ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ, ಬೆಳ್ತಂಗಡಿ ಇದರ 28ನೇ ನೂತನ ಶಾಖೆಯು ಗುರುಪುರ-ಕೈಕಂಬದ ಅನಂತ ಮಹಲ್ ಕಾಂಪ್ಲೆಕ್ಸ್ನಲ್ಲಿ ಜೂನ್ 19ರಂದು ಉದ್ಘಾಟನೆಗೊಳ್ಳಲಿದೆ.
https://chat.whatsapp.com/FCEnlTkAKCC0MGPhXtX4i4
ನೂತನ ಶಾಖೆಯ ಕಚೇರಿಯ ಉದ್ಘಾಟನೆಯನ್ನು ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ಇದರ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಭದ್ರತಾ ಕೋಶವನ್ನು ಎಸ್ಆರ್ಆರ್ ಮಸಾಲ ಇಂಡಸ್ಟ್ರೀಸ್ ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಂದ್ರ ವೈ.ಸುವರ್ಣ, ಗಣಕ ಯಂತ್ರವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕೈಕಂಬ ಇದರ ಅಧ್ಯಕ್ಷ ವಿನೋದ್ ಮಾಡ ಅವರು ಉದ್ಘಾಟಿಸಲಿದ್ದಾರೆ. ನಿರಖು ಠೇವಣಿ ಪತ್ರವನ್ನು ಹೊಟೇಲ್ ಶ್ರೀರಾಮ್ ಕೈಕಂಬದ ಮಾಲಕ ಎಂ.ಹರಿರಾವ್, ಉಳಿತಾಯ ಖಾತೆ ಪುಸ್ತಕವನ್ನು ಗಂಜಿಮಠ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಾಲತಿ ಎಂ. ವಿತರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಬಿಲ್ಲವ ಸಮಾಜ ಸೇವಾ ಸಂಘ, ಗುರುಪುರ ಇದರ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್, ಉದ್ಯಮಿಗಳಾದ ರೋಮನ್ಸ್ ಬೇಸಿಲ್ ಲೋಬೋ, ಗೋಪಾಲಕೃಷ್ಣಕೆ., ಎಂ.ಎಫ್.ಮುಸ್ತಫಾ, ಸತೀಶ್ಚಂದ್ರ ಇರುವೈಲು ಪಾಣಿಲ, ಕಟ್ಟಡದ ಮಾಲಕ ರಾಜೇಶ್ ಪೈ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್, ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಕಂದಾವರ ಇದರ ಅಧ್ಯಕ್ಷ ದಿನೇಶ್, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮಳಲಿ ಇದರ ಅಧ್ಯಕ್ಷ ಕೇಶವ ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಮುಂತಾದವರು ಆಗಮಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

