ಬೀದರ್: ಇಲ್ಲಿನ ಡೆವಲಪ್ಮೆಂಟ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಆರನೇ ವಾರ್ಷಿಕ ಮಹಾಸಭೆ ಶಿವಕುಮಾರ ಶಟಕಾರ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸರಸ್ವತಿ ಮತ್ತು ಲಕ್ಷ್ಮೀ ಪೂಜೆಯ ನಂತರ ರವೀಂದ್ರನಾಥ ಮುಳಗೆ ಸದಸ್ಯರನ್ನು ಸ್ವಾಗತಿಸಿದರು. ಅಗಲಿದ ಸದಸ್ಯರಾದ ನಂದಕುಮಾರ್ ಸಂತಪೂರ್ಕರ್ ಹಾಗೂ ಇತರ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಸೂಚಿಯನ್ನು ರವೀಂದ್ರನಾಥ್ ಮುಳಗೆ ಓದಿದರು. ಕಳೆದ ವರ್ಷದ ವಾರ್ಷಿಕ ಮಹಾಸಭೆಯ ನಡವಳಿಕೆ ಹಾಗೂ ಪ್ರಸಕ್ತ ಸಾಲಿನ ವರದಿಯನ್ನು ಓದಿ ತಿಳಿಸಲಾಯಿತು. ವರದಿ ಸಾಲಿನಲ್ಲಿ 651 ಸದಸ್ಯರಿಂದ 60 ಜನ ಹೊಸ ಸದಸ್ಯ ಸೇರಿಸಿಕೊಂಡು ವರ್ಷಾಂತಕ್ಕೆ 702 ಜನ ಸದಸ್ಯರು ಇದ್ದು, ರೂಪಾಯಿ 43.93 ಲಕ್ಷ ರೂ. ಶೇರು ಬಂಡವಾಳ, 508.38 ಲಕ್ಷ ರೂ. ಠೇವಣಿ ಸಂಗ್ರಹಿಸಲಾಗಿದ್ದು 411.50 ಲಕ್ಷ ರೂ. ಸಾಲ ವಿತರಿಸಲಾಗಿದೆ. 190.01 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ಒಟ್ಟು ವ್ಯವಹಾರ 920 ಲಕ್ಷ ರೂ. ಇದ್ದು 11.80 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಮಹಾಸಭೆಯಲ್ಲಿ ಬೀದರ್ ಜ್ಞಾನಸುಧಾ ವಿದ್ಯಾಲಯದ ಪ್ರಿನ್ಸಿಪಾಲ್ ಸುನೀತಾ ಸ್ವಾಮಿ, ರಾಜಶೇಖರ್ ತಂಬಾಕೆ ಹಾಗೂ ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿಜಯಕುಮಾರ್ ಜೈನ್, ಪೂರ್ಣಿಮಾ ಜಾರ್ಜ್, ಮಂಜುಳಾ ಮುಳಗೆ, ಸಂಜು ಕುಮಾರ್, ವೇಣುಗೋಪಾಲ್, ಶರಣಬಸಪ್ಪ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ಸ್ವಾಮಿ ಮತ್ತು ಸದಸ್ಯರಾದ ಪಿ.ನಾರಾಯಣ, ರವಿ ಹಾಲಳ್ಳಿ ರವೀಂದ್ರನಾಥ್, ದಯಾನಂದ ಸ್ಮಾಮಿ, ಸದಸ್ಯರು, ಹಾಗೂ ಸಿಬ್ಬಂದಿಯವರು ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



