ವಿಜಯಪುರ: ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ವತಿಯಿಂದ ವಿಜಯಪುರ ಮಹಾನಗರದ ಆನಂದ ನಗರ ಬಿಎಲ್ಡಿಇ ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆಯ ಭಾವಸಾರ ಕ್ಷತ್ರಿಯ ಸಭಾಭವನದಲ್ಲಿ ಫೆಬ್ರವರಿ 18ರಂದು ಬೆಳಗ್ಗೆ 10.30ಕ್ಕೆ ಸೌಹಾರ್ದ ಸಹಕಾರಿಗಳ ಸಮಾವೇಶ ಏರ್ಪಡಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳಿಯ ಶಾಂತಾಶ್ರಮದ ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಸಹಕಾರಿಗಳೂ, ಮಾರ್ಗದರ್ಶಕರಾದ ಅರವಿಂದ ಜಿ.ದೇಶಪಾಂಡೆ ಹಾಗೂ ರಮೇಶ ವೈದ್ಯ ಮಾರ್ಗದರ್ಶನ ಮಾಡಲಿದ್ದಾರೆ. ಸೌಹಾರ್ದ ಫೆಡರಲ್ ಅಧ್ಯಕ್ಷ ನಂಜನಗೌಡ ಮತ್ತು ಸಹಕಾರ ಭಾರತಿ ಅಧ್ಯಕ್ಷ ಪ್ರಭುದೇವ ಮಾಗನೂರ ಉಪಸ್ಥಿತರಿರುವರು. ವಿಜಯಪುರ ಜಿಲ್ಲೆಯ ಸಹಕಾರಿಗಳಾದ ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ವಿಧಾನಸಭಾ ಸದಸ್ಯರಾದ ಅರುಣ ಶಹಾಪುರ ಉಪಸ್ಥಿತರಿರುವರು.
ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಭಾಗ್ಯಶ್ರೀ ಕುಂಬಾರ, ಸಹಕಾರ ಭಾರತಿಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಹಕಾರಿಗಳು ಉಪಸ್ಥಿತಿರುವರು. ನೂತನವಾಗಿ ಸ್ಥಾಪನೆಯಾದ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಸಂಜಯ ಪಾಟೀಲ (ಕನಮಡಿ), ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಅರುಣ ವಾರದ, ಸುರೇಶ ಬಿರಾದಾರ, ಅರುಣ ಮಠ, ಸಿದ್ದು ಮಲ್ಲಿಕಾರ್ಜುನ್ಮಠ, ಬಾಲಚಂದ್ರ ಮುಂಜಾನೆ, ಆರ್ ಡಿ ಕುಲಕರ್ಣಿ, ಚಂದ್ರಶೇಖರ ಪಾಟೀಲ, ರಾಜು ಹಂಚಾಟೆ, ಯಮನಪ್ಪ ಸಾತಿಹಾಳ, ಮಲ್ಕಪ್ಪ ರೊಟ್ಟಿ, ಮೌನೇಶ ಪತ್ತಾರ, ಸತೀಶ ಶಿಂತ್ರೆ, ವಿವೇಕಾನಂದ ಶಿರೋಳಕರ ಹಾಗೂ ಸಹಕಾರ ಭಾರತಿ ಪದಾಧಿಕಾರಿಗಳಾದ ಪರಶುರಾಮ ಚಿಂಚಲಿ ಮತ್ತು ದೀಪಕ ಶಿಂತ್ರೆ ಕಾರ್ಯಕ್ರಮ ಆಯೋಜಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



