ಮಂಗಳೂರು: ದಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ಗರಿಷ್ಠ 11.80 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಎ.ಎಸ್. ವೆಂಕಟೇಶ್ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಮಾರ್ಚ್ ಅಂತ್ಯಕ್ಕೆ ಸೊಸೈಟಿಯು ಒಟ್ಟು 15.90 ಕೋಟಿ ರೂ. ಪಾಲು ಬಂಡವಾಳ, 274.55 ಕೋಟಿ ರೂ. ಠೇವಣಿ, 42.02 ಕೋಟಿ ರೂ. ನಿಧಿ, 332.47 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ ಪ್ರಗತಿ ಪಥದಲ್ಲಿ ಸಾಗುತ್ತಿದೆ.
ಸಂಘದ ಒಟ್ಟು 15 ಶಾಖೆಗಳಲ್ಲಿ 5 ಶಾಖೆಗಳು ಸ್ವಂತ ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರಿಗೆ ಉತ್ತಮ, ಉತ್ಕೃಷ್ಟ ಮಟ್ಟದ ತ್ವರಿತ ಸೇವೆ ನೀಡುವ ಉದ್ದೇಶದಿಂದ ಕೋರ್ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಲ ಶಾಖೆಗಳಲ್ಲಿಯೂ ನೆಫ್ಟ್/ಆರ್ಟಿಜಿಎಸ್ ಸೌಲಭ್ಯ ಇದೆ. ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಅಲ್ಲದೆ ಸಂಘವು 2024-25ನೇ ಸಾಲಿನಲ್ಲಿ ಶೇ.25 ಡಿವಿಡೆಂಡ್ ಘೋಷಿಸಿದೆ. ಲೆಕ್ಕಪರಿಶೋಧನೆಯಲ್ಲಿ ಕಳೆದ 30 ವರ್ಷಗಳಿಂದ ಎ ವರ್ಗ ಮಾನ್ಯತೆ ಪಡೆದಿದೆ. ಪ್ರಸ್ತುತ ಸಹಕಾರ ವರ್ಷದಲ್ಲಿ ಸಂಘದ 16ನೇ ಶಾಖೆಯನ್ನು ಮಂಗಳೂರಿನ ದೇರೆಬೈಲ್-ಕೊಂಚಾಡಿಯಲ್ಲಿ ತೆರೆಯಲು ಉದ್ದೇಶಿಸಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಸೊಸೈಟಿಯ ಅಸೈಗೋಳಿ ಶಾಖೆಯು ಹೊಸ ಸುಸಜ್ಜಿತ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಗೊಳ್ಳಲಿದೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

