ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ 9% ಲಾಭಾಂಶ ಘೋಷಣೆ
ರಾಯಚೂರು: ವೀರಶೈವ ವಿಕಾಸ ಸೌಹಾರ್ದ ಸಹಕಾರಿ ಸಂಘ ರಾಯಚೂರು ಇದರ ಏಳನೇ ವಾರ್ಷಿಕ ಮಹಾಸಭೆ ಭಾನುವಾರ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್ನಲ್ಲಿ ಜರುಗಿತು.
https://chat.whatsapp.com/EbVKVnWB6rlHT1mWtsgbch
ಸಹಕಾರಿಯ ಅಧ್ಯಕ್ಷರಾದ ಪ್ರಭುದೇವರು ಎಚ್.ಎಂ ಅಧ್ಯಕ್ಷತೆ ವಹಿಸಿದ್ದರು. 2024-25ನೇ ಸಾಲಿನಲ್ಲಿ ವೀರಶೈವ ವಿಕಾಸ ಸೌಹಾರ್ದ ಸಹಕಾರಿ ಸಂಘವು 17 ಲಕ್ಷ ರೂ. ಲಾಭ ಗಳಿಸಿದೆ. ಸಹಕಾರಿಯ ವ್ಯವಹಾರವು 25 ಕೋಟಿ ರೂ. ದಾಟಿದ್ದು, ದುಡಿಯವ ಬಂಡವಾಳವು 15.15 ಕೋಟಿಯಷ್ಟಿದೆ. 13.68 ಲಕ್ಷ ರೂ. ಠೇವಣಿ ಸಂಗ್ರಹ, 12.36 ಲಕ್ಷ ರೂ. ಸಾಲ ವಿತರಣೆ ಮಾಡಲಾಗಿದೆ. ಸಾಲ ವಸೂಲಾತಿ ಪ್ರಮಾಣ 97 ಪ್ರತಿಶತ ಇದೆ ಎಂದು ಅಧ್ಯಕ್ಷರು ಮಾಹಿತಿ ನೀಡಿ, ಸಹಕಾರಿಯ ಎಲ್ಲಾ ಸದಸ್ಯರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿ, ಸದಸ್ಯರಿಗೆ ಶೇ 9 ಲಾಭಾಂಶ ಘೋಷಿಸಿದರು.
ಸಹಕಾರಿ ಪಿತಾಮಹರಾದ ಸಿದ್ದನಗೌಡ ಸಣ್ಣರಾಮನಗೌಡ ಕಣಗಿನಹಾಳ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಹಕಾರಿಯ ಮುಖ್ಯಕಾರ್ಯನಿರ್ವಾಹಕರಾದ ರವಿಕುಮಾರ್ ವಿ.ಆಶಾಪುರ್ 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಸಹಕಾರಿಯ ನಿರ್ದೇಶಕರಾದ ಪ್ರತಿಮಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಬಸವರಾಜ ಪಲ್ಲೆದ್ ಸ್ವಾಗತಿಸಿದರು. ಸದಸ್ಯರಾದ ಜ್ಯೋತಿ ಶಾಸ್ತ್ರಿ ಪ್ರಾರ್ಥನೆ ಗೀತೆ ಹಾಡಿದರು. ಸಹಕಾರಿಯ ಉಪಾಧ್ಯಕ್ಷರಾದ ಪ್ರಭು ಶಾಸ್ತ್ರಿ, ನಿರ್ದೇಶಕರಾದ ಶಶಿಕುಮಾರ್ ಹಿರೇಮಠ್ ಕಾರ್ಯಕ್ರಮ ನಿರೂಪಿಸಿದರು. ಸಹನಾ ಹಿರೇಮಠ ವಂದಿಸಿದರು. ಸಹಕಾರಿಯ ನಿರ್ದೇಶಕರಾದ ವೀರಯ್ಯಸ್ವಾಮಿ ಆಶಾಪೂರ್, ಡಾ||ಕೆ.ಎಂ ವಿಶ್ವನಾಥ್, ಕೆ.ಶ್ರೀನಿವಾಸ ರಾವ್, ಕಸ್ತೂರಯ್ಯ ಸಾಲಿಮಠ, ದೇವೇಂದ್ರಮ್ಮ ಬಸವರಾಜಯ್ಯ, ಸುಶೀಲಾ ಪಾಟೀಲ್, ಚೌದ್ರಿ ಸತ್ಯನಾರಾಯಣ ಹಾಗೂ ಕಾನೂನು ಸಲಹೆಗಾರರಾದ ಮುರಳಿ ಪಾಟೀಲ್ ಮತ್ತು ಸಹಕಾರಿಯ ಸಿಬ್ಬಂದಿಗಳಾದ ಸಂಗೀತಾ ರೆಡ್ಡಿ, ಪ್ರಸನ್ನ ಕುಮಾರ್ , ಗಣೇಶ್ , ಆಸ್ತಿ ಮೌಲ್ಯಮಾಪಕರಾದ ದಶಕಂಠ ಹಿರೇಮಠ ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









