ಮಂಗಳೂರು; ಇಲ್ಲಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ತನ್ನ ಕಾರ್ಯಯೋಜನೆ ʼವಿಷನ್ 2025′ ಅನ್ವಯ ಹೊಸ 30 ಶಾಖೆ ತೆರೆಯುವ ನಿಟ್ಟಿನಲ್ಲಿ ಜೂನ್ 8ರಿಂದ 18ರವರೆಗೆ 4 ಹೊಸ ಶಾಖೆ ಮತ್ತು 2 ವಿಸ್ತರಣಾ ಕೌಂಟರ್ಗಳನ್ನು ತೆರೆದು ಅಪೂರ್ವ ಸಾಧನೆ ಮಾಡಿದೆ.
https://chat.whatsapp.com/EbVKVnWB6rlHT1mWtsgbch
ಈ ಹಿಂದೆ 2021ನೇ ಸಾಲಿನ ನವೆಂಬರ್ನ 7 ದಿನಗಳ ಅವಧಿಯಲ್ಲಿ 5 ನೂತನ ಶಾಖೆಗಳನ್ನು ಆರಂಭಿಸಿತ್ತು. ಸೊಸೈಟಿಯು ತನ್ನ 26ನೇ ಶಾಖೆಯನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ, 27ನೇ ಶಾಖೆಯನ್ನು ಕಡಬ ತಾಲೂಕಿನ ಸವಣೂರಿನಲ್ಲಿ ಜೂನ್ 8ರಂದು ಪ್ರಾರಂಭಿಸಿತು. 28ನೇ ಶಾಖೆಯು ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಜೂನ್ 9ರಂದು ಮತ್ತು ಜೂನ್ 12ರಂದು ಸಂಘದ ಮಂಗಳೂರು ಶಾಖೆಯ ವಿಸ್ತರಣಾ ಕೌಂಟರ್ ಕದ್ರಿ ಕಂಬಳ ರಸ್ತೆಯಲ್ಲಿನ ಸಂಘದ ಕೇಂದ್ರ ಕಚೇರಿಯ ನೂತನ ಕಟ್ಟಡದಲ್ಲಿ ಆರಂಭಗೊಂಡಿತ್ತು. ಇನ್ನೊಂದು ವಿಸ್ತರಣಾ ಕೌಂಟರ್ ಕಾರ್ಕಳದ ಕುಂಟಾಡಿಯಲ್ಲಿ ಜೂನ್ 15ರಂದು ಕಾರ್ಕಳದ ಕುಂಟಾಡಿಯಲ್ಲಿ ರಕ್ತೇಶ್ವರಿ ದೈವಸ್ಥಾನದ ಕಟ್ಟಡದಲ್ಲಿ ಕಾರ್ಯಾರಂಭಿಸಿದರೆ, 29ನೇ ಶಾಖೆ ಪಡೀಲ್ನಲ್ಲಿ ಜೂನ್ 18ರಂದು ಸಿಟಡಲ್ ಕಮರ್ಷಿಯಲ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಸಮಾರಂಭಗಳಲ್ಲಿ ಶಾಖೆಗಳ ಸ್ಥಳೀಯ ಸದಸ್ಯರು ಮತ್ತು ನಾಗರಿಕರು ಸಂಘಕ್ಕೆ ನೀಡಿರುವ ಸ್ಪಂದನೆ ನಿಜಕ್ಕೂ ಸ್ಪೂರ್ತಿದಾಯಕ. ಸದಸ್ಯರಿಗೆ ಇನ್ನೂ ಹಚ್ಚಿನ ಸೇವೆಯನ್ನು ಕಲ್ಪಿಸಲು ಹಾಗೂ 2030ಕ್ಕೆ 40 ಶಾಖೆಗಳನ್ನು ಹೊಂದುವ ಗುರಿ ಸಾಧಿಸಲು ಇದು ಪ್ರೇರಣೆ ಎಂದು ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





