ಮಂಗಳೂರು: ಸಹಕಾರ ತತ್ವ ಸಿದ್ಧಾಂತವನ್ನಿಟ್ಟುಕೊಂಡು ಯಶಸ್ಸಿನ ಪಥದತ್ತ ಸಾಗುತ್ತಿರುವ ಅಖಿಲ ಭಾರತ ಬಿಲ್ಲವರ ಸಂಘದ ಅಂಗಸಂಸ್ಥೆ ಬಿಲ್ಲವರ ಮಹಿಳಾ ಸಂಘ ಪ್ರಾಯೋಜಿತ ಹತ್ತು ಮಂದಿ ಮಹಿಳಾ ನಿರ್ದೇಶಕಿಯರನ್ನೊಳಗೊಂಡ ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ 18ನೇ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ್ ಆರ್. ಸುವರ್ಣ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುಮಲತಾ ನವೀನಚಂದ್ರ ಸುವರ್ಣ ಅವರ ಉಪಸ್ಥಿತಿಯಲ್ಲಿ ಜರಗಿತು.
https://chat.whatsapp.com/EbVKVnWB6rlHT1mWtsgbch
ಸಂಸ್ಥೆಯ ಅಧ್ಯಕ್ಷೆ ಸುಮಲತಾ ನವೀನಚಂದ್ರ ಸುವರ್ಣ ಅವರು ಮಾತನಾಡಿ, ವಿವಿಧ ಸಾಲ ಯೋಜನೆಯ ಪ್ರಯೋಜನಗಳನ್ನು ಪಡೆದು ಸಹಕಾರಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿ, ಸದಸ್ಯರು ನೀಡಿದ ಸೂಕ್ತ ಸಲಹೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆಂದು ಹೇಳಿದರು.
ಉಪಾಧ್ಯಕ್ಷೆ ಸುಖಲಾಕ್ಷಿ ವೈ.ಸುವರ್ಣ 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪುಷ್ಟಾನಂದ ಕುಮಾರ್ 2024-25ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಿತ ಅರ್ಥಿಕ ತಖ್ತೆಗಳನ್ನು ಮಂಡಿಸಿದರು. ಗತವರ್ಷದ ಅಂತ್ಯಕ್ಕೆ ಸಹಕಾರಿಯು ಒಟ್ಟು 3363 ಸದಸ್ಯರಿಂದ 43.89 ಲಕ್ಷ ರೂ. ಪಾಲು ಬಂಡವಾಳ ಹಾಗೂ 1218.59 ಲಕ್ಷ ರೂ. ಠೇವಣೆ ಸಂಗ್ರಹಿಸಿದ್ದು, ಒಟ್ಟು 1059.09 ಲಕ್ಷ ಸಾಲ ನೀಡಿ 1327.42 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ಸಹಕಾರಿಯ ಒಟ್ಟು ವಹಿವಾಟು 2277.68 ಲಕ್ಷ ಆಗಿರುತ್ತದೆ. ನಿವ್ವಳ ಲಾಭ 21.63 ಲಕ್ಷ ಗಳಿಸಿದೆ. ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.
ಸೊಸೈಟಿಯ ನಿರ್ದೇಶಕಿಯರಾದ, ಶಕೀಲಾರಾಜ್, ದಯಾಮಣಿ ವಿ.ಕೋಟ್ಯಾನ್, ರೇವತಿ ಅಶೋಕ್, ಶುಭಾ ಜಯಚಂದ್ರ, ಅಮೃತಾ ಡಿ.ಕೂಳೂರು, ಮೋಹಿನಿ ರಾಮಚಂದ್ರ ಮತ್ತು ಭಾರತಿ ದೇವದಾಸ್ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ವಾಸಂತಿ ಅಮೀನ್ ಪ್ರಾರ್ಥಿಸಿದರು. ನಿರ್ದೇಶಕಿ ಶಕೀಲಾರಾಜ್ ಸ್ವಾಗತಿಸಿದರು. ಮೋಹಿನಿ ರಾಮಚಂದ್ರ ವಂದಿಸಿದರು.

