ಮಂಗಳೂರು: ಇಲ್ಲಿನ ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ನಿಯಮಿತ ಮಂಗಳೂರು ಇದರ 2025-2026ನೇ ಸಾಲಿನ ಸಾಮಾನ್ಯ ಸರ್ವ ಸದಸ್ಯರ ಸಭೆಯು ಭಾನುವಾರ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.
https://chat.whatsapp.com/FCEnlTkAKCC0MGPhXtX4i4
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷರಾದ ದಿನಕರ ಪೂಂಜಾ, ನಿರ್ದೇಶಕರಾದ ಕೆ.ಟಿ. ರೈ, ಉದಯ ಕುಮಾರ, ಟಿ. ವಿ.ರೈ, ಕೆ.ನರೇಂದ್ರನಾಥ ಕಾಮತ್, ಶಾಲಿನಿ ಶೆಟ್ಟಿ, ಶೋಭಾ ರಾವ್, ಶ್ಯಾಮಸುಂದರ ರಾವ್, ಜೆ.ವಿ. ಶೆಟ್ಟಿ, ಪ್ರೇಮನಾಥ, ಸದಾಶಿವ ವಿ.ಎಸ್, ದಿನಕರ ರೈ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸದಸ್ಯರಿಗೆ 2025-2026 ಸಾಲಿಗೆ ಶೇ. 14 ಲಾಭಾಂಶ ಘೋಷಣೆ ಮಾಡಲಾಯಿತು.











