ಉಡುಪಿ: ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಶುಕ್ರವಾರ ಉಡುಪಿ ಚಿತ್ತರಂಜನ್ ವೃತ್ತದ ಉಪೇಂದ್ರ ಕಟ್ಟಡದ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
https://chat.whatsapp.com/FCEnlTkAKCC0MGPhXtX4i4
ನೂತನ ಸೊಸೈಟಿಯನ್ನು ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿ, ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ತಮ್ಮ ಮುಂದಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಾಜಕ್ಕೆ ಆರ್ಥಿಕ ಶಕ್ತಿಯನ್ನು ನೀಡುವಲ್ಲಿ ಗುರಿಯನ್ನು ತಲುಪಲಿ ಎಂದರು.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಸಮಾಜದ ಏಳಿಗೆಗಾಗಿ ಆರ್ಥಿಕ ವ್ಯವಸ್ಥೆಗೆ ಉತ್ತಮ ಕೊಡುಗೆಯನ್ನು ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನೀಡಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವಕರ್ಮ ಸಹಕಾರ
ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಅವರು, ಸಹಕಾರ ಸಂಸ್ಥೆಗಳ ಸಮಾಜದ ಬೆಳವಣಿಗೆಗೆ ಪೂರಕ ಹಾಗೂ ಪರಿಣಾಮಕಾರಿ ಸಾಧನಗಳು. ಹೊಸ ರೀತಿಯ ಸಂಸ್ಥೆಗಳಿಂದ ಸಮಾಜವು ಬೆಳವಣಿಗೆ ವೇಗ ಸಿಗುತ್ತದೆ. ಈ ನಿಟ್ಟಿನಲ್ಲಿ ಉಡುಪಿ ಗೋಲ್ಡ್ ಸ್ಮಿತ್ಸ್ ಕೋಆಪರೇಟಿವ್ ಸಂಸ್ಥೆಯು ಸಮಾಜಕ್ಕೆ ವರದಾನವಾಗಿ ಪರಿಣಮಿಸಲಿ ಎಂದು ಶುಭಾಶಯವನ್ನು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಉಪಾಧ್ಯಕ್ಷರಾದ ಹರೀಶ ಎಂ.ಆಚಾರ್ಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಎಸ್.ಕೆ. ಗೋಲ್ಡ್ ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಉಪೇಂದ್ರ ಆಚಾರ್ಯ ಪೆರ್ಡೂರು, ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಕೆ. ಜಯರಾಮ ಆಚಾರ್ಯ ಶುಭ ಹಾರೈಸಿದರು. ಸೊಸೈಟಿಯ ನಿರ್ದೇಶಕರಾದ ದಿವಾಕರ್ ವಿ. ಆಚಾರ್ಯ, ರತ್ನಾಕರ್, ಬುಡ್ನಾರು ಸದಾಶಿವ ಆಚಾರ್ಯ, ಸುಮಂತ್ ಆಚಾರ್ಯ, ಪ್ರವೀಣ್ ಆಚಾರ್ಯ ನಿಟ್ಟೆ ಪ್ರೇಮಾನಂದ ಆಚಾರ್ಯ, ಗೀತಾ ಶಿವರಾಮ, ಜಯಶ್ರೀ, ಪುರೋಹಿತ್ ಶಶಿಧರ್ ಆಚಾರ್ಯ, ಕೃಷ್ಣಮೂರ್ತಿ ಆಚಾರ್ಯ, ರಾಜೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ನಿರ್ದೇಶಕರಾದ ವೆಂಕಟೇಶ್ ಆಚಾರ್ಯ ಕುತ್ಪಾಡಿ ವಂದಿಸಿದರು. ಹರೀಶ್ ಆಚಾರ್ಯ ಉಳ್ಳೂರು ಕಾರ್ಯಕ್ರಮ ನಿರೂಪಿಸಿದರು.

