ಕುಂದಾಪುರ: ಕುಂದಾಪುರ ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 2025-26ರಿಂದ 2029-30ರ ತನಕದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎಸ್. ಸಚ್ಚಿದಾನಂದ ಚಾತ್ರ, ಉಪಾಧ್ಯಕ್ಷರಾಗಿ ವಿವೇಕ್ ಯು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಇದಕ್ಕೆ ಮೊದಲು ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ನಿರ್ವಚನಾಧಿಕಾರಿ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಸಹಾಯಕ ನಿರ್ದೇಶಕರಾದ ವೇಣುಗೋಪಾಲ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಎಸ್.ಸಚ್ಚಿದಾನಂದ ಚಾತ್ರ , ವಿವೇಕ್ ಯು, ಬಿ ಕುಷ್ಠ ನಾಯ್ಕ , ಗಾಯತ್ರಿ ಕಾರಂತ್, ಸುಪ್ರೀತ್ ಎಸ್ ಚಾತ್ರ, ಪ್ರಭಾಕರ ಪೈ, ಪಿ. ಸುಬ್ರಾಯ ಹೆಬ್ಬಾರ್, ನಟರಾಜ್ ಹೆಚ್ , ನವೀನ್ ಚಾತ್ರ , ನಾಗೇಶ್ ರಾವ್ , ರವೀಂದ್ರ ಕನ್ನಂತ, ಮಹಿಳಾ ಮೀಸಲು ಸ್ಥಾನದಿಂದ ಅನಿತಾ ಶಾಸ್ತ್ರಿ ಸುಮಿತ್ರಾ ಬಾಯಿ, ಪರಿಶಿಷ್ಟ ಜಾತಿಯಿಂದ ಟಿ.ರಾಮ, ಪರಿಶಿಷ್ಟ ಪಂಗಡದಿಂದ ಶರಶ್ಚಂದ್ರ ನಾಯ್ಕ್, ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ಚಂದ್ರಕಾಂತ್ ಖಾರ್ವಿ, ಪುಪ್ಪಾ ಶೇಟ್ ಕೆ ಇವರುಗಳು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ಚುನಾವಣೆ: ಸಂಘದ ಆಡಳಿತ ಮಂಡಳಿ ಸಭೆ ಜರಗಿ ಮುಂದಿನ ಅವಧಿಗೆ ಸಂಘದ ಅಧ್ಯಕ್ಷರಾಗಿ ಎಸ್.ಸಚ್ಚಿದಾನಂದ ಚಾತ್ರ, ಉಪಾಧ್ಯಕ್ಷರಾಗಿ ವಿವೇಕ್ ಯು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಟಿ ರಾಮ ಇವರ ಅಧ್ಯಕ್ಷತೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಅಡಿಗ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಅಧ್ಯಕ್ಷರಾದ ಎಸ್. ಸಚ್ಚಿದಾನಂದ ಚಾತ್ರ ಅವರು, ಸಂಘದ ಅಭಿವೃದ್ಧಿಗೆ ಠೇವಣಾತಿದಾರರು ಹಾಗೂ ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿಸಿದ ಸದಸ್ಯರು ಮುಖ್ಯ ಕಾರಣರಾಗಿದ್ದಾರೆ. ಅವರ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಠೇವಣಾತಿದಾರರು ಹಾಗೂ ಸಾಲಗಾರರನ್ನು ಸಂಘದ ಸಿಬ್ಬಂದಿಗಳು ಸಮಾನದೃಷ್ಟಿಯಲ್ಲಿ ಅವರೊಂದಿಗೆ ವ್ಯವಹರಿಸುವಂತೆ ನೋಡಿಕೊಳ್ಳಬೇಕು ಹಾಗೂ ನೂತನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರ ಸಂಘದ ಅಭಿವೃದ್ದಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

