ಜಮಖಂಡಿ: ಹುನ್ನೂರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ, ರೋಟರಿ ಸಂಸ್ಥೆ ಜಮಖಂಡಿ ಮತ್ತು ಇನ್ನರ್ವೀಲ್ ಸಂಸ್ಥೆ ಜಮಖಂಡಿ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಪಿಎಂಶ್ರೀ ಸರಕಾರಿ ಮಾದರಿ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.
https://chat.whatsapp.com/EbVKVnWB6rlHT1mWtsgbch
ಕಾರ್ಯಕ್ರಮದಲ್ಲಿ ಹುನ್ನೂರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಜಾಲಿಗಿಡದವರು, ಉಪಾಧ್ಯಕ್ಷರಾದ ಸದಾಶಿವ ಸೊನ್ನದ, ನಿರ್ದೇಶಕರಾದ ಚನ್ನಪ್ಪಣ್ಣ ಬಿರಾದಾರ ಮತ್ತು ಶ್ರೀಶೈಲ ತೇಲಿಯವರು ಉಪಸ್ಥಿತರಿದ್ದರು.

ಹುನ್ನೂರ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು, ಆನಂದ ದೇವರ ದೇವರು ಓಲೆಮಠ, ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ತಜ್ಞ ವೈದ್ಯರೊಂದಿಗೆ, ರೋಟರಿ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು, ಇನ್ನರ್ವ್ಹೀಲ್ ಅಧ್ಯಕ್ಷರು ಮತ್ತು ಸದಸ್ಯರ ಜೊತೆಗೂಡಿ ಹುನ್ನೂರ ಸೌಹಾರ್ದ ಕಚೇರಿಯಿಂದ ಕಾಲ್ನಡಿಗೆ ಮೂಲಕ ಪಿಎಂಶ್ರೀ ಶಾಲೆಗೆ ಆಗಮಿಸಿದರು. ನಂತರ ಶ್ರೀ ಆನಂದ ದೇವರು ಓಲೆಮಠ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು.



ಉಚಿತ ಆರೋಗ್ಯ ಶಿಬಿರದಲ್ಲಿ 625 ಜನ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಉಚಿತ ಔಷಧ ಪಡೆದುಕೊಂಡರು.
ಹುನ್ನೂರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ರೋಟರಿ ಸಂಸ್ಥೆ ಜಮಖಂಡಿ ಅಧ್ಯಕ್ಷರು ಮತ್ತು ಸದಸ್ಯರು, ಇನ್ನರ್ ವೀಲ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ:ಎಸ್.ಡಿ.ಚಿಂಚಖಂಡಿ ಅವರು ಗ್ರಾಮದಲ್ಲಿ ಸುಮಾರು 25 ವರ್ಷಗಳ ಮೇಲೆ ವೈದ್ಯಕೀಯ ಸೇವೆ ಸಲ್ಲಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ಹುನ್ನೂರ ಗ್ರಾಮದಲ್ಲಿ ಸಾವಿರಾರು ಹೆರಿಗೆ ಮಾಡಿಸಿರುವ 93 ವರ್ಷದ ಅಕ್ಕವ್ವ ಲಕ್ಷ್ಮಣ ಹೀರೋಜಿ ಅವರನ್ನು ಸನ್ಮಾನಿಸಲಾಯಿತು.

