ಬೆಂಗಳೂರು: ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ 9ನೇ ವಾರ್ಷಿಕ ಮಹಾಸಭೆ ಭಾನುವಾರ ದ್ವಾರಕಾ ನಗರ ಸಮುದಾಯ ಭವನ ಚಿಕ್ಕಬಾಣಾವರದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಲೋಕೇಶ್ ಎಸ್ ಎಸ್ ಮಾತನಾಡಿ ಸಹಕಾರಿಯು ಒಟ್ಟು 919 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 14.61 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಮಾಹಿತಿ ನೀಡಿದರು. ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿಯು 2017ರಲ್ಲಿ ಆರಂಭಗೊಂಡು ಪಾರದರ್ಶಕ ಆಡಳಿತ ನಡೆಸುತ್ತ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ವಾರ್ಷಿಕ ಮಹಾಸಭೆಯಲ್ಲಿ ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಯೋಗಾನಂದ ಮೂರ್ತಿ ಎನ್ ವಿ, ಕೈಲಾಸ್ ಮೂರ್ತಿ ಜಿಎಸ್, ಶಿವಗಂಗಾಧರ್ ಯು, ಲಕ್ಷ್ಮೀಪತಿ ಕೆ, ಶೋಭಾ, ಪುಷ್ಪಲತಾ ಎಚ್ಎಂ, ಗಾಯತ್ರಿ ಮತ್ತು ಗೀತಾ ಮತ್ತಿತರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



