Close Menu
    Top News

    ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೂ. 3.80 ಲಕ್ಷ ರೈತ ಕಲ್ಯಾಣ ನಿಧಿ ವಿತರಣೆ

    August 18, 2026

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಫಲ ಸೌಹಾರ್ದ ಸಹಕಾರಿ ಸಂಘದ ಏಳನೇ ವಾರ್ಷಿಕ ಮಹಾಸಭೆ
    News

    ಸಫಲ ಸೌಹಾರ್ದ ಸಹಕಾರಿ ಸಂಘದ ಏಳನೇ ವಾರ್ಷಿಕ ಮಹಾಸಭೆ

    adminBy adminAugust 18, 2026

    ರೂ.1.13 ಕೋಟಿ ಲಾಭ; ಶೇ.13 ಡಿವಿಡೆಂಡ್ ಘೋಷಣೆ

    ಮಂಗಳೂರು: ಸಫಲ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ಏಳನೇ ವಾರ್ಷಿಕ ಮಹಾಸಭೆ ಭಾನುವಾರ ಕೈಕಂಬದಲ್ಲಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

    https://chat.whatsapp.com/FCEnlTkAKCC0MGPhXtX4i4
    ಸ್ಥಾಪಕ ನಾಮನಿರ್ದೇಶಿತ ನಿರ್ದೇಶಕ ಯು.ಬಿ. ವಿಜಯಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ವಾರ್ಷಿಕ ವರದಿ ಮಂಡಿಸಿ, ಸಂಘದಲ್ಲಿ ಪ್ರಸ್ತುತ 5,376 ಸದಸ್ಯರಿದ್ದು, ಸಂಘವು ರೂ.1.13 ಕೋಟಿ ಒಟ್ಟು ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ ಎಂದು ತಿಳಿಸಿದರು. ಸಂಘದ ನಿರ್ದೇಶಕ ಮಾಧವ ಮಾವೆ ನಿರ್ದೇಶಕರ ಪರವಾಗಿ ಮಾತನಾಡಿದರು. ಅಧ್ಯಕ್ಷ ಸಂಜೀವ ಅಡ್ಯಾರ್ ಅವರು ಸಂಘದ ಮುಂದಿನ ಕಾರ್ಯಯೋಜನೆಗಳು ಹಾಗೂ ಭವಿಷ್ಯದ ಅಭಿವೃದ್ಧಿಯ ಕುರಿತು ವಿವರಿಸಿದರು.


    ಸುಕೇಶ್ ಪ್ರಾರ್ಥನೆ ನೆರವೇರಿಸಿದರು. ನಂತರ ಸಂಘದ ಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಹಾಗೂ ವರದಿ ವರ್ಷದಲ್ಲಿ ಅಗಲಿದ ನಿರ್ದೇಶಕರು ಮತ್ತು ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿರ್ದೇಶಕ ಮಹಾಬಲ ಅಡ್ಯಾರ್ ಸ್ವಾಗತಿಸಿದರು. ಸದಸ್ಯರಾದ ಪ್ರಕಾಶ್ ಎಚ್., ಸುಂದರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪುನೀತ್ ಕುಮಾರ್ ಶೆಟ್ಟಿ, ಮನೋಹರ್, ಪದ್ಮನಾಭ ಪಜೀರ್ ಹಾಗೂ ಯೋಗಿನಿ ಸೋಮೇಶ್ವರ ಸೇರಿದಂತೆ ಮತ್ತಿತರರು ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
    ರಾಷ್ಟ್ರೀಯ ಮಟ್ಟದ ಮಹಿಳಾ ಕ್ರೀಡಾಪಟು, ಸಂಘದ ಸದಸ್ಯೆ ರೋಹಿಣಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕಿ ಮೋಹಿನಿ ಎಚ್. ಅವರು ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಪ್ರೇಮಾನಂದ ವಿ. ಹಾಗೂ ನಿರ್ದೇಶಕರಾದ ವೆಂಕಟೇಶ್, ತಿರುಮಲೇಶ್, ಅನಿತಾ,ತಿ ಸತ್ಯಪ್ರಭಾ, ಭಾಸ್ಕರ ಸವಲಗಿ, ಅನಿಲ್ ಅತ್ತಾವರ ಹಾಗೂ ಮಾಧವ ಸುವರ್ಣ ಉಪಸ್ಥಿತರಿದ್ದರು. ನಿರ್ದೇಶಕ ಹರಿದಾಸ್ ಯು. ವಂದಿಸಿದರು.

     

    Banking Co Operative ministry Cooperative Cooperative Department Cooperative Registrar Sanjeeva Adyar Saphala Souharda Sahakari Sangha
    Previous Articleದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನಿಂದ 80ನೇ ಸ್ವಾತಂತ್ರ್ಯೋತ್ಸವ
    Next Article ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಆಟಿದ ಪೊಲಬು

    Related Posts

    ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೂ. 3.80 ಲಕ್ಷ ರೈತ ಕಲ್ಯಾಣ ನಿಧಿ ವಿತರಣೆ

    August 18, 2026

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೂ. 3.80 ಲಕ್ಷ ರೈತ ಕಲ್ಯಾಣ ನಿಧಿ ವಿತರಣೆ

    August 18, 2026

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.