Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಪೂರ್ಣಾನಂದ ಸಹಕಾರಿ 300 ಕೋಟಿ ರೂ. ವ್ಯವಹಾರ, ಶೇ.11 ಡಿವಿಡೆಂಡ್
    News

    ಶ್ರೀ ಪೂರ್ಣಾನಂದ ಸಹಕಾರಿ 300 ಕೋಟಿ ರೂ. ವ್ಯವಹಾರ, ಶೇ.11 ಡಿವಿಡೆಂಡ್

    adminBy adminSeptember 16, 2025

    30 ಲಕ್ಷ ರೂ.ಗೂ ಅಧಿಕ ಲಾಭ; ಅಧ್ಯಕ್ಷ ಗಣೇಶ್‌ ಶೆಣೈ ಮಾಹಿತಿ

    ಮಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು, 300 ಕೋಟಿ ರೂ. ಅಧಿಕ ವ್ಯವಹಾರ ದಾಖಲಿಸುವ ಮುಖೇನ ಅಪೂರ್ವ ಸಾಧನೆ ಮಾಡಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 30 ಲಕ್ಷ ರೂ.ಗೂ ಮೀರಿ ಲಾಭ ಗಳಿಸಿದ್ದು, ಸದಸ್ಯರಿಗೆ ಈ ಬಾರಿ ಶೇ.11 ಡಿವಿಡೆಂಡ್ ನೀಡಲಿದೆ ಎಂದು ಶ್ರೀ ಪೂರ್ಣಾನಂದ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ ಘೋಷಿಸಿದರು.

    https://chat.whatsapp.com/EbVKVnWB6rlHT1mWtsgbch
    ಭಾನುವಾರ ನಡೆದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್‌ ಶೆಣೈ ಅವರು, ನಮ್ಮ ಸಂಸ್ಥೆಯು 70 ಲಕ್ಷ ರೂ. ಶೇರು ಬಂಡವಾಳ, 35 ಕೋಟಿ ರೂ. ಠೇವಣಿಗಳು ಇದ್ದು, 28 ಕೋಟಿ ರೂ. ಸಾಲ ನೀಡಲಾಗಿದೆ. ಏಳು ಕೋಟಿ ರೂ. ವಿನಿಯೋಗಗಳು, 37 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಶ್ರೀ ಪೂರ್ಣಾನಂದ ಪ್ರೊಡಕ್ಟ್ ವ್ಯಾಪಾರ ಒಳಗೊಂಡಂತೆ 300 ಕೋಟಿ ರೂ. ಮೀರಿ ವ್ಯವಹಾರ ದಾಖಲಿಸಿದೆ ಎಂದು ಅಂಕಿಅಂಶ ನೀಡಿದರು. ದೇಶ, ವಿದೇಶಗಳಲ್ಲಿರುವ ಸಂಸ್ಥೆ ಸದಸ್ಯರು ಗೂಗಲ್ ಪೇ ಮುಖೇನ ನಿರಖು ಠೇವಣಿ, ಶೇರುಗಳನ್ನು ಪಡೆಯುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಬೆಂಬಲಿಸುತ್ತಿರುವುದು ನಂಬಿಕೆ, ಪ್ರೀತಿ ವಿಶ್ವಾಸಗಳ ಪ್ರತೀಕ ಎಂದರು.

    ಕಶೆಕೋಡಿ ಶ್ರೀಲಕ್ಷ್ಮೀ ವೆಂಕಟ್ರಮಣ ದೇಗುಲದ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ಸುಧಾಕರ ಶೆಣೈಯವರು ದೀಪ ಪ್ರಜ್ವಲನಗೈದು ಮಹಾಸಭೆ ಉದ್ಘಾಟಿಸಿದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಸೌಹಾರ್ದ, ಸಾಮರಸ್ಯ ಹಾಗೂ ಕೃತಜ್ಞತೆಗಳು ಬದುಕಿನಲ್ಲಿ ಬಹಳ ಮುಖ್ಯವೆಂಬ ಅಮೂಲ್ಯ ಪಾಠವನ್ನು ಸಹಕಾರಿ ಸಂಸ್ಥೆಗಳು ಬೋಧಿಸುತ್ತಿರುವುದು ಸ್ತುತ್ಯರ್ಹ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಅಪಾರವೆಂಬ ಸಿದ್ಧಾಂತದೊಂದಿಗೆ ದುಡಿಯಬೇಕು. ಈ ದೇಶದ ಪ್ರಧಾನ ಆಸ್ತಿಯಾಗಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದಿನ ಪೈಪೋಟಿ ಯುಗದಲ್ಲಿ ಬ್ಯಾಂಕ್‌ ಮತ್ತಿತರ ಹಣಕಾಸು ಸಂಸ್ಥೆಗಳ ಜತೆ ಪೈಪೋಟಿ ನಡೆಸಲು ಸಹಕಾರಿ ಸಂಸ್ಥೆಗಳಿಗೆ ಪ್ರತ್ಯೇಕ ವಿಶಿಷ್ಟತೆಗಳಿರಬೇಕು ಮತ್ತು ಈ ತರದ ವಿಶಿಷ್ಟತೆ ಶ್ರೀ ಪೂರ್ಣಾನಂದ ಸಂಸ್ಥೆಗಿದೆ ಎಂದು ಪ್ರಶಂಸಿಸಿದರು. 

    ಸಂಸ್ಕಾರ ಅತ್ಯುತ್ತಮ
    ಶ್ರೀ ಪೂರ್ಣಾನಂದ ಸಹಕಾರಿಯ ಹಿರಿಯ ಸದಸ್ಯರಾದ ಸಂಜೀವ ಪಾಟೀಲ್‌ ಕುಡುಪು, ರಾಮಚಂದ್ರ ಸಾಮಂತ್ ಕಾರವಾರ, ಕೇಶವ ಭಟ್, ಎಂ.ಸಿ.ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸುಧಾಕರ ಶೆಣೈ ಅವರನ್ನೂ ಗೌರವಿಸಲಾಯಿತು. ಶ್ರೀ ಪೂರ್ಣಾನಂದ ಸಂಸ್ಥೆಯ ಅಧ್ಯಕ್ಷ ನಿರ್ದೇಶಕರ ಸಹಿತ ಸಿಬ್ಬಂದಿಗಳೆಲ್ಲರ ಸಂಪರ್ಕಶೀಲತೆ, ಸಂವಹನ ಸಂಸ್ಕಾರಗಳು ಅತ್ಯುತ್ತಮ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಉಜ್ವಲ ಭವಿಷ್ಯವಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ಕೇಶವ ಭಟ್ ಹೇಳಿದರು. ವರ್ಷದಿಂದ ವರ್ಷ ಪ್ರಗತಿಯ ಹಾದಿಯಲ್ಲಿ ದಾಪುಗಾಲಿಕ್ಕುತ್ತಿರುವ ಶ್ರೀ ಪೂರ್ಣಾನಂದ ಸಂಸ್ಥೆ ಮುಂದೊಂದು ದಿನ ಬ್ಯಾಂಕ್ ಆಗಿ ಕಂಗೊಳಿಸಬೇಕೆಂದು ಹಿರಿಯ ಸದಸ್ಯ ರಾಮಚಂದ್ರ ಸಾಮಂತ್ ಆಶಯ ವ್ಯಕ್ತಪಡಿಸಿದರು.

    ಪ್ರತಿಭೆಗಳಿಗೆ ಪುರಸ್ಕಾರ
    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಸಹಿತ ಅತ್ಯಧಿಕ ಅಂಕ ಪಡೆದ ಹಲವು ಪ್ರತಿಭೆಗಳು, ಕ್ರೀಡಾರಂಗ ಮತ್ತು ಚಿತ್ರಕಲಾ ರಂಗದಲ್ಲಿ ಮಿಂಚಿದ ಮಕ್ಕಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿರ್ದೇಶಕಿ ಗೀತಾ ರತ್ನಾಕ‌ರ್ ಪ್ರತಿಭೆಗಳ ಯಾದಿಯನ್ನು ಓದಿದರು. ಶೇರುಗಳ ಮೌಲ್ಯವರ್ಧನೆ, ಅನ್ಯಾನ್ಯ ಸಾಲ ಯೋಜನೆಗಳು ಮತ್ತಿತರ ವಿಚಾರವಾಗಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಶ್ರೀ ಪೂರ್ಣಾನಂದ ಸಹಕಾರಿಯ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ಕೆ.ಮೋಹನ್ ನಾಯಕ್, ಜಗದೀಶ ಶೆಣೈ, ರವೀಂದ್ರ ಪ್ರಭು, ಸದಾನಂದ ಪ್ರಭು, ಅರವಿಂದ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕಿ ಅನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಿ.ವಿಶ್ವನಾಥ್ ಕೆ. ಸಹಿತ ಅಗಲಿದ ಸದಸ್ಯರಿಗೆ ನುಡಿನಮನ ಸಲ್ಲಿಸಲಾಯಿತು. ಆರಂಭದಲ್ಲಿ ಸಂಸ್ಥೆಯ ಮಾರಾಟ ಅಧಿಕಾರಿ ಬಿ.ಉಪೇಂದ್ರಕುಮಾರ್ ಗಣಪತಿ ಸ್ತುತಿ ಮಾಡಿದರು. ಸಿಬ್ಬಂದಿ ಸುಜಾತ ಮತ್ತು ಉಷಾ ಸಹಕಾರಿ ಗೀತೆ ಹಾಡಿದರು. ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ ಪ್ರಸ್ತಾವಿಸಿದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹೃಷಿಕೇಶ್‌ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಹರಿಶ್ಚಂದ್ರ ಪ್ರಭು ವಂದಿಸಿದರು.

    ಸ್ವಂತ ಕಟ್ಟಡದಲ್ಲಿ ರಜತ ಸಂಭ್ರಮದ ಕನಸು
    2027ಕ್ಕೆ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ರಜತ ಮಹೋತ್ಸದ ಸಂಭ್ರಮ. ಆ ಕ್ಷಣಗಳನ್ನು ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ಆಚರಿಸಬೇಕೆಂಬ ಕನಸಿದೆ ಮತ್ತು ಕನಸಿನ ಸಾಕಾರಕ್ಕೆ ತುಂಬು ಪ್ರಯತ್ನಗಳು ಸಾಗಿವೆ. ಈ ನಿಟ್ಟಿನಲ್ಲಿ ಉತ್ತಮ ಕಟ್ಟಡದ ಲಭ್ಯತೆಗೆ ಸಹಕರಿಸಿ ಎಂದು ಅಧ್ಯಕ್ಷ ಗಣೇಶ್‌ ಶೆಣೈ ಸದಸ್ಯರಿಗೆ ಮನವಿ ಮಾಡಿದರು. ಪ್ರತಿವರ್ಷದಂತೆ ಈ ಬಾರಿಯೂ, ರಾಷ್ಟ್ರ ಸಂರಕ್ಷಣೆಯ ಕೈಂಕರ್ಯದಲ್ಲಿ ನಿರತ ದೇಶದ ಹೆಮ್ಮೆಯ ಸೇನಾಯೋಧರಿಗಾಗಿ ಶ್ರೀ ಪೂರ್ಣಾನಂದ ಸಹಕಾರಿಯು ವಿಶೇಷ ನಿಧಿಯನ್ನು ತನ್ನ ಬಜೆಟ್‌ನಲ್ಲಿ ಕಾದಿರಿಸಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Bhaskar Rai Kukkuvalli Ganesh Shenoy Poornananda Products Poornananda Vividhoddesha Souharda Sahakari Shree Poornananda Vividhoddesha Souharda Sahakari Sangha
    Previous Articleಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ 34.84 ಲಕ್ಷ ರೂ. ನಿವ್ವಳ ಲಾಭ
    Next Article ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ರೂ. 126.26 ಕೋಟಿ ವ್ಯವಹಾರ, ರೂ. 1.04 ಕೋಟಿ ನಿವ್ವಳ ಲಾಭ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.