ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 16ನೇ ವಾರ್ಷಿಕೋತ್ಸವವು ಭಾನುವಾರ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಪದ್ಮನಾಭ ಎಂ ಇವರ ಉಪಸ್ಥಿತಿಯಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರಿಯ ಅಧ್ಯಕ್ಷರಾದ ಕೆ.ಭಾಸ್ಕರ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. 2026ರ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಪದ್ಮನಾಭ ಎಂ, ಮಂಗಳೂರು ಸೌಹಾರ್ದ ಸಹಕಾರಿ ಸಂಘವು ಹಲವು ಉತ್ತಮ ಕಾರ್ಯಗಳನ್ನು ಸದಸ್ಯರಿಗೆ ನೀಡುತ್ತಾ ಉತ್ತಮ ಸೇವೆ ಮಾಡುತ್ತಿದೆ. ಈ ಸಹಕಾರಿಗೆ ತನ್ನಿಂದ ಆಗುವ ಹೆಚ್ಚಿನ ಸಲಹೆಗಳನ್ನು ನೀಡುತ್ತ ಸಹಕಾರಿಯ ಎಲ್ಲಾ ಆಗುಹೋಗುಗಳ ಬಗ್ಗೆ ಸಹಕಾರ ನೀಡುವ ಭರವಸೆ ನೀಡಿದರು.

ಸಂಘದ ಕಾರ್ಯದರ್ಶಿ ಚಂದ್ರಿಕಾ ಡಿ.ರಾವ್ ವಂದಿಸಿದರು. ಜಾನ್ಸನ್ ಮಾಟಿನ, ರತನ್ ಕುಮಾರ್, ರಾಜಶೇಖರ್, ಸದಾಶಿವ ಅಮೀನ್ ಕಾರ್ಯಕ್ರಮ ನಡೆಸಿಕೊಟ್ಟರು. ಉಪಾಧ್ಯಕ್ಷರಾದ ಕೃಷ್ಣ ಭಟ್, ನಿರ್ದೇಶಕರದ ಕೆ.ವಿಜೇತಾ ರಾವ್, ಲತಾ ಎನ್ ಆಳ್ವ, ಸುಪ್ರೀತ ಜೆ.ಕೆ, ಸುಂದರ ಸಾಲ್ಯಾನ್, ಜೆ.ಸದಾಶಿವ ಅಮೀನ್, ಪೂರ್ಣಿಮಾ ಬಿ.ರಾವ್, ಜಯಪ್ರಕಾಶ್ ಉಪಸ್ಥಿತರಿದ್ದರು.

