ಮಂಗಳೂರು: ಕೊಲ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೊಲ್ಯ ಇದರ ಎಂಟನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ವಾರ್ಷಿಕ ಸಾಮಾನ್ಯ ಸಭೆಯನ್ನು ಸಹಕಾರಿಯ ಅಧ್ಯಕ್ಷರಾದ ರಮೇಶ್ ಕೆ ಮತ್ತು ಉಪಾಧ್ಯಕ್ಷರಾದ ಭರತ್ ಪಿ ಉದ್ಘಾಟಿಸಿದರು. ಸಹಕಾರಿಯು ಕಳೆದ 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು 1.32 ಕೋಟಿ ರೂ. ಠೇವಣಿ ಹೊಂದಿದ್ದು ಸದಸ್ಯರಿಗೆ ಒಟ್ಟು 1 ಕೋಟಿಗಿಂತಲೂ ಹೆಚ್ಚು ವಿವಿಧ ರೀತಿಯ ಸಾಲ ನೀಡಲಾಗಿದೆ. ಈ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿಯ ನಿರ್ದೇಶಕರಾದ ಶಶಿಧರ ಶೆಟ್ಟಿ ಕೆರಮ, ಡಾ.ಶ್ರೀನಿವಾಸ ಮೂಲ್ಯ, ವಿಶಾಲ್, ಪ್ರಕಾಶ್ ಎಚ್, ಲಿಂಗಪ್ಪ ಪೂಜಾರಿ, ನಿರ್ಮಲ, ಸೌಮ್ಯ, ಅನಿಲ್ ಕುಮಾರ್, ರಂಜಿತ್ ಕುಮಾರ್, ತುಳಸಿ, ಸಹಕಾರಿಯ ಕಾನೂನು ಸಲಹೆಗಾರರು, ಸಹಕಾರಿಯ ಸಿಬ್ಬಂದಿ ರಮಿತಾ ಮತ್ತು ಸಹಕಾರಿಯ ಸದಸ್ಯರು ಹಾಜರಿದ್ದರು.

ಈ ಸಭೆಯ ಸಹಕಾರಿಯ ವಾರ್ಷಿಕ ವರದಿಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಅಕ್ಷಯ ಮಂಡಿಸಿದರು. ನಿರ್ದೇಶಕರಾದ ಶಶಿಧರ ಶೆಟ್ಟಿಯವರು ಸರಕಾರದಿಂದ ಇತ್ತೀಚೆಗೆ ತಿದ್ದುಪಡಿಗೊಂಡಿರುವ ಸೌಹಾರ್ದ ಕಾಯ್ದೆಯ ಬಗ್ಗೆ ವಿವರವಾಗಿ ತಿಳಿಸಿದರು. ಪರಿಶೋಧಿತ ಲೆಕ್ಕಪತ್ರಗಳನ್ನು ಸಹಕಾರಿಯ ನಿರ್ದೇಶಕರಾದ ಪುಷ್ಕಲ್ ಕುಮಾರ್ ಮಂಡಿಸಿದರು. ಸಹಕಾರಿಯ ನಿರ್ದೇಶಕರಾದ ಪುಷ್ಕಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









