ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವ ವಿಷಯದಲ್ಲಿ ಚರ್ಚೆಗಳಾಗುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಸೌಹಾರ್ದ ಸಹಕಾರಿ ಸಂಘವು ಮಂಗಳೂರು ಜಿಲ್ಲೆ ನಾಮಕರಣಕ್ಕೆ ಬೆಂಬಲ ಸೂಚಿಸಿದೆ.
https://chat.whatsapp.com/EbVKVnWB6rlHT1mWtsgbch
ಕರ್ನಾಟಕದಲ್ಲಿ ಬೆಂಗಳೂರು ನಂತರ ಹೆಚ್ಚು ಪ್ರಸಿದ್ಧವಾಗಿರುವುದು ಮಂಗಳೂರು. ಇದು ಎಲ್ಲರಿಗೂ ತಿಳಿದ ವಿಷಯ. ಮಂಗಳೂರಿನ ಮಂಗಳಾದೇವಿ ದೇವಸ್ಥಾನ-ಮಂಗಳೂರಿನ ಕದ್ರಿ ದೇವಸ್ಥಾನ -ಮಂಗಳೂರು ‘ಏರ್ಪೋರ್ಟ್-ಮಂಗಳೂರು ರೈಲ್ವೆ ನಿಲ್ದಾಣ-ಮಂಗಳೂರು ಪುರಭವನ-ಮಂಗಳೂರು ನೆಹರೂ ಮೈದಾನ-ಮಂಗಳೂರು ಹಂಚಿನ ಕಾರ್ಖಾನೆ-ಮಂಗಳೂರು ಗೇರುಬೀಜ ಕಾರ್ಖಾನೆ-ಮಂಗಳೂರು ಸರಕಾರಿ ಕಾಲೇಜು-ಮಂಗಳೂರು ಆಗ್ನೆಸ್ ಕಾಲೇಜು-ಮಂಗಳೂರು ಅಲೋಶಿಯಸ್ ಕಾಲೇಜ್-ಮಂಗಳೂರು ಕೆನರಾ ಕಾಲೇಜ್-ಮಂಗಳೂರು ಕೆನರಾ ಬ್ಯಾಂಕ್-ಮಂಗಳೂರು ಕಾರ್ಪೋರೇಶನ್ ಬ್ಯಾಂಕ್-ಮಂಗಳೂರು ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡ)-ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಮಂಗಳೂರು ಕರ್ಣಾಟಕ ಬ್ಯಾಂಕ್ -ಎಂಸಿಸಿ ಬ್ಯಾಂಕ್ ಮಂಗಳೂರು – ಎಸ್ಸಿಡಿಸಿಸಿ ಬ್ಯಾಂಕ್-ಮಂಗಳೂರು ಸೊಸೈಟಿ – ಮಂಗಳೂರು ಆಟೋರಿಕ್ಷಾ ಕಾರು ಚಾಲಕರ ಸೌಹಾರ್ದ ಸಹಕಾರಿ ಸಂಘ ಜಪ್ಪು ಮಂಗಳೂರು ಸ್ಟೋರ್ ಜಪ್ಪು-ಮಂಗಳೂರು ದಸರಾ-ಮಂಗಳೂರು ಪ್ರಕಾಶ್ ಬೀಡಿ-ಮಂಗಳೂರು ಪಿವಿಎಸ್ ಬೀಡಿ-ಮಂಗಳೂರು ಗಣೇಶ್ ಬೀಡಿ-ಮಂಗಳೂರು ಸಾಧು ಬೀಡಿ ಮಂಗಳೂರು ನರ್ಸಿಂಗ್ ಹೋಮ್ -ಮಂಗಳೂರು ಮಲ್ಲಿಗೆ ಮಂಗಳೂರು ಹೋಟೆಲ್ ತಾಜ್ಮಹಲ್ ಮಂಗಳೂರು ಹೋಟೆಲ್ ಮೋತಿಮಹಲ್ – ಮಂಗಳೂರು ಆಕಾಶವಾಣಿ – ಮಂಗಳೂರು ಟೆಲಿಫೋನ್ ಆಫೀಸ್ ಪಾಂಡೇಶ್ವರ ಮಂಗಳೂರು ಫೈರ್ ಸರ್ವಿಸ್ ಪಾಂಡೇಶ್ವರ ಮಂಗಳೂರು ಪೋಸ್ಟ್ ಆಫೀಸ್ ಪಾಂಡೇಶ್ವರ ಮಂಗಳೂರು ಕೆನರಾ ವಾಣಿಜ್ಯ ಸಂಸ್ಥೆ – ಮಂಗಳೂರು ಸೌಟ್ & ಗೈಡ್, ನಮ್ಮ ಮಂಗಳೂರಲ್ಲಿ ಹೆಚ್ಚಿನ ದೇವಸ್ಥಾನ ಕಾರ್ಖಾನೆ – ವಾಣಿಜ್ಯ ಬ್ಯಾಂಕ್ – ವಿದ್ಯಾ ಸಂಸ್ಥೆ ಪ್ರವಾಸೋದ್ಯಮ ಮೀನುಗಾರಿಕೆ ವ್ಯಾಪಾರ ಕೇಂದ್ರಗಳು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ಎಂದು ಪದ ಬಳಸಿ ಮಾತನಾಡುವುದು ರೂಢಿಯಲ್ಲಿದೆ. ಆದ್ದರಿಂದ ಮಂಗಳೂರು ಸೌಹಾರ್ದ ಸಹಕಾರಿ ಸಂಘವು ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರಿನ ಅಭಿಪ್ರಾಯದಂತೆ ನಮ್ಮ ಜಿಲ್ಲೆಗೆ “ಮಂಗಳೂರು ಜಿಲ್ಲೆಯೆಂದು” ನಾಮಕರಣ ಮಾಡಬೇಕಾಗಿ ವಿನಂತಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





