Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಕ್ಷೇತ್ರದಲ್ಲೂ ರಿಲಯನ್ಸ್‌ ಕಂಪನಿ ಹೂಡಿಕೆ
    News

    ಸಹಕಾರಿ ಕ್ಷೇತ್ರದಲ್ಲೂ ರಿಲಯನ್ಸ್‌ ಕಂಪನಿ ಹೂಡಿಕೆ

    adminBy adminFebruary 28, 2025

    ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 19 ಒಪ್ಪಂದಗಳಿಗೆ ಸಹಿ

    ಭೋಪಾಲ್‌: ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ರಿಲಯನ್ಸ್‌ ಸಹಕಾರಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದು ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದೆ.
    ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ (GIS) ಈ ಯೋಜನೆಗಳನ್ನು ಘೋಷಿಸಲಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಸಹಕಾರಿ ಸಚಿವ ವಿಶ್ವಾಸ್ ಸಾರಂಗ್ ಸಹಕಾರಿ ವಲಯದಲ್ಲಿ 2,305 ಕೋಟಿ ರೂ. ಮೌಲ್ಯದ 19 ಒಪ್ಪಂದಗಳಿಗೆ (MoU) ಸಹಿ ಹಾಕಿದ್ದಾರೆ.
    ಪ್ರಮುಖ ಹೂಡಿಕೆದಾರರ ಸಮ್ಮುಖದಲ್ಲಿ ಹಲವು ಉಪಕ್ರಮಗಳಿಗೆ ಸಹಿ ಹಾಕಲಾಗಿದ್ದು ಈ ಒಪ್ಪಂದಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪರಿವರ್ತನಾತ್ಮಕ ಹೆಜ್ಜೆಯನ್ನು ಇಡಲಿದೆ ಮತ್ತು ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಗೆ ಇದು ಹೊಸ ದಿಕ್ಕು ತೋರಿಸಲಿದೆ.

    https://chat.whatsapp.com/EbVKVnWB6rlHT1mWtsgbch
    ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಯನ್ನು ಪರಚಯಿಸಿದ ಸಚಿವ ವಿಶ್ವಾಸ್ ಸಾರಂಗ್, ಈ ಉಪಕ್ರಮವು ದೇಶಾದ್ಯಂತ ಸಹಕಾರಿ ವಲಯದ ಕಾರ್ಯಚಟುವಟಿಕೆಗಳನ್ನು ಪುನಃರ್ರಚಿಸಲಿದೆ ಎಂದು ಹೇಳಿದರು.
    ಕೇಂದ್ರ ಸಹಕಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಿದ್ಧಾರ್ಥ್ ಮಾತನಾಡಿ, ದೇಶಾದ್ಯಂತ ಒಂದು ಲಕ್ಷ ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS) ಇದ್ದು, 30 ಕೋಟಿಗೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿವೆ. PACSಗಳ ಗಣಕೀಕರಣದೊಂದಿಗೆ, ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಹೊಸ ಮೈಲಿಗಲ್ಲುಗಳನ್ನು ಈ ಪ್ಯಾಕ್ಸ್‌ಗಳು ಸಾಧಿಸಲಿವೆ ಎಂದು ಹೇಳಿದರು.
    ಇದೇ ವೇಳೆ ಸಹಕಾರಿ ವಲಯದಲ್ಲಿ ಪ್ರಮುಖ ಹೂಡಿಕೆಗಳನ್ನು ಘೋಷಿಸಿದ ರಿಲಯನ್ಸ್ ಮತ್ತು ಬೈದ್ಯನಾಥ್‌ ಕಂಪನಿಗಳು ಈ ಯೋಜನೆಯಲ್ಲಿ ತಮ್ಮ ಭಾಗೀದಾರಿಕೆಯನ್ನು ಸಾರಿವೆ.
    ರಿಲಯನ್ಸ್‌ನ ಕುಮಾರ್ ಅಭಿಷೇಕ್, ಪ್ರತಿಭಾ ಸಿಂಟೆಕ್ಸ್‌ನ ಶ್ರೇಯಸ್ಕರ್ ಚೌಧರಿ, ಅಗ್ರಿವಿಸ್ತಾದ ರಾಜೀವ್ ಸಿಂಗ್, ಬೈದ್ಯನಾಥ್‌ನ ಅನಿರುದ್ಧ್ ಗೌರ್, ಭಾರತೀಯ ಬೀಜ್‌ನ ಜೆ.ಪಿ. ಸಿಂಗ್, ಮೆಜೆಸ್ಟಿಕ್ ಬಾಸ್ಮತಿಯ ವಿಜ್ಞಾನ್ ಲೋಧಾ, ಆರ್‌ಎಂ ಗ್ರೂಪ್‌ನ ಅನಿಮೇಶ್ ಜೈನ್, ಮಶ್ರೂಮ್ ವರ್ಲ್ಡ್‌ನ ಸಮೀರ್ ಸಾಗರ್, ವೀ ವಿನ್‌ನ ಅಭಿಷೇಕ್ ಗುಪ್ತಾ, ನ್ಯೂಟ್ರಾಲಿಸ್ ಕೃಷಿ ಉತ್ಪಾದಕ ಸಹಕಾರ ಸಂಘದ ಪ್ರದೀಪ್ ದ್ವಿವೇದಿ ಮತ್ತು ಸವಿರ್ ಬಯೋಟೆಕ್‌ನ ಸಂದೀಪ್ ಸುದಾನ್ ಮೊದಲಾದವರು ಭಾಗವಹಿಸಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Cooperative Public-Private Partnership CPPP GIS Global Investors Summit Madhya Pradesh Mohan Yadav Vishwas Sarang
    Previous Articleಮಾರ್ಚ್‌ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
    Next Article ಸೆಬಿ ನೂತನ ಮುಖ್ಯಸ್ಥರಾಗಿ ತುಹಿನ್‌ ಕಾಂತ ಪಾಂಡೆ ನೇಮಕ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.