ಸಹಕಾರ್ ಸಂವಾದದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಭರವಸೆ
ನವದೆಹಲಿ: ಗುಜರಾತ್ ಮತ್ತು ರಾಜಸ್ಥಾನದಲ್ಲಿ ಒಂಟೆ ಸಾಕಣೆದಾರರಿಗೆ ಶುಭ ಸುದ್ದಿಯೊಂದನ್ನು ನೀಡಿರುವ ಕೇಂದ್ರ ಸಹಕಾರ ಸಚಿವ ಒಂಟೆ ಹಾಲಿನ ಔಷಧೀಯ ಮೌಲ್ಯವನ್ನು ಬಳಸಿಕೊಂಡು ಒಂಟೆ ಹಾಲಿಗೆ ಉತ್ತಮ ದರ ನಿಗದಿಪಡಿಸುವಂತೆ ಮಾಡಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ.
https://chat.whatsapp.com/EbVKVnWB6rlHT1mWtsgbch
‘ಸಹಕಾರ್ ಸಂವಾದ’ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿರುವ ಅಮಿತ್ ಷಾ, ಒಂಟೆ ಹಾಲಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ಬಗ್ಗೆ ಈ ಮೇಲಿನ ಎರಡೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅದರ ಮಾರುಕಟ್ಟೆಯನ್ನು ಉತ್ತೇಜಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಸಹಕಾರ ಸಚಿವಾಲಯದ ಈ ಕ್ರಮವು ಒಂಟೆ ಸಾಕುತ್ತಿರುವ ಸಮುದಾಯಗಳ ಆದಾಯ ಹೆಚ್ಚಿಸುವುದು ಮಾತ್ರವಲ್ಲದೆ ಕಡಿಮೆ ಆದಾಯದಿಂದಾಗಿ ಕ್ಷೀಣಿಸುತ್ತಿರುವ ಸ್ಥಳೀಯ ಒಂಟೆ ತಳಿಗಳ ಸಂರಕ್ಷಣೆಯನ್ನು ಬೆಂಬಲಿಸುವ ಗುರಿಯನ್ನೂ ಹೊಂದಿದೆ. ಒಂಟೆ ಹಾಲಿನ ಸಹಕಾರಿ ಸಂಸ್ಥೆಗಳನ್ನು ವೈಜ್ಞಾನಿಕ ಸಂಶೋಧನೆ ಮತ್ತು ಮಾರುಕಟ್ಟೆ ವೇದಿಕೆಗಳೊಂದಿಗೆ ಸಂಪರ್ಕಿಸಲು ಸಚಿವಾಲಯ ಯೋಜಿಸಿರುವುದಾಗಿ ತಿಳಿಸಿದ್ದಾರೆ.
ಉತ್ತಮ ಬೆಲೆ ನಿಗದಿ ಸ್ವಾಭಾವಿಕವಾಗಿ ಒಂಟೆ ಆರೈಕೆ ಮತ್ತು ಸಂತಾನೋತ್ಪತ್ತಿಗೆ ಪ್ರೋತ್ಸಾಹ ನೀಡುತ್ತದೆ. ಜಾನುವಾರು ಆಧಾರಿತ ಜೀವನೋಪಾಯದಲ್ಲಿ ಮೌಲ್ಯವರ್ಧನೆಯೊಂದಿಗೆ ಸಹಕಾರಿ ಚೌಕಟ್ಟುಗಳನ್ನು ಸಂಯೋಜಿಸುವ ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರುವ ನಿರೀಕ್ಷೆಯಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com








