ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 15ನೇ ವಾರ್ಷಿಕ ಮಹಾಸಭೆ ಭಾನುವಾರ ಮಂಗಳೂರು ಸ್ಕೋರ್ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಮಾಜಿ ಕಾರ್ಪೋರೇಟರ್ ಕೆ.ಭಾಸ್ಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಕಾರ್ಯಕ್ರಮದಲ್ಲಿ ಜಪ್ಪು ಆರೋಗ್ಯ ಕೇಂದ್ರದವರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಸಂಘದ ಕಾನೂನು ಸಲಹೆಗಾರ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು. ಬಿ.ಪಿ ತಪಾಸಣೆ, ಮಧುಮೇಹ ತಪಾಸಣೆ ನಡೆಸಲಾಯಿತು. ಸದಸ್ಯರ ಮನೆಗೆ ತರ್ಮಾಮೀಟರ್ ವಿತರಿಸಲಾಯಿತು. ಧನ್ವಿ ರಾವ್ ಪ್ರಾರ್ಥಿಸಿದರು. ಅಧ್ಯಕ್ಷ ಕೆ.ಭಾಸ್ಕರರಾವ್ ಸ್ವಾಗತಿಸಿದರು. ನಿರ್ದೇಶಕರಾದ ಸದಾಶಿವ ಅಮೀನ್ 2024-2025ನೇ ಸಾಲಿನ ವಾರ್ಷಿಕ ವರದಿ -ಲೆಕ್ಕ ಪರಿಶೋಧನಾ ವರದಿ ಮಂಡಿಸಿದ್ದು, ಅನುಮೋದನೆ ಪಡೆಯಲಾಯಿತು. ಸದಸ್ಯರ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.




ಸೌಹಾರ್ದ ಸಹಕಾರಿ ಆಡಳಿತಾಧಿಕಾರಿ ನಂದನ್ ಸಭೆ ನಡೆಸಿಕೊಟ್ಟರು. ಮಾಜಿ ನಿರ್ದೇಶಕರಾದ ಅಮರನಾಥ್, ಶೋಭಾರಾಣಿ, ರತನ್ ಕುಮಾರ್, ಹಿರಿಯ ಸದಸ್ಯರಾದ ಜೆ.ಕೊರಗಪ್ಪ, ವಾರಿಜಾ, ಮೀರಾ ರವೀಂದ್ರ, ಎ.ಜೆ. ಶರ್ಮ, ಮೀನಾ ಟೆಲ್ಲಿಸ್, ಆನಂದ ಸೋನ್ಸ್, ಸತೀಶ್ ಪೆಂಗಾಲ್, ತಿಮ್ಮಪ್ಪ ಶೆಟ್ಟಿ ಸಲಹೆ ಸೂಚನೆ ನೀಡಿದರು. ಉಪಾಧ್ಯಕ್ಷ ಎ.ಕೃಷ್ಣ ಭಟ್, ನಿರ್ದೇಶಕರಾದ ವಿಜೇತಾ ರಾವ್, ಲತಾ ಆಳ್ವ, ಸುಪ್ರೀತಾ, ಜೆ.ಕೆ ಸುಂದರ ಸಾಲ್ಯಾನ್, ಸದಾಶಿವ ಅಮೀನ್, ರವೀಂದ್ರ ಬೇಕಲ್, ಪೂರ್ಣಿಮಾ ಬಿ.ರಾವ್ ಉಪಸ್ಥಿತರಿದ್ದರು. 2024/25 ವರದಿ ಸಾಲಿಗೆ 25% ಡಿವಿಡೆಂಡ್ ಘೋಷಣೆ ಮಾಡಲಾಯಿತು. ಕಾರ್ಯದರ್ಶಿ ಚಂದ್ರಿಕಾ ಡಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

