ಮಂಗಳೂರು: ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ ಜನತಾ ಬಜಾರ್ ಇದರ ನೂತನ ಅಧ್ಯಕ್ಷರಾಗಿ ಸುಳ್ಯದ ಪ್ರಸನ್ನ ಕೆ., ಉಪಾಧ್ಯಕ್ಷರಾಗಿ ಮದಲಾಕ್ಷಿ ರೈ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಜನತಾ ಬಜಾರ್ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಪ್ರಸನ್ನ ಮತ್ತು ಮದಲಾಕ್ಷಿ ರೈ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು ಬೇರಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿ ವಿಲಾಸ್ ಈ ಇಬ್ಬರ ಆಯ್ಕೆಯನ್ನು ಘೋಷಿಸಿದರು.
ಸಹಕಾರ ಭಾರತಿಯಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರಾದ ಪ್ರಸನ್ನ ಕೆ., ಹಾಗೂ ಉಪಾಧ್ಯಕ್ಷೆ ಮದಲಾಕ್ಷಿ ರೈ ಅವರನ್ನು ಸಹಕಾರಿ ಭಾರತಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ನಿರ್ದೇಶಕರಾಗಿ ದಿನೇಶ್ ಹೆಗ್ಡೆ, ಪುರುಷೋತ್ತಮ ಭಟ್, ಮೋಹನ್ ಕುಂಬ್ಳೇಕರ್, ಶಾಂತಾ ಆರ್, ಉದಯ ಮಾದೋಡಿ, ಭಾಗೀರಥಿ ಮುರುಳ್ಯ, ಪಕೀರಪ್ಪ, ಸುಜಯ ಹೇಮಚಂದ್ರ, ಬಿ.ಜನಾರ್ದನ, ನವೀನ್ ಬಾಳುಗೋಡು, ಶಶಿಧರ ಶೆಟ್ಟಿ ಮತ್ತು ದಯಾನಂದ ಅಡ್ಯಾರ್ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



