೌಕಿ, ಮಂಗಳೂರು -575006 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

08-09-2025ರಂದು ಸೋಮವಾರ ನಡೆಯಲಿರುವ ಸಂಸ್ಥಾಪಕರ ಜನ್ಮದಿನದ ಕಾರ್ಯಕ್ರಮದಂದು ಅಂತಿಮ ಸುತ್ತಿಗೆ ಆಯ್ಕೆಯಾದ ಎರಡು ವಿಭಾಗದ ತಲಾ 5 ಮಂದಿಗೆ LIVE ART ನಡೆಸಿ ವಿಜೇತರಿಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಬಹುಮಾನಗಳು : ಪ್ರಥಮ ರೂ. 5555/- ಮತ್ತು ಸ್ಮರಣಿಕೆ, ದ್ವಿತೀಯ ರೂ. 3333/- ಮತ್ತು ಸ್ಮರಣಿಕೆ, ತೃತೀಯ ರೂ. 2222/- ಮತ್ತು ಸ್ಮರಣಿಕೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 08242451320, 9972644237, 9845220198.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com






