ಉಡುಪಿ: ರಾಜ್ಯಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ಉಡುಪಿ ಸಂತೆಕಟ್ಟೆಯ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿಯ 2025-26ರಿಂದ 2030-31ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಬಿ.ಎನ್ ಶಂಕರ ಪೂಜಾರಿ ಬ್ರಹ್ಮಾವರ ಹಾಗೂ ಉಪಾಧ್ಯಕ್ಷರಾಗಿ ರಾಜು ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

https://chat.whatsapp.com/FCEnlTkAKCC0MGPhXtX4i4
ಸೊಸೈಟಿಯ ನಿರ್ದೇಶಕರಾಗಿ ಗೋವಿಂದ ಬಾಬು ಪೂಜಾರಿ ಬೈಂದೂರು, ಪ್ರಕಾಶ್ ಕೆ ಕೋಟ್ಯಾನ್ ಮಣಿಪುರ, ಸುರೇಶ್ ಎನ್ ಪೂಜಾರಿ ಬೆಂಗಳೂರು, ವಿ.ಗಂಗಾಧರಪ್ಪ ಬೆಂಗಳೂರು, ಎಂ.ಎಸ್ ಶಿವರಾಜ್ ಬೆಂಗಳೂರು, ಕೆ.ವೀರೇಶ್ ಸುವರ್ಣ ಕಟಪಾಡಿ, ಶಿಲ್ಪಾ ಗಂಗಾಧರ ಸುವರ್ಣ ಕಟಪಾಡಿ, ಧೀರಜ್ ಕುಂದಾಪುರ, ಕಾಮರಾಜ್ ಸುವರ್ಣ ಕುಂಜಿಬೆಟ್ಟು, ರಿತೇಶ್ ಕುಮಾರ್ ಬ್ರಹ್ಮಾವರ, ಆದರ್ಶ ಎಂ.ಮುದ್ರಾಡಿ, ಶಿವಮೊಗ್ಗ, ಮೀರಾ ಸದಾನಂದ ಬ್ರಹ್ಮಾವರ, ವಿನಯ್ ಕುಮಾರ್ ಕೆ ಶಿವಮೊಗ್ಗ, ಆದರ್ಶ ಕೆ ಶಿವಮೊಗ್ಗ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸುನಿಲ್ ಕುಮಾರ್ ಸಿ.ಎಂ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.

