Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
    News

    ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

    adminBy adminOctober 18, 2024

    ಹಿರೇಕೆರೂರು: ಶ್ರೀ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ರತ್ನಾಕರ ಎಂಬ ಹೆಸರಿನಿಂದ ಕಾಡಿನ ದಾರಿಯಲ್ಲಿ ಬರುವವರನ್ನು ಅಡ್ಡಗಟ್ಟಿ ಬೆದರಿಸುತ್ತಿದ್ದ. ಅಂಥ ರತ್ನಾಕರನಿಗೆ ಸಪ್ತ ಋಷಿಗಳ ದರುಶನವಾಗಿ ಮನಸ್ಸು ಪರಿವರ್ತನೆಯಾಗಿ ಮಹಾಮಾನವತಾವಾದಿಯಾಗಲು ಹಂಬಲಿಸಿ ತಪಸ್ಸು ಕೈಗೊಂಡು ತಪಸ್ಸಿನಲ್ಲಿಯೇ ಲೀನವಾದಾಗ ಅವರ ಸುತ್ತಲೂ ಹುತ್ತ ಬೆಳೆದು ಮತ್ತೆ ಸಪ್ತ ಋಷಿಗಳಿಂದಲೇ ತಪಸ್ಸಿನಿಂದ ಜಾಗೃತನಾಗಿ ಇಂದ್ರನಿಂದ ಪ್ರೇರೇಪಿತನಾಗಿ ರಾಮಾಯಣ ಮಹಾಕಾವ್ಯ ಮಹರ್ಷಿ ವಾಲ್ಮೀಕಿಯಾದ. ಮನುಷ್ಯ ಜೀವನದಲ್ಲಿ ತಪ್ಪು ಮಾಡುವುದು ಸಹಜ, ಮುಂದೆ ಅದನ್ನು ತಿದ್ದಿಕೊಂಡು ಪರಿವರ್ತನೆಯಾಗಿ ಮಹಾ ಮಾನವನಾಗುವುದೇ ಮನುಷ್ಯನ ಧ್ಯೇಯವಾಗಬೇಕು ಎಂಬುದನ್ನು ಮಹಾತಪಸ್ವಿ ವಾಲ್ಮೀಕಿ ಜೀವನದಿಂದ ನಾವೆಲ್ಲರೂ ಕಲಿಯಬೇಕು ಎಂದು ಇಲ್ಲಿನ ಸಹಕಾರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್‌.ವೀರಭದ್ರಯ್ಯ ಹೇಳಿದರು.

    https://chat.whatsapp.com/Ge11n7QCiMj5QyPvCc0H19
    ಹಿರೇಕೆರೂರು ಸಹಕಾರಿ ವಿದ್ಯಾಸಂಸ್ಥೆಯ ಬಿ.ಆರ್.ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಎಸ್.ಎಸ್.ಪಾಟೀಲ ಪಿಹೆಚ್.ಡಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಮಹಾತಪಸ್ವಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಶ್ರೀ ರಾಮಚಂದ್ರ, ಸೀತೆ, ಲಕ್ಷ್ಮಣ, ರಾವಣ, ಕುಂಭಕರ್ಣ, ಶೂರ್ಪನಖಿ ಈ ಮಹಾಕಾವ್ಯದಲ್ಲಿ ಪ್ರತಿಯೊಂದು ಪಾತ್ರಗಳೂ ಆದರ್ಶವನ್ನು ಎತ್ತಿ ಹಿಡಿಯುತ್ತವೆ. ಹೀಗೆ ಬೇಡನಾಗಿದ್ದವನು ಭಾರತೀಯ ಸಂಸ್ಕೃತಿಗೆ ಒಂದು ಸಾಂಸ್ಕೃತಿಕ ಮಹಾಕಾವ್ಯ ನೀಡಿ ಪುನೀತರಾಗಿದ್ದಾರೆ. ಅಂತವರ ಬದುಕು ನಮ್ಮೆಲ್ಲರಿಗೂ ಬದುಕಿನಲ್ಲಿ ಅಂಥ ಮಹತ್ವದ ಪರಿವರ್ತನೆ ತರಲಿ ಎಂದು ಅಭಿಪ್ರಾಯಪಟ್ಟರು.
    ಹಿರಿಯ ಉಪನ್ಯಾಸಕರಾದ ಸಿ.ಆರ್.ದೂದೀಹಳ್ಳಿ, ಪಿ.ಎಂ.ವಿಜಯಕುಮಾರ, ಪ್ರವೀಣ ಕೂರಗೆರ, ಕಿರಣ ಬಾಗಲರ, ಪ್ರಶಾಂತ ಬಿ.ಎಂ, ಮಲ್ಲಪ್ಪ ಪತ್ತಾರ, ಲಿಂಗರಾಜ ಹಲವಾಲ, ವಿರೂಪಾಕ್ಷಪ್ಪ ಎಸ್.ಕೆ, ಸತೀಶ ಲಮಾಣಿ, ಮಂಜು ನಾಯ್ಕ, ಸುನಿತಾ ದಾಸನಕೊಪ್ಪ, ಎಂ.ವ್ಹಿ.ಬಾಳಿಕಾಯಿ, ಮಂಜುಳಾ ಕಣಗೋಟಗಿ, ಸುರೇಶ ನಾಯ್ಕ ಬಿ. ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Co Operative ministry Cooperative Department Hirekerura Thaluka Vidyavardhaka Souharda Sahakari Sangha Sahakara Spandana Spandana Trust
    Previous Articleಕೋಆಪರೇಟಿವ್‌ ಸೂಪರ್‌ ಮಾರ್ಕೆಟ್‌ ಗುಜ್ಕೋ ಮಾಲ್‌ ಆರಂಭ
    Next Article ವಿಶೇಷ ಠೇವಣಿ ಮೂಲಕ ಒಂದೇ ತಿಂಗಳಲ್ಲಿ 2.76 ಕೋಟಿ ರೂ. ಸಂಗ್ರಹ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.