ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಮಂಗಳೂರು ಇದರ 2024-25ನೇ ಸಾಲಿನ 31ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷೆ ಭಾರತಿ ಜಿ.ಭಟ್ ಇವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು.
https://chat.whatsapp.com/EbVKVnWB6rlHT1mWtsgbch
ವರ್ಷಾಂತ್ಯಕ್ಕೆ ಬ್ಯಾಂಕ್ ಒಟ್ಟು 178.08 ಲಕ್ಷ ಪಾಲು ಬಂಡವಾಳ, 297.87 ಲಕ್ಷ ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ಬ್ಯಾಂಕ್ ಒಟ್ಟು 3319.67 ಲಕ್ಷ ಠೇವಣಿಯನ್ನು ಹೊಂದಿದ್ದು, ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ರೂ. 2117.54 ಲಕ್ಷ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಆದಾಯ ತೆರಿಗೆ ರೂ. 4.71 ಲಕ್ಷ ಕಾಯ್ದಿರಿಸಿ ರೂ. 14.04 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಶೇ.6 ಡಿವಿಡೆಂಡ್ ಘೋಷಿಸಲಾಯಿತು.










ಬ್ಯಾಂಕಿನ ಅಧ್ಯಕ್ಷ ಭಾರತಿ ಜಿ.ಭಟ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಪ್ರತಿಭಾ ಶೆಟ್ಟಿ ಉಪನಿಬಂಧನೆ ತಿದ್ದುಪಡಿ, ಲಾಭ ವಿಂಗಡನೆ, ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆ ಹಾಗೂ ಬಜೆಟ್ ಮಂಡಿಸಿದರು. ಗೌರವ ಡಾಕ್ಟರೇಟ್ ಪಡೆದ ಡಾ| ದಿವ್ಯಾರಾಣಿ ಪ್ರದೀಪ್ ಇವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷೆ ಕೆ.ಪುಷ್ಪಾ ಶೇಟ್, ನಿರ್ದೇಶಕಿಯರಾದ ಸರಳಾ ಬಿ.ಕಾಂಚನ್, ಸುಜಿತಾ ವಿ.ಬಂಗೇರ, ಕೆ.ಪಿ ಪದ್ಮಾವತಿ, ಶೈಲಜಾ ವಿ.ಕರ್ಕೇರ, ಶಾರಿಕಾ ಟಿ.ರೈ, ಚಂದ್ರಾಕ್ಷಿ ಜೆ.ರೈ, ಶಾಂತಾ ಪಿ.ಭಟ್, ಸೌಮ್ಯತಾ ಬಿ.ಎಸ್. ಯಮುನಾ ಎ.ಕಾವಾ, ಪ್ರಪುಲ್ಲ ಟಿ., ವೃತ್ತಿಪರ ನಿರ್ದೇಶಕರಾದ ಮಿತ್ರಾ ಬಾಯಿ, ಸಿಎ ವೃಂದಾ ಕೊನ್ನಾರ್ ಉಪಸ್ಥಿತರಿದ್ದರು. ಕೆ. ಪುಷ್ಪಾ ಶೇಟ್ ವಂದಿಸಿದರು.

