Close Menu
    Top News

    ದಿವ್ಯ ಸಮಾಜ ನಿರ್ಮಾಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ವಾರ್ಷಿಕ ಮಹಾಸಭೆ

    July 29, 2026

    ಸಹಕಾರಿಗಳ ನಿಜವಾದ ಗುರು – ದಿ. ಮೊಳಹಳ್ಳಿ ಶಿವರಾಯರಿಗೆ ಗುರುವಂದನೆ

    July 29, 2026

    ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದು

    July 29, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿಗಳ ನಿಜವಾದ ಗುರು – ದಿ. ಮೊಳಹಳ್ಳಿ ಶಿವರಾಯರಿಗೆ ಗುರುವಂದನೆ
    News

    ಸಹಕಾರಿಗಳ ನಿಜವಾದ ಗುರು – ದಿ. ಮೊಳಹಳ್ಳಿ ಶಿವರಾಯರಿಗೆ ಗುರುವಂದನೆ

    adminBy adminJuly 29, 2026

    ಗುರು ಎಂದರೆ ಕೇವಲ ಜ್ಞಾನ ಬೋಧಿಸುವ ವ್ಯಕ್ತಿಯಲ್ಲ; ಜೀವನಕ್ಕೆ ದಿಕ್ಕು ತೋರಿಸುವ, ಮೌಲ್ಯಗಳನ್ನು ಬಿತ್ತುವ ಮತ್ತು ಸಮಾಜದ ಒಳಿತಿಗಾಗಿ ಬದುಕುವ ಮಹನೀಯ. ಸಹಕಾರ ಕ್ಷೇತ್ರದಲ್ಲಿ ಅಂತಹ ಗುರುಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರು ದಿವಂಗತ ಮೊಳಹಳ್ಳಿ ಶಿವರಾಯರು.

    https://chat.whatsapp.com/FCEnlTkAKCC0MGPhXtX4i4
    ಸಹಕಾರವನ್ನು ಅವರು ಕೇವಲ ಆರ್ಥಿಕ ವ್ಯವಸ್ಥೆಯಾಗಿ ನೋಡಲಿಲ್ಲ; ಅದು ವಿಶ್ವಾಸ, ಸಮಾನತೆ, ಸ್ವಾವಲಂಬನೆ ಮತ್ತು ಪರಸ್ಪರ ಸಹಾಯದ ಜೀವನದರ್ಶನ ಎಂದು ಪ್ರತಿಪಾದಿಸಿದರು. ಸದಸ್ಯರ ಹಿತಾಸಕ್ತಿ, ಪಾರದರ್ಶಕ ಆಡಳಿತ, ನೈತಿಕತೆ ಮತ್ತು ಸೇವಾ ಮನೋಭಾವವೇ ಸಹಕಾರ ಸಂಸ್ಥೆಗಳ ನಿಜವಾದ ಬಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ಅವರು ಸಾರಿದರು. ಸಾವಿರಾರು ಸಹಕಾರಿಗಳಲ್ಲಿ ಜ್ಞಾನ, ಶಿಸ್ತು ಮತ್ತು ಸೇವೆಯ ಮನೋಭಾವವನ್ನು ಬೆಳೆಸಿದ ಅವರ ಮಾರ್ಗದರ್ಶನ ಇಂದಿಗೂ ಪ್ರೇರಣೆಯಾಗಿದೆ.
    ಶಿಕ್ಷಣವಿಲ್ಲದ ಸಹಕಾರ ಅಪೂರ್ಣ ಎಂಬ ದೃಢ ನಂಬಿಕೆಯೊಂದಿಗೆ ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರಿಗೆ ನಿರಂತರ ತರಬೇತಿಯ ಮಹತ್ವವನ್ನು ಅವರು ಒತ್ತಿಹೇಳಿದರು. ನಾಯಕತ್ವವನ್ನು ಅಧಿಕಾರವಲ್ಲ, ಸೇವೆಯ ಅವಕಾಶವೆಂದು ಬೋಧಿಸಿದ ಅವರ ಆದರ್ಶಗಳು ಇಂದಿನ ಸಹಕಾರ ಚಳವಳಿಗೂ ದಾರಿದೀಪವಾಗಿವೆ.
    ಗುರುಪೂರ್ಣಿಮೆಯ ಈ ಪವಿತ್ರ ಸಂದರ್ಭದಲ್ಲಿ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಮೊಳಹಳ್ಳಿ ಶಿವರಾಯರನ್ನು ತಮ್ಮ ಆದರ್ಶಗುರುವೆಂದು ಸ್ಮರಿಸುವುದು ಅತ್ಯಂತ ಅರ್ಥಪೂರ್ಣ. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಶ್ರೇಷ್ಠ ಗುರುವಂದನೆ. ಸದಸ್ಯರ ವಿಶ್ವಾಸವನ್ನು ಉಳಿಸುವುದು, ಪ್ರಾಮಾಣಿಕ ಆಡಳಿತ ನಡೆಸುವುದು, ಸಮಾಜಮುಖಿ ಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಳ್ಳುವುದು ಮತ್ತು ಸಹಕಾರದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪವೇ ಅವರಿಗೆ ಸಲ್ಲುವ ನಿಜವಾದ ಗೌರವ.
    ಗುರುಗಳು ದೇಹತಃ ದೂರವಾದರೂ ಅವರ ಆದರ್ಶಗಳು ಅಮರ. ಮೊಳಹಳ್ಳಿ ಶಿವರಾಯರ ಚಿಂತನೆಗಳು ಸಹಕಾರ ಚಳವಳಿಯ ಪ್ರತಿಯೊಂದು ಹೆಜ್ಜೆಯಲ್ಲೂ ಮಾರ್ಗದರ್ಶಕ ಬೆಳಕಾಗಿ ಉಳಿಯಲಿ. ಈ ಗುರುಪೂರ್ಣಿಮೆಯಂದು ಆ ಮಹಾಗುರುವಿಗೆ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸೋಣ. ಅವರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ಸಹಕಾರ ಚಳವಳಿಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ.

    ಡಾ. ಎಸ್. ಆರ್. ಹರೀಶ್ ಆಚಾರ್ಯ

    ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳೂರು

     

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Cooperative Cooperative Registrar Dr. Harish Acharya Guru Poornime Molahalli Shivarao Molahalli Shivaraya
    Previous Articleದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದು
    Next Article ದಿವ್ಯ ಸಮಾಜ ನಿರ್ಮಾಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ವಾರ್ಷಿಕ ಮಹಾಸಭೆ

    Related Posts

    ದಿವ್ಯ ಸಮಾಜ ನಿರ್ಮಾಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ವಾರ್ಷಿಕ ಮಹಾಸಭೆ

    July 29, 2026

    ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದು

    July 29, 2026

    ಬಹುಉದ್ದೇಶೀಯ ಸಮುದಾಯ ಸಹಕಾರ ಸಂಸ್ಥೆಗಳಾಗಿ ಪ್ಯಾಕ್ಸ್‌ಗಳು

    July 28, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ದಿವ್ಯ ಸಮಾಜ ನಿರ್ಮಾಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ವಾರ್ಷಿಕ ಮಹಾಸಭೆ

    July 29, 2026

    ಸಹಕಾರಿಗಳ ನಿಜವಾದ ಗುರು – ದಿ. ಮೊಳಹಳ್ಳಿ ಶಿವರಾಯರಿಗೆ ಗುರುವಂದನೆ

    July 29, 2026

    ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದು

    July 29, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.