ತುಮಕೂರು: ಸನ್ರೈಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಕ್ಯಾತ್ಸಂದ್ರ ತುಮಕೂರು ಇದರ ಪ್ರಥಮ ಶಾಖೆಯನ್ನು ಕೊರಟಕೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಎಲೆರಾಂಪುರದ ಹನುಮಂತನಾಥ ಸ್ವಾಮಿಗಳ ಪಾದಪೂಜೆ ನಡೆಸಲಾಯಿತು. ಕೊರಟಗೆರೆ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೆಂಪಣ್ಣ, ಕೋಲಾರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಶಾಖೆಯ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿಜಯ್ ಸಿ.ಪಿ, ಉಪಾಧ್ಯಕ್ಷರಾದ ಅಶೋಕ್ ಕುಮಾರ್ ವೈಷ್ಣವ್, ನಿರ್ದೇಶಕರುಗಳಾದ ನಾಗರಾಜು, ರಾಜಕುಮಾರ, ಚಂದ್ರಶೇಖರ್, ಆನಂದ್, ರೂಪಾ ಧನಂಜಯ್, ವಿದ್ಯಾವತಿ ಸಂಪತ್ ಕುಮಾರ್, ಶಾಂತಕುಮಾರ್, ಶಾಂತರಾಜು ಭಾಗವಹಿಸಿದ್ದರು.
ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿನಿ ಸಹಕಾರ ಗೀತೆ ಹಾಡಿದರು. ಸಂಸ್ಥೆಯ ಧ್ಯೇಯ ಉದ್ದೇಶಗಳ ಬಗ್ಗೆ ಹಾಗೂ ಹೊಸ ಶಾಖೆ ತೆರೆಯುವುದರ ಬಗ್ಗೆ ಅಧ್ಯಕ್ಷರಾದ ವಿಜಯ್ ಸಿ.ಪಿ ಸವಿಸ್ತಾರವಾದ ಮಾಹಿತಿ ನೀಡಿದರು. ಜಿಲ್ಲಾ ಸೌಹಾರ್ದ ಅಧಿಕಾರಿಗಳಾದ ಉಮೇಶ್, ರವಿಕುಮಾರ್ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

