Close Menu
    Top News

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ
    News

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    adminBy adminSeptember 11, 2026

    ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಆಡಳಿತ ಕಚೇರಿಯ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಕೆ.ನೀಲಯ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

    https://chat.whatsapp.com/FCEnlTkAKCC0MGPhXtX4i4

    2025-26ನೇ ಸಾಲಿನ ವಾರ್ಷಿಕ ವರದಿಯನ್ನು ಉಪಾಧ್ಯಕ್ಷರಾದ ಶ್ರೀಮತಿ ಬಬಿತಾ ಎಂ. ರವರು ವಾಚಿಸಿದರು, 2024-25ರ ಅಂದಾಜು ಆಯವ್ಯಯಕ್ಕಿಂತ ಹೆಚ್ಚು ಖರ್ಚಾದ ವಿವರವನ್ನು ಸಿಬ್ಬಂದಿಯಾದ ಶ್ರೀಮತಿ ಪ್ರಮೋದರವರು ವಾಚಿಸಿದರು, ಅಂದಾಜು ಆಯವ್ಯಯ ವೆಚ್ಚವನ್ನು ನಿರ್ದೇಶಕರಾದ ಶ್ರೀ ಸೀತಾರಾಮ್ ವಾಚಿಸಿದರು, ಜಮಾ ಖರ್ಚು ತಖ್ತೆಯನ್ನು, ಅನುಪಾಲನಾ ವರದಿಯನ್ನು ಹಿರಿಯ ಸಿಬ್ಬಂದಿ ಶ್ರೀಮತಿ ದಿವ್ಯ‌ ಡಿ ಅಮೀನ್ ವಾಚಿಸಿದರು. ನಿವ್ವಲ ಲಾಭ ವಿಂಗಡಣೆಯನ್ನು ಶ್ರೀಮತಿ ಲತಾ ರವರು ವಾಚಿಸಿದರು.

    ಸಹಕಾರ ಸಂಘವು ವರದಿ ಸಾಲಿನಲ್ಲಿ 20.48 ಕೋಟಿ ವ್ಯವಹಾರ ನಡೆಸಿ 12.57 ಲಕ್ಷ ಲಾಭಾಂಶ ಗಳಿಸಿದ್ದು.ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನೀಲಯ ಕೋಟ್ಯಾನ್ ರವರು ಗ್ರಾಹಕರಿಗೆ ಶೇಕಡಾ 09 ಡಿವಿಡೆಂಡ್ ಘೋಷಿಸಿದರು.

    ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.

    ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶಶಿಕುಮಾರ್, ಕೃಷಿ ಕ್ಷೇತ್ರದಲ್ಲಿ ವಿಜಯ ಶೆಟ್ಟಿ ಅಜಾರ್ ಗುತ್ತು, ಸಾಮಾಜಿಕ ಕ್ಷೇತ್ರದಲ್ಲಿ ಕೃಷ್ಣಾನಂದ ಡಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಗುರುತಿಸಿ, ಸನ್ಮಾನಿಸಲಾಯಿತು.

    ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ನಿಟ್ಟೆ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸರಕಾರಿ ಕೋಟದಡಿ ದಾಖಲಾಗುತ್ತಿರುವ ಕುಮಾರಿ ನಿಧಿ ಜೆ ಶೆಟ್ಟಿ ಅವರನ್ನು ಗೌರವಿಸಲಾಯಿತು.

    ಸಹಕಾರ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀ ನೀಲಯ ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಧರ್ ಶೆಟ್ಟಿ ಕೆರಮ ಮುಂತಾದವರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಪ್ರಾರಂಭದಲ್ಲಿ ಶಶಿಧರ್ ಶೆಟ್ಟಿ ಕೆರಮ ಸ್ವಾಗತಿಸಿದರು, ಶ್ರೀ ಅಮರ್ ಪ್ರಸಾದ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಧರ ಶೆಟ್ಟಿ ಕೆರಮ ವಂದನಾರ್ಪಣೆಗೈದರು.

    Co Operative ministry Cooperative Cooperative Department K Neelaya Kotyan Nandini Patthina sahakara Sangha Kateel Shashidhara Shetty Kerama
    Previous Articleವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    Related Posts

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಂದಿನಿ ಪತ್ತಿನ ಸಹಕಾರ ಸಂಘ ನಿಯಮಿತ ಕಟೀಲು ವಾರ್ಷಿಕ ಸಾಮಾನ್ಯ ಸಭೆ, ಸಾಧಕರಿಗೆ ಸನ್ಮಾನ

    September 11, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾವಿರ ಕೋಟಿ ವ್ಯವಹಾರದ ಸಂಭ್ರಮ: ₹4.04 ಕೋಟಿ ದಾಖಲೆಯ ಲಾಭ! ಶೇಕಡಾ 22 ಡಿವಿಡೆಂಡ್ ಘೋಷಣೆ

    September 10, 2026

    ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 10, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.