ಮಂಗಳೂರು: ಇಲ್ಲಿನ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಇವರ ವತಿಯಿಂದ ಜಪ್ಪು ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಭಾನುವಾರ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಲತಾ ನಾರಾಯಣ ಆಳ್ವ, ಪೂರ್ಣಿಮಾ ಬಿ.ರಾವ್, ಧನ್ವಿ ಎಸ್.ಜೆ ರಾವ್, ವಿಜೇತಾ ರಾವ್, ಚಂದ್ರಿಕಾ ಡಿ.ರಾವ್ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಮಂಗಳೂರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಮಾಜಿ ಕಾರ್ಪೊರೇಟರ್ ಕೆ.ಭಾಸ್ಕರ ರಾವ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಜಯಪ್ರಕಾಶ್, ಎ.ಕೃಷ್ಣ ಭಟ್, ಸುಂದರ ಸಾಲ್ಯಾನ್, ಸುಪ್ರೀತ್ ಜೆಕೆ, ಸದಾಶಿವ ಅಮೀನ್ ಹಾಜರಿದ್ದರು. ಸನ್ಮಾನಿತರ ಪರವಾಗಿ ಚಂದ್ರಿಕಾ ಡಿ.ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಹರೀಶ್ ಕಾರ್ಯಕ್ರಮ ಸಂಯೋಜಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

