ಪುತ್ತೂರು: ಪುತ್ತೂರಿನಲ್ಲಿ ಧಾನ್ಯದ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂದಿದ್ದು 2025-30ನೇ ಅವಧಿಗೆ ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಘದ ಕಚೇರಿಯಲ್ಲಿ ಮಂಗಳವಾರ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಶೋಭಾ ಎನ್.ಎಸ್. ಅವರ ಉಪಸ್ಥಿತಿಯಲ್ಲಿ ನಡೆಯಿತು. ನಿರ್ದೇಶಕರಾಗಿ ಅಜಿತ್ ಕುಮಾರ್, ಕೆ.ಸಂಜೀವ ನಾಯಕ್, ಕೆ.ಸಂತೋಷ್ ಕುಮಾರ್, ಚಂದ್ರಶೇಖರ ರಾವ್ ಬಪ್ಪಳಿಗೆ, ನಹುಷ ಪಿ.ವಿ., ಯು.ಪೂವಪ್ಪ, ರಾಜೇಶ್ ಬನ್ನೂರು, ಜಯರಾಜ್ ಯು., ಲೋಕೇಶ್ ಹೆಗ್ಡೆ, ಸುಧಾ ನಾಗೇಶ್ ರಾವ್ ಮತ್ತು ಎಂ.ನಾರಾಯಣ ನಾಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ ಆಯ್ಕೆಯಾದವರನ್ನು ಕಾರ್ಯದರ್ಶಿ ಯತೀಂದ್ರನಾಥ್ ಅಭಿನಂದಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

