ಮಂಗಳೂರು: ಚುನಾವಣೆಯಲ್ಲಿ ಚಲಾಯಿಸಲ್ಡುವ ಪ್ರತಿಯೊಂದು ಮತವೂ ಬಹು ಅಮೂಲ್ಯವಾದುದು ಎಂಬುದು ಎಲ್ಲ ಮತದಾನ ಪ್ರಕ್ರಿಯೆಗಳಲ್ಲೂ ಕೇಳಿ ಬರುವ ಮಾತು. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲೂ ಈ ಮಾತು ದೃಢಪಟ್ಟಿದೆ. ತಮಿಳುನಾಡಿನ ಸಹಕಾರ ಸಚಿವರಾಗಿದ್ದ ಕೆ.ಆರ್. ಪೆರಿಯಕುರುಪ್ಪನ್ ಅವರು ಕೇವಲ ಒಂದು ಮತದಿಂದ ಸೋತು ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಂಡಿರುವುದು ಐತಿಹಾಸಿಕ ದಾಖಲೆ ಎನಿಸಿದೆ.
https://chat.whatsapp.com/FCEnlTkAKCC0MGPhXtX4i4
ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಘೋಷಣೆಗೆ ಮೊದಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರದಲ್ಲಿತ್ತು. ಆ ಪಕ್ಷದ ಕೆ.ಆರ್. ಪೆರಿಯಕುರುಪ್ಪನ್ ಅವರು ಸಹಕಾರ ಸಚಿವರಾಗಿದ್ದರು. ಅವರ ಎದುರಾಳಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶ್ರೀನಿವಾಸ ಸೇತುಪತಿ ಆರ್. ಕೇವಲ ಒಂದೇ ಮತದ ಅಂತರದಲ್ಲಿ ಪೆರಿಯಕುರುಪ್ಪನ್ ಅವರನ್ನು ಸೋಲಿಸಿದರು. ತಿರುಪತ್ಪೆತೂರು ವಿಧಾನಸಭಾ ಕ್ಷೇತ್ರದಲ್ಲಿ ಪೆರಿಯಕುರುಪ್ಪನ್ 83,374 ಮತಗಳನ್ನು ಪಡೆದರೆ, ಸೇತುಪತಿ 83,375 ಮತಗಳನ್ನು ಪಡೆದು ವಿಜಯಿಯಾದರು.




