Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ವಲಯದಲ್ಲೇ ವಿಭಿನ್ನ ಯೋಜನೆ, ಮಾನವೀಯ ಕಾರ್ಯಕ್ಕೆ ಉತ್ತಮ ನಿದರ್ಶನ
    News

    ಸಹಕಾರ ವಲಯದಲ್ಲೇ ವಿಭಿನ್ನ ಯೋಜನೆ, ಮಾನವೀಯ ಕಾರ್ಯಕ್ಕೆ ಉತ್ತಮ ನಿದರ್ಶನ

    adminBy adminSeptember 13, 2024

    ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ತಥಾಸ್ತು ಯೋಜನೆ ಸೆ.14ರಂದು ಹಸ್ತಾಂತರ

    ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕಿಗೆ ಬದುಕಿಗೊಂದು ಸೂರು ಯೋಜನೆ

    ಉಡುಪಿ: ಠೇವಣಿ ಸಂಗ್ರಹ, ಸಾಲ ವಿತರಣೆ ಇವೇ ಮೊದಲಾದ ಆರ್ಥಿಕ ವಹಿವಾಟುಗಳಲ್ಲೇ ವ್ಯಸ್ತವಾಗುತ್ತಿರುವ ಕೋಆಪರೇಟಿವ್‌ ಸೊಸೈಟಿಗಳು ವಿಭಿನ್ನ ಯೋಜನೆ, ಯೋಚನೆಗಳ ಮೂಲಕ ಮಾನವೀಯ ಕಾರ್ಯವನ್ನೂ ಮಾಡಬಲ್ಲವು ಎಂಬುದಕ್ಕೆ ಉಡುಪಿ ಜಿಲ್ಲೆಯ ಕೋಡಿ ಕನ್ಯಾಣದ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉತ್ತಮ ನಿದರ್ಶನ ನೀಡಿದೆ. ತಮ್ಮ ಸಂಸ್ಥೆಯ ಬಡ ಗ್ರಾಹಕಿಯೊಬ್ಬರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳನ್ನು ಸೇರಿಸಿಕೊಂಡು ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ.

    https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK

    ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತನ್ನ ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರುವಾಸಿಯಾಗಿದೆ. ಜನಪರ ಕಾರ್ಯಚಟುವಟಿಕೆ, ಸಮಾಜಮುಖಿ ಕೈಂಕರ್ಯದಲ್ಲಿ ಗ್ರಾಹಕರ ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸಿದೆ. ಇದೇ ಕಾರ್ಯದಲ್ಲಿ ಮುಂದುವರಿದು ಸಂಸ್ಥೆಯ ಗ್ರಾಹಕಿ ಇಳಿ ವಯಸ್ಸಿನ ಭವಾನಿ ಜಿ.ನಾಯ್ಕ್‌ ಅವರ ಮನೆ ಸೋರುತ್ತಿರುವುದನ್ನು ಮನಗಂಡು ಅವರ ಮನೆಗೆ ಭೇಟಿ ನೀಡಿದ ಆಡಳಿತ ಮಂಡಳಿ ಪರಿಶೀಲಿಸಿತು. ಈ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ಕೂಲಂಕಶವಾಗಿ ಪರಿಶೀಲಿಸಿ ಗೃಹ ನಿರ್ಮಾಣ ಮಾಡಿಕೊಡುವ ಸಂಕಲ್ಪ ಮಾಡಲಾಯಿತು. ಭವಾನಿ ಜಿ.ನಾಯಕ್‌ ಅವರಿಗೆ ಮನೆ ನಿರ್ಮಾಣದ ಬಗ್ಗೆ ಸೊಸೈಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಯೋಜನೆ ರೂಪಿಸಿ ಕೆಲಸಕ್ಕೆ ಮುಂದಾದರು. ಇದಕ್ಕಾಗಿ ತಥಾಸ್ತು ಎಂಬ ಹೆಸರಿನಲ್ಲಿ ಸ್ಥಳೀಯ ಹಲವಾರು ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವು ಪಡೆದು ಕ್ರಿಕೆಟ್‌ ಟೂರ್ನಿ ಆಯೋಜಿಸಿ ಒಂದಷ್ಟು ಧನ ಸಂಗ್ರಹ ಮಾಡಿದರು. ಬಳಿಕ ಅದೃಷ್ಟ ಯೋಜನೆಯ ಲಕ್ಕಿಡಿಪ್‌ ಮೂಲಕವೂ ಒಂದಷ್ಟು ಆರ್ಥಿಕ ನೆರವು ಕ್ರೋಡೀಕರಿಸಿದರು. ಈ ಇಡೀ ಕೆಲಸದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಅವರು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದರು.

    ಸೊಸೈಟಿಯ ಈ ಕಾರ್ಯಕ್ಕೆ ಊರಿನ ಸಂಘ ಸಂಸ್ಥೆಗಳು ಸಾಥ್‌ ನೀಡಿದವು. ಸುಮಾರು 8-9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದ್ದು ಸುಮಾರು 4-5 ಲಕ್ಷ ರೂ.ನಷ್ಟು ವೆಚ್ಚವನ್ನು ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರೇ ಭರಿಸಿದ್ದಾರೆ. ಸಹಕಾರಿಯ ಲಾಭಾಂಶದಲ್ಲೂ ಒಂದಷ್ಟು ಕೊಡುಗೆ ಭವಾನಿ ಜಿ.ನಾಯಕ್‌ ಅವರ ಮನೆಗೆ ತೆಗೆದಿರಿಸಲಾಯಿತು. ನೋಡನೋಡುತಿದ್ದಂತೆ ಭವಾನಿ ಜಿ.ನಾಯಕ್‌ ಅವರಿಗೆ ಸುಂದರವಾದ ಮನೆ ನಿರ್ಮಾಣವಾಗಿದ್ದು ಇದೀಗ ತಮ್ಮ ಬದುಕಿನ ಇಳಿ ವಯಸ್ಸಿನಲ್ಲಿ ಅವರು ಭದ್ರವಾದ ಸೂರಿನಲ್ಲಿ ತಮ್ಮ ಸೊಸೆಯಂದಿರ ಜೊತೆಗೆ ನೆಮ್ಮದಿಯ ಜೀವನ ನಡೆಸಬಹುದು.


    ತಮ್ಮ ಸಂಸ್ಥೆಯ ಗ್ರಾಹಕಿಗೆ ಭದ್ರವಾದ ಸೂರು ಕಲ್ಪಿಸಿಕೊಟ್ಟಿರುವ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಾನವೀಯ ಕೈಂಕರ್ಯಕ್ಕೆ, ಮಾದರಿ ಕಾರ್ಯಕ್ಕೆ ಎಲ್ಲ ಕಡೆಯಿಂದಲೂ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.


    ಸೆ.14ರಂದು ಸಂಜೆ ಭವಾನಿ ಜಿ.ನಾಯಕ್‌ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಉದ್ಯಮಿ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಜಿ.ಕುಂದರ್‌ ಮನೆ ಹಸ್ತಾಂತರಿಸಲಿದ್ದಾರೆ. ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸುವರು. ಉದ್ಯಮಿ ಶಿವ ಎಸ್‌.ಕರ್ಕೇರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್‌ ಎಸ್.ಕೆ, ಕೋಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಗೀತಾ ಗೋಪಾಲ ಖಾರ್ವಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್‌ ಬಿ.ಎಸ್‌., ಕೋಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್‌, ಉದ್ಯಮಿ ಅಂತೋನಿ ಡಿಸೋಜ ಕೋಡಿ ಕನ್ಯಾಣ ಮೊದಲಾದವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಮತ್ತು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Amit Shah Amith Shah Anand Kundar Banking Co Operative ministry Cooperative Cooperative Department Cooperative Registrar Dr.M.N.Rajendra Kumar Kodi Kanyana Raghavendra Karkera Sahakara Spandana Shambhu Poojary Shree Ramanjaneya Vividhoddesha Souharda Sahakari Sangha Souharda Sahakari Spandana Spandana Cooperative Spandana NEws Spandana Trust Thatastu Vijay B S
    Previous Articleಎಸ್‌.ಕೆ ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋಆಪರೇಟಿವ್‌ ಸೊಸೈಟಿಯಿಂದ ಸ್ನೇಹ ಭಾರತಿ ವಿದ್ಯಾಸಂಸ್ಥೆಯ “ನಮ್ಮ ಹಿರಿಯರ ಮನೆಗೆ” ದಿನಬಳಕೆ ವಸ್ತುಗಳ ಹಸ್ತಾಂತರ
    Next Article ಉಡುಪಿ ಸಿಂಡಿಕೇಟ್‌ ಕ್ರೆಡಿಟ್‌ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯಿಂದ ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗೆ ದಿನಸಿ ಸಾಮಗ್ರಿ ವಿತರಣೆ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.